ಸುಪ್ರೀಂ ಕೋರ್ಟ್ ನ ಆದೇಶ!
ನವದೆಹಲಿ – ಭಾರತದಲ್ಲಿ ಇರುವ ರೋಹಿಂಗ್ಯಾ ನಿರಾಶ್ರಿತರು ಭಾರತೀಯ ಕಾನೂನಿನ ಪ್ರಕಾರ ವಿದೇಶಿಯರೆಂದು ಕಂಡುಬಂದರೆ, ಅವರನ್ನು ಗಡೀಪಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ‘ದೇಶದಲ್ಲಿ ಪ್ರವೇಶಿಸಿದ ನಿರಾಶ್ರಿತರಿಗಾಗಿ ಸಂಯುಕ್ತ ರಾಷ್ಟ್ರವು (ವಿಶ್ವಸಂಸ್ಥೆಯು) ನಿರಾಶ್ರಿತರಿಗೆ ಸಂಬಂಧಿಸಿದ ಹೈ ಕಮಿಷನರ್ ಜಾರಿ ಮಾಡಿದ ಗುರುತಿನ ಚೀಟಿಗಳು ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ’, ಎಂದು ನ್ಯಾಯಾಲಯವು ಹೇಳಿದೆ. ದೇಶದಲ್ಲಿ ರೋಹಿಂಗ್ಯಾಗಳ ಜೀವನ ಪರಿಸ್ಥಿತಿಗಳಿಗೆ ಸಂಬಂಧಿಸಿದ ಮತ್ತು ಅವರನ್ನು ಗಡೀಪಾರು ಮಾಡುವಂತೆ ಒತ್ತಾಯಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಹೀಗೆ ಆದೇಶವನ್ನು ನೀಡಿದೆ.