Muslims Attack Hindus Asking Religion : ಬಿಹಾರದಲ್ಲಿ ಧರ್ಮ ಕೇಳಿ ಹಿಂದೂಗಳ ಮೇಲೆ ಹಲ್ಲೆ

ದರ್ಭಾಂಗ (ಬಿಹಾರ) – ಪಹಲ್ಗಾಮನಲ್ಲಿ ಇಸ್ಲಾಮಿ ಭಯೋತ್ಪಾದಕರು ಹಿಂದೂಗಳಿಗೆ ಅವರ ಧರ್ಮವನ್ನು ಕೇಳಿ ಗುಂಡು ಹಾರಿಸಿದ್ದರು, ಈಗ ಬಿಹಾರದ ದರ್ಭಾಂಗದಲ್ಲಿ ಮುಸಲ್ಮಾನರು ಹಿಂದೂಗಳಿಗೆ ಧರ್ಮ ಕೇಳಿ ಕೋಲು ಮತ್ತು ಕತ್ತಿಗಳಿಂದ ಹಲ್ಲೆ ಮಾಡಿರುವುದು ಬಹಿರಂಗವಾಗಿದೆ.

1. ದರ್ಭಾಂಗದ ಬಹೇಡಾ ಪೋಖರ ಬಳಿ ಮೇ 6 ರ ಸಂಜೆ 7 ಗಂಟೆ ಸುಮಾರಿಗೆ ಮುಸ್ಲಿಂ ಯುವಕರು ಕೋಲುಗಳು, ಈಟಿಗಳು, ಕತ್ತಿಗಳು, ಕಬ್ಬಿಣದ ಸರಳುಗಳು ಮತ್ತು ಪಿಸ್ತೂಲುಗಳನ್ನು ಹಿಡಿದು ನಿಂತಿದ್ದರು. ಅಲ್ಲಿಂದ ಹೋಗುತ್ತಿದ್ದ ಹಿಂದೂಗಳಿಗೆ ಅವರು ಮೊದಲು ಅವರ ಧರ್ಮವನ್ನು ಕೇಳಿದರು ಮತ್ತು ನಂತರ ಅವರ ಮೇಲೆ ಮಾರಣಾಂತಿಕ ದಾಳಿ ಮಾಡಿದರು. ಈ ಘಟನೆಯಲ್ಲಿ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

2. ಈ ಘಟನೆಯ ಬಗ್ಗೆ ಲಕ್ಷ್ಮಣ ಕುಮಾರ ಯಾದವ, ಮನೋಜ ಕುಮಾರ ಯಾದವ, ಸೋನು ಯಾದವ, ದಿನೇಶ ಯಾದವ ಮತ್ತು ಸಂಜಯ ಯಾದವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

3. ಪೊಲೀಸರು 21 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಕುರ್ಬಾನ್ ಖುರೇಶಿ, ಇರ್ಫಾನ್ ಖುರೇಶಿ, ಸಲ್ಮಾನ್ ಇಬ್ರಾನ್ ಖುರೇಶಿ, ಪಪ್ಪು ಖುರೇಶಿ, ಮೇರಾಜ್, ರಿಯಾಜ್, ಆಸಿಫ್, ಇಮ್ತಿಯಾಜ್, ಸರ್ಫರಾಜ್, ಎಜಾಜ್, ಶಹನವಾಜ್, ದರ್ಜಿ ರಿಜ್ವಾನ್ ಮುಂತಾದವರು ಸೇರಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 4 ಜನರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಇದೆ.

ಸಂಪಾದಕೀಯ ನಿಲುವು

ಧರ್ಮಾಂಧರ ಉದ್ಧಟತನವನ್ನು ನೋಡಿರಿ! ಈ ಬಗ್ಗೆ ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು, ಪ್ರಗತಿಪರರು ಏಕೆ ಏನೂ ಮಾತನಾಡುತ್ತಿಲ್ಲ?