ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ನಿಮಿತ್ತ ಪಣಜಿಯಲ್ಲಿ (ಗೋವಾ) ಪತ್ರಿಕಾಗೋಷ್ಠಿ

ಪಣಜಿ (ಗೋವಾ) – ಮೇ 17 ರಿಂದ 19 ರವರೆಗೆ ಸನಾತನ ಸಂಸ್ಥೆಯ ವತಿಯಿಂದ ಫರ್ಮಾಗುಡಿ, ಫೊಂಡಾದ ಗೋವಾ ಇಂಜಿನಿಯರಿಂಗ ಕಾಲೇಜಿನ ‘ಇನ್ಫಿನಿಟಿ ಮೈದಾನ’ದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಕೇವಲ ಧಾರ್ಮಿಕ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಜಾಗೃತಿಯ ಮಹೋತ್ಸವವಾಗಲಿದೆ. 23 ದೇಶಗಳ ಪ್ರತಿಷ್ಠಿತ ಗಣ್ಯರು, ವಿವಿಧ ಸಂಪ್ರದಾಯಗಳ ಸಂತರು-ಮಹಂತರು, ದೇವಸ್ಥಾನಗಳ ಟ್ರಸ್ಟಿಗಳು ಮತ್ತು 25 ಸಾವಿರಕ್ಕೂ ಹೆಚ್ಚು ಸಾಧಕರು ಹಾಗೂ ಭಕ್ತರ ಸಹಭಾಗಿತ್ವ ಮತ್ತು ಯಜ್ಞಯಾಗಾದಿಗಳಿಂದ ಈ ಮಹೋತ್ಸವ ಕಾಶಿ, ಉಜ್ಜಯಿನಿ, ಅಯೋಧ್ಯೆಯಂತೆ ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಲಿದೆ. ಇದರಿಂದ ಅಭಿವೃದ್ಧಿಗೂ ವೇಗ ಸಿಗಲಿದೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಅವರು ಇಂದು ಪಣಜಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಲ್ಲಿನ ‘ಹೋಟೆಲ್ ಮನೋಶಾಂತಿ’ಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ‘ಆರ್ಟ್ ಆಫ್ ಲಿವಿಂಗ್’ನ ಶ್ರೀ. ಸಂತೋಷ ಘೋಡಗೆ, ಸಾಂಸ್ಕೃತಿಕ ನ್ಯಾಸದ ಶ್ರೀ. ಜಯಂತ ಮಿರಿಂಗಕರ, ಅಂತರರಾಷ್ಟ್ರೀಯ ಬಜರಂಗ ದಳದ ಶ್ರೀ. ನಿತಿನ ಫಳದೇಸಾಯಿ, ಕುಂಡಯಿ ತಪೋಭೂಮಿಯ ಪದ್ಮನಾಭ ಸಂಪ್ರದಾಯದ ಶ್ರೀ. ಸುಜನ ನಾಯಿಕ, ಬ್ರಾಹ್ಮಣ ಮಹಾಸಂಘದ ಶ್ರೀ. ರಾಜ ಶರ್ಮಾ, ಜಗದ್ಗುರು ರಾಮಾನಂದಾಚಾರ್ಯ ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜರ ಅನುಯಾಯಿ ಶ್ರೀ. ಅನಿಲ ನಾಯಕ, ಗೋಮಂತಕ ಮಂದಿರ ಮಹಾಸಂಘದ ಶ್ರೀ. ಜಯೇಶ ಥಳಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಯುವರಾಜ ಗಾವಕರ ಉಪಸ್ಥಿತರಿದ್ದರು.
ದೇವಾಲಯಗಳು ದೇಶದ ಆರ್ಥಿಕತೆಯ ಆತ್ಮ ಮತ್ತು ಬೆನ್ನೆಲುಬು!
ಶ್ರೀ. ರಾಜಹಂಸ ಅವರು ಮಾತು ಮುಂದುವರೆಸಿ, ಕಾಶಿ ವಿಶ್ವನಾಥ ಕಾರಿಡಾರ ಮತ್ತು ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಉತ್ತರ ಪ್ರದೇಶಕ್ಕೆ ಪ್ರತಿ ವರ್ಷ ಅಂದಾಜು 22 ಸಾವಿರ ಕೋಟಿ ರೂಪಾಯಿಗಳ ಆದಾಯ ಬರುತ್ತಿದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ 7 ನೇ ಸ್ಥಾನದಲ್ಲಿದ್ದ ಉತ್ತರ ಪ್ರದೇಶ ಈಗ ಅಗ್ರಸ್ಥಾನಕ್ಕೆ ತಲುಪಿದೆ. ಕೇವಲ ಆಧ್ಯಾತ್ಮಿಕ ಪ್ರವಾಸೋದ್ಯಮದಿಂದ ರಾಜ್ಯದ ಆರ್ಥಿಕತೆಗೆ ಹೇಗೆ ದೊಡ್ಡ ಉತ್ತೇಜನ ಸಿಗಬಹುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹಿಂದೆ ‘ದಕ್ಷಿಣ ಕಾಶಿ’ ಎಂದು ಕರೆಯಲ್ಪಡುತ್ತಿದ್ದ ಗೋವಾ ಕೂಡ ಖಂಡಿತವಾಗಿಯೂ ಇಂತಹ ಲಾಭವನ್ನು ಪಡೆಯಬಹುದು. ದೇವಸ್ಥಾನಗಳು ಅಥವಾ ಧಾರ್ಮಿಕ ಕಾರ್ಯಗಳನ್ನು ಮೂಢನಂಬಿಕೆ ಎಂದು ಭಾವಿಸುವವರು ದೇವಸ್ಥಾನಗಳು ದೇಶದ ಆರ್ಥಿಕತೆಯ ಆತ್ಮ ಮತ್ತು ಬೆನ್ನೆಲುಬು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂದು ಜಾಗತಿಕ ಮಟ್ಟದ ಕೈಗಾರಿಕಾ ನಗರಗಳು ನಾಶವಾಗುತ್ತಿರುವಾಗ, ಉಜ್ಜಯಿನಿ, ತಿರುಪತಿ, ರಾಮೇಶ್ವರಂ, ಕಾಶಿಯಂತಹ ತೀರ್ಥಕ್ಷೇತ್ರಗಳನ್ನು ಹೊಂದಿರುವ ನಗರಗಳು ಸಾವಿರಾರು ವರ್ಷಗಳಿಂದ ಉಳಿದುಕೊಂಡಿವೆ, ಹಾಗೆಯೇ ಅವುಗಳ ಸುತ್ತಮುತ್ತಲಿನ ಪ್ರದೇಶವೂ ಅಭಿವೃದ್ಧಿ ಹೊಂದಿದೆ.
ಈ ಮೂರು ದಿನಗಳ ಮಹೋತ್ಸವಕ್ಕಾಗಿ ದೇಶ-ವಿದೇಶಗಳಿಂದ 25 ಸಾವಿರಕ್ಕೂ ಹೆಚ್ಚು ಭಕ್ತರು, ಸಾಧಕರು, ಪ್ರತಿಷ್ಠಿತ ವ್ಯಕ್ತಿಗಳು ಗೋವಾಕ್ಕೆ ಆಗಮಿಸಲಿದ್ದಾರೆ. ಅವರೆಲ್ಲರೂ ಇಲ್ಲಿ 3 ರಿಂದ 5 ದಿನಗಳ ಕಾಲ ವಾಸಿಸುತ್ತಾರೆ, ಪ್ರವಾಸ ಮಾಡುತ್ತಾರೆ, ಸ್ಥಳೀಯ ವಾಹನಗಳನ್ನು ಬಳಸುತ್ತಾರೆ, ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ, ಹೋಟೆಲ್, ಮಾರುಕಟ್ಟೆ, ರೆಸ್ಟೋರೆಂಟ್ಗಳು, ಪ್ರವಾಸಿ ತಾಣಗಳ ಲಾಭ ಪಡೆಯುತ್ತಾರೆ. ಇದರಿಂದ ಎಲ್ಲಾ ಸ್ಥಳೀಯ ವ್ಯವಹಾರಗಳು ಮತ್ತು ಉದ್ಯೋಗಗಳಿಗೆ ಉತ್ತೇಜನ ಸಿಗುತ್ತದೆ. ಈ ಎಲ್ಲಾ ಪ್ರಕ್ರಿಯೆಯಿಂದ ಸಂಗ್ರಹವಾಗುವ ಜಿಎಸ್ಟಿ (ವಸ್ತು ಮತ್ತು ಸೇವಾ ತೆರಿಗೆ) ಯಿಂದ ರಾಜ್ಯ ಸರಕಾರಕ್ಕೂ ದೊಡ್ಡ ಆದಾಯ ದೊರೆಯಲಿದೆ.
ಮಹೋತ್ಸವದಿಂದ ಉಜ್ವಲ ಆಧ್ಯಾತ್ಮಿಕ ಭವಿಷ್ಯಕ್ಕಾಗಿ ಶಂಖನಾದ!
ಇತರ ವ್ಯವಹಾರಗಳಿಗೆ ಹೋಲಿಸಿದರೆ ಆಧ್ಯಾತ್ಮಿಕ ಪ್ರವಾಸೋದ್ಯಮವು ಸುರಕ್ಷಿತ ಮತ್ತು ಶಾಶ್ವತ ಅಭಿವೃದ್ಧಿಯೊಂದಿಗೆ ಸಮಾಜದಲ್ಲಿನ ನೈತಿಕ ಮೌಲ್ಯಗಳನ್ನು ಪುನಃಸ್ಥಾಪಿಸುವ ಮಾಧ್ಯಮವಾಗಿದೆ. ಈ ಮಹೋತ್ಸವದ ಮೂಲಕ ದೇವಸ್ಥಾನಗಳ ಸಂಪ್ರದಾಯ, ಜಾನಪದ ಕಲೆ, ಸಾಂಸ್ಕೃತಿಕ ಗುರುತು, ಹಾಗೆಯೇ ಸಾಧನೆ, ಆಧ್ಯಾತ್ಮಿಕ ಚಿಂತನೆ ಮತ್ತು ರಾಷ್ಟ್ರನಿಷ್ಠ ಮೌಲ್ಯಗಳ ಜಾಗೃತಿ ಮೂಡಿಸಲಾಗುವುದು. ಒಟ್ಟಾರೆಯಾಗಿ ‘ಶಂಖನಾದ ಮಹೋತ್ಸವ’ವು ಉಜ್ವಲ ಆಧ್ಯಾತ್ಮಿಕ ಭವಿಷ್ಯಕ್ಕಾಗಿ ಶಂಖನಾದವಾಗಿದೆ. ಈ ಮಹೋತ್ಸವದ ಕುರಿತು ಹೆಚ್ಚಿನ ಮಾಹಿತಿಗಾಗಿ SanatanRashtraShankhnad.in ಈ ವೆಬ್ಸೈಟ್ಗೆ ಭೇಟಿ ನೀಡಿ ಎಂದು ಶ್ರೀ. ರಾಜಹಂಸ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಕರೆ ನೀಡಿದರು.
1 ಸಾವಿರ ವರ್ಷಗಳ ಹಿಂದಿನ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನ!![]() ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ರಾಜಹಂಸ ಅವರು, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ 1 ಸಾವಿರ ವರ್ಷಗಳ ಹಿಂದಿನ ಸೌರಾಷ್ಟ್ರದ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಪಡೆಯುವ ಅಪರೂಪದ ಅವಕಾಶ ಎಲ್ಲರಿಗೂ ಸಿಗಲಿದೆ. ಈ ಶಿವಲಿಂಗವನ್ನು ವಿಗ್ರಹ ಭಂಜಕ ಘಜನಿ ತುಂಡು ಮಾಡಿದ್ದನು ನಂತರ ಅಗ್ನಿಹೋತ್ರ ಪಂಥದ ಸಾಧಕರು ಅದನ್ನು ನೋಡಿಕೊಂಡರು. ‘ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಆಶೀರ್ವಾದದಿಂದ ಈಗ ಈ ಶಿವಲಿಂಗವನ್ನು ಮಹೋತ್ಸವದ ಸ್ಥಳದಲ್ಲಿ ಜನರ ದರ್ಶನಕ್ಕಾಗಿ ಇಡಲಾಗುವುದು. ಹಾಗೆಯೇ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗುವುದು. |