|
ಮುಂಬಯಿ – ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಮುಂಬಯಿಯ ಕರಾವಳಿ ಪ್ರದೇಶದ ಭದ್ರತೆ ಹಾಗೂ ಕಾವಲನ್ನು ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಮತ್ತು ಡ್ರೋನ್ಗಳ ಮೂಲಕ ನಿಗಾ ಇರಿಸಲಾಗಿದೆ. ಅದರ ಅಡಿಯಲ್ಲಿ ಮುಂಬಯಿ ಪೊಲೀಸರು ಭಾರತೀಯ ಕರಾವಳಿ ಕಾವಲು ಪಡೆಯ ಸಹಯೋಗದೊಂದಿಗೆ ಕಡಲತೀರಗಳು, ಬಂದರುಗಳು, ಹಡಗುಕಟ್ಟೆಗಳು ಮತ್ತು ಜಲಮಾರ್ಗಗಳು ಸೇರಿದಂತೆ ಎಲ್ಲಾ ಕರಾವಳಿ ಪ್ರದೇಶಗಳಲ್ಲಿ ಕಾವಲು ಹೆಚ್ಚಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್ಗಳ ಮೂಲಕ ಎಲ್ಲೆಡೆ ನಿಗಾ ಇರಿಸಲಾಗುತ್ತಿದೆ.
ಮುಂಬಯಿ ಪೊಲೀಸರು ‘ಸಾಗರಿ ಕವಚ’ ಎಂಬ ವ್ಯಾಪಕ ಕರಾವಳಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಅದರ ಅಡಿಯಲ್ಲಿ ಕಡಲ ಕಾವಲನ್ನು ಹೆಚ್ಚಿಸಲಾಗಿದೆ. ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಮತ್ತು ದೋಣಿಗಳ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ಗಮನವಿಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ಅನಧಿಕೃತ ವ್ಯಕ್ತಿ ಸಮುದ್ರ ಮಾರ್ಗವಾಗಿ ಪ್ರವೇಶಿಸದಂತೆ ಮೀನುಗಾರಿಕಾ ದೋಣಿಗಳ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ತಪಾಸಣೆಯನ್ನು ಹೆಚ್ಚಿಸಲಾಗಿದೆ.