|
ಮುಂಬಯಿ – ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ, ಆಧುನಿಕ ವೈದ್ಯರು ಮತ್ತು ಸಿಬ್ಬಂದಿಗೆ ರಜೆ ನೀಡಬಾರದು ಮತ್ತು ರಜೆಯಲ್ಲಿರುವ ಅಧಿಕಾರಿಗಳನ್ನು ಕರ್ತವ್ಯದ ಮೇಲೆ ಹಾಜರು ಇರುವಂತೆ ಹೇಳಿ. ಪ್ರತಿಯೊಂದು ರಕ್ತನಿಧಿಯಲ್ಲಿ ಸಾಕಷ್ಟು ರಕ್ತದ ದಾಸ್ತಾನು ಲಭ್ಯವಿರಲಿ, ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ವೀರೇಂದ್ರ ಸಿಂಗ್ ಅವರು ಆರೋಗ್ಯ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ‘ಔಷಧಿಗಳ ಕೊರತೆ ಉಂಟಾಗಲು ಬಿಡಬೇಡಿ. ರಕ್ತದ ದಾಸ್ತಾನು ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ಸಾಕಷ್ಟು ಔಷಧಿಗಳನ್ನು ಇರಿಸಿ. ಆಮ್ಲಜನಕ, ವೆಂಟಿಲೇಟರ್ಗಳ ಜೊತೆಗೆ ತೀವ್ರ ನಿಗಾ ಘಟಕಗಳನ್ನು ಸಿದ್ಧವಾಗಿಡಿ. ರಾಷ್ಟ್ರೀಯ ಆರೋಗ್ಯ ಮಿಷನ್, ಆಯುಷ್ ಸಚಿವಾಲಯ ಸೇರಿದಂತೆ ಎಲ್ಲಾ ಇತರ ಇಲಾಖೆಗಳೂ ಸಹ ಎಚ್ಚರದಿಂದಿರಿ’, ಎಂದು ಆರೋಗ್ಯ ಕಾರ್ಯದರ್ಶಿ ವೀರೇಂದ್ರ ಸಿಂಗ್ ಆನ್ಲೈನ್ ಸಭೆ ನಡೆಸಿ ಹೇಳಿದರು. ಅದರಲ್ಲಿ, ಸೇನೆಯ ಹಿರಿಯ ಅಧಿಕಾರಿಗಳ ಜೊತೆಗೆ, ನಿರ್ದೇಶಕರು, ಉಪ ನಿರ್ದೇಶಕರು, ಜಿಲ್ಲಾ ಶಸ್ತ್ರಚಿಕಿತ್ಸಕರು, ವೈದ್ಯಕೀಯ ಕಾಲೇಜುಗಳ ಡೀನ್ಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.