
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಇಲಾಖೆಯ ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ ಗೋಸಂವರ್ಧನೆ ಮತ್ತು ಹೈನುಗಾರಿಕೆಯನ್ನು ಉತ್ತೇಜಿಸಲು ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಅವರು ರಾಜ್ಯದ ಗೋರಕ್ಷಣಾ ಕೇಂದ್ರಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನಿರ್ದಿಷ್ಟ ಯೋಜನೆಯನ್ನು ಸಿದ್ಧಪಡಿಸಲು ಆದೇಶಿಸಿದರು. ಅವರು ಸರಕಾರಿ ಕಟ್ಟಡಗಳ ಮೇಲೆ ಸಗಣಿಯಿಂದ ತಯಾರಿಸಿದ ನೈಸರ್ಗಿಕ ಬಣ್ಣವನ್ನು ಬಳಸಲು ಉತ್ತೇಜನ ನೀಡುವ ಬಗ್ಗೆ ಸೂಚನೆ ನೀಡಿದರು, ಹಾಗೂ ಹೈನುಗಾರಿಕೆ ಕ್ಷೇತ್ರವನ್ನು ಸಬಲಗೊಳಿಸುವ ಅಗತ್ಯಕ್ಕೆ ಒತ್ತು ನೀಡಿದರು.
1. ಮುಖ್ಯಮಂತ್ರಿಗಳು ವಿಭಾಗೀಯ ಮಟ್ಟದಲ್ಲಿ ದೇಸಿ ಹಸುಗಳ ಸಂವರ್ಧನೆಗಾಗಿ ಸ್ಪರ್ಧೆಗಳನ್ನು ಆಯೋಜಿಸುವ ಮತ್ತು ಅತ್ಯುತ್ತಮ ಗೋಶಾಲೆಗಳನ್ನು ಗೌರವಿಸುವ ಪ್ರಸ್ತಾಪವನ್ನು ಮಂಡಿಸಿದರು.
2. ಬರೇಲಿಯ ಆವನಲಾದಲ್ಲಿ ಸಾವಯವ ಗೊಬ್ಬರ ಮತ್ತು ಗೋಮೂತ್ರ ಸಂಸ್ಕರಣಾ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.
3. ರಾಜ್ಯಾದ್ಯಂತ 7 ಸಾವಿರದ 693 ಗೋಶಾಲೆಗಳಲ್ಲಿ ಸುಮಾರು 11 ಲಕ್ಷ 49 ಸಾವಿರ ಹಸುಗಳಿಗೆ ಆಶ್ರಯ ನೀಡಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಆಶ್ರಯ ಕೇಂದ್ರಗಳಲ್ಲಿ ನಿಯಮಿತವಾಗಿ ಪಶುವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಹುಲ್ಲು ಮತ್ತು ನೀರಿನ ಪೂರೈಕೆಯನ್ನು ಖಚಿತಪಡಿಸುವಂತೆ ನಿರ್ದೇಶನ ನೀಡಿದರು.
ಅಖಿಲೇಶ ಯಾದವ ಅವರಿಂದ ಮುಖ್ಯಮಂತ್ರಿಗಳ ಕುರಿತು ಹುರುಳಿಲ್ಲದ ಟೀಕೆ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಅವರು ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಟೀಕಿಸಿ, ಅವರು ತೆಗೆದುಕೊಂಡ ನಿರ್ಧಾರಗಳನ್ನು ‘ಗೋಬರ ನಾಮಾ’ ಎಂದು ಕರೆದು ಗೇಲಿ ಮಾಡಿದ್ದಾರೆ. (ಅಖಿಲೇಶ ಯಾದವ ಅವರಿಗೆ ಮುಸ್ಲಿಂ ಓಲೈಕೆಯ ಅಭ್ಯಾಸವಾಗಿದೆ. ಆದ್ದರಿಂದ ಅವರು ಪ್ರತಿಯೊಂದು ವಿಷಯವನ್ನು ಇಸ್ಲಾಮೀಕರಣಗೊಳಿಸುವುದರಲ್ಲಿ ಧನ್ಯತೆ ಕಾಣುತ್ತಾರೆ ! – ಸಂಪಾದಕರು)