ನರೇಂದ್ರ ಮೋದಿ ನಮಗೆ ಸ್ವರ್ಗವನ್ನು ನೀಡಿದರೆ, ಅದಕ್ಕಿಂತ ಉತ್ತಮವಾದುದು ಇನ್ನೇನಿರಬಹುದು! – ಪಾಕಿಸ್ತಾನ ಸಚಿವ

ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವ ಸೈಯದ್ ಮುಸ್ತಫಾ ಕಮಾಲ್ ಅವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ನೀವು ಯಾರನ್ನಾದರೂ ಸಾವಿನ ಹೆಸರಿನಲ್ಲಿ ಹೆದರಿಸಲು ಬಯಸಿದರೆ; ಸಾವೇ ಅವನನ್ನು ಆಕರ್ಷಿಸಲು ಪ್ರಾರಂಭಿಸಿದರೆ, ನೀವು ಏನು ಮಾಡುತ್ತೀರಿ? ನಾವೆಲ್ಲರೂ ಒಂದು ದಿನ ಸಾಯಬೇಕಾಗಿದೆ. ನರೇಂದ್ರ ಮೋದಿ ನಮಗೆ ಸ್ವರ್ಗವನ್ನು ನೀಡಿದರೆ, ಇದಕ್ಕಿಂತ ಉತ್ತಮವಾದುದು ಇನ್ನೇನು ಇರಬಹುದು?, ಎಂದು ‘ಮುತ್ತಾಹಿದಾ ಕೌಮಿ ಮೂವ್‌ಮೆಂಟ್ ಪಾಕಿಸ್ತಾನ್’ ಪಕ್ಷದ ನಾಯಕ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವ ಸೈಯದ್ ಮುಸ್ತಫಾ ಕಮಾಲ್ ಹೇಳಿದ್ದಾರೆ.

ಪರಮಾಣು ಆಯುಧ ಬಳಕೆಯ ಬೆದರಿಕೆ ಹಾಕಿದ ಮುಸ್ತಫಾ ಕಮಾಲ್, ನಾವು ತಯಾರಿಸಿದ ಪರಮಾಣುಗಳು ‘ಶಬ್-ಎ-ಬರಾತ್’ಗೆ (ಮುಸ್ಲಿಮರ ಹಬ್ಬ) ಪಟಾಕಿ ಸಿಡಿಸಲು ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ನಾನು ಪಾಕಿಸ್ತಾನಿ ಸೈನ್ಯಕ್ಕೆ ಹೇಳುತ್ತೇನೆ, ಭಾರತೀಯ ಸೈನ್ಯವನ್ನು ಬರಲು ಬಿಡಿ, ಅವರನ್ನು ನಗರಗಳಿಗೆ ಪ್ರವೇಶಿಸಲು ಬಿಡಿ. ಈ 25 ಕೋಟಿ ಜನರು ಮತ್ತು ನಮ್ಮ ಸಂಪೂರ್ಣ ವ್ಯವಸ್ಥೆಯು ಭಾರತೀಯ ಸೈನ್ಯವನ್ನು ಹಿಮ್ಮೆಟ್ಟಿಸುತ್ತದೆ. ಭಾರತವು ಯುದ್ಧದ ಬೆದರಿಕೆಗಳನ್ನು ಬೇರೆಯವರಿಗೆ ಹಾಕಲಿ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಪಾಕಿಸ್ತಾನಿಯರನ್ನು ಸ್ವರ್ಗಕ್ಕೆ ಅಲ್ಲ, ನರಕಕ್ಕೆ ತಳ್ಳಲಿದೆ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು! ಸ್ವರ್ಗಕ್ಕೆ ಹೋಗಲು ಪಾಕಿಸ್ತಾನಿಯರು ಯಾವುದೇ ಪುಣ್ಯವನ್ನು ಮಾಡದ ಕಾರಣ ಅವರ ಸ್ಥಾನ ನರಕದಲ್ಲಿರುತ್ತದೆ!