Shahbaz Sharif On Operation Sindoor : ‘ನಾವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ !’ – ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಷರೀಫ್

ಪಾಕಿಸ್ತಾನದ ಪ್ರಧಾನಿ ಶಾಹಬಾಜ್ ಷರೀಫ್ ಅವರ ಬೊಗಳೆ ಮಾತು !

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ನೆಲದಲ್ಲಿ ೫ ಕಡೆ ಹೇಡಿಗಳ ದಾಳಿ ನಡೆಸಲಾಗಿದೆ. ಈ ಯುದ್ಧ ಸನ್ನಿಹಿತ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಂಪೂರ್ಣ ಹಕ್ಕು ಪಾಕಿಸ್ತಾನಕ್ಕಿದೆ ಮತ್ತು ಪ್ರತ್ಯುತ್ತರ ನೀಡಲಾಗುತ್ತಿದೆ. ಪಾಕಿಸ್ತಾನದ ಸೈನ್ಯ ಮತ್ತು ರಾಷ್ಟ್ರವು ಶತ್ರುಗಳನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ತಿಳಿದಿದೆ. ಅವರ ದುಷ್ಟ ಉದ್ದೇಶಗಳನ್ನು ನಾವು ಎಂದಿಗೂ ಯಶಸ್ವಿಯಾಗಲು ಬಿಡುವುದಿಲ್ಲ. ಪಾಕಿಸ್ತಾನದ ಸೈನ್ಯ ಮತ್ತು ಜನತೆ ಸಂಪೂರ್ಣವಾಗಿ ಒಗ್ಗಟ್ಟಾಗಿದ್ದಾರೆ ಮತ್ತು ದೇಶದ ಮನೋಬಲ ಹೆಚ್ಚಿದೆ ಎಂದು ಪ್ರಧಾನಿ ಶಾಹಬಾಜ್ ಷರೀಫ್ ಅವರು ಭಾರತದ ಕಾರ್ಯಾಚರಣೆಯ ನಂತರ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಶಾಹಬಾಜ್ ಷರೀಫ್ ಅವರು ಮೇ ೭ ರ ಬೆಳಿಗ್ಗೆ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯನ್ನು ಕರೆದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಪ್ರತ್ಯುತ್ತರ ನೀಡಲೇಬೇಕು, ಎಂದರೆ ಆಗ ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶಮಾಡಲು ಭಾರತಕ್ಕೆ ಉತ್ತಮ ಕಾರಣ ಸಿಗುತ್ತದೆ !

ಎರಡೂ ದೇಶಗಳು ಹೆಚ್ಚು ಮಿಲಿಟರಿ ಸಂಯಮವನ್ನು ಕಾಪಾಡಿಕೊಳ್ಳಬೇಕು ! – ವಿಶ್ವಸಂಸ್ಥೆಯ ಕರೆ

ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ದುಜಾರಿಕ್ ಅವರು ಮೇ ೬ ರ ರಾತ್ರಿ ನೀಡಿದ ಹೇಳಿಕೆಯಲ್ಲಿ, ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಅವರು ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಗಳ ಬಗ್ಗೆ ತೀವ್ರ ಚಿಂತಿತರಾಗಿದ್ದಾರೆ. ಅವರು ‘ಎರಡೂ ದೇಶಗಳು ಹೆಚ್ಚು ಮಿಲಿಟರಿ ಸಂಯಮವನ್ನು ಕಾಪಾಡಿಕೊಳ್ಳಬೇಕು. ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವು ಯಾರಿಗೂ ಸಹಿಸಲಾಗದು, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ವಿಶ್ವಸಂಸ್ಥೆ ಅಂದರೆ ಒಂದು ಬೇದರು ಬೊಂಬೆ. ಆದ್ದರಿಂದ ಅದರ ಕಡೆಯಿಂದ ಇಂತಹ ಹೇಳಿಕೆಗಳ ಹೊರತಾಗಿ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ೭೮ ವರ್ಷಗಳಿಂದ ಕಾಶ್ಮೀರ ಸಮಸ್ಯೆಯು ವಿಶ್ವಸಂಸ್ಥೆಯಲ್ಲಿ ನೆನೆಗುದಿಗೆ ಬಿದ್ದಿದ್ದರೂ ಅದು ಏನನ್ನೂ ಮಾಡದ ಕಾರಣದಿಂದಲೇ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು !