ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಸಂಯಮ ವಹಿಸಿದ್ದಾರೆ!

ಅಮೇರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರ ಹೇಳಿಕೆ

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಸಂಯಮ ವಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. 2019 ರಲ್ಲಿಯೂ ಅವರು ಇದೇ ರೀತಿಯ ಒಂದು ಪರಿಸ್ಥಿತಿಯನ್ನು ನೋಡಿದರು. ಪ್ರಧಾನಿ ಮೋದಿ ಅವರು ಆ ಸಮಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿವೇಕವನ್ನು ತೋರಿಸಿದರು ಎಂದು ಅಮೇರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬೋಲ್ಟನ್ ಅವರು ಮಾತು ಮುಂದುವರೆಸುತ್ತಾ, ಭಯೋತ್ಪಾದಕರ ನೆಲೆಗಳ ಮೇಲೆ ನಿಖರವಾದ ದಾಳಿ ನಡೆಸಿದರೆ ಭಾರತಕ್ಕೆ ಲಾಭವಾಗುತ್ತದೆ. ಭಾರತದ ಪ್ರತೀಕಾರವು ದಾಳಿ ಮಾಡುವ ಗುಂಪಿನ ವಿರುದ್ಧ ಮತ್ತು ನಿಖರವಾಗಿದ್ದರೆ, ಭಾರತವು ಯಾವುದೇ ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿಲ್ಲ ಎಂದು ತೋರಿಸುತ್ತದೆ. ಇದರಿಂದ ಪಾಕಿಸ್ತಾನಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅವಕಾಶ ಸಿಗುತ್ತದೆ. ಅದಕ್ಕೂ ಮೊದಲು, ಭಾರತವು ಭಯೋತ್ಪಾದಕ ಸಂಘಟನೆಗಳನ್ನು ನಿಯಂತ್ರಿಸಲು ಮತ್ತು ದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ತಡೆಯಲು ಪಾಕಿಸ್ತಾನಕ್ಕೆ ಹೇಳಬೇಕು. ಭಯೋತ್ಪಾದಕರನ್ನು ನಿಯಂತ್ರಿಸಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವಂತೆ ಭಾರತವು ಕೂಡ ಚೀನಾಗೆ ಹೇಳಬೇಕು ಎಂದವರು ಸಲಹೆ ನೀಡಿದರು.