Illegal Madrassas Bulldozed : ಉತ್ತರಪ್ರದೇಶದ ನೇಪಾಳ ಗಡಿಯಲ್ಲಿನ ಅಕ್ರಮ ಮದರಸಾಗಳು ಮತ್ತು ಮಸೀದಿಗಳ ಮೇಲೆ ಕ್ರಮ

೮೦ ಮದರಸಾಗಳಿಗೆ ಬೀಗ

ಪಿಲಿಭೀತ್ (ಉತ್ತರಪ್ರದೇಶ) – ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರಕಾರವು ನೇಪಾಳ ಗಡಿಯ ಮೇಲೆ ಮತ್ತೆ ಕ್ರಮ ಕೈಗೊಂಡಿದ್ದು, ಅನೇಕ ಮದರಸಾಗಳಿಗೆ ಬೀಗ ಹಾಕಿದೆ, ಮತ್ತು ಕೆಲವುಗಳ ಮೇಲೆ ಬುಲ್ಡೋಜರ್ ಕ್ರಮ ಕೈಗೊಂಡು ಅವುಗಳನ್ನು ಕೆಡವಲಾಗಿದೆ. ಹಾಗೆಯೇ ಕೆಲವು ಮಸೀದಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ.

೧. ಯೋಗಿ ಆದಿತ್ಯನಾಥ ಸರಕಾರವು ನೇಪಾಳದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಒಂದು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ನೇಪಾಳ ಗಡಿಯ ೧೫ ಕಿ.ಮೀ. ವ್ಯಾಪ್ತಿಯಲ್ಲಿನ ಅತಿಕ್ರಮಣಗಳಿಗೆ ಬೀಗ ಹಾಕಲಾಗುತ್ತಿದೆ. ಸೂಚನೆ ನೀಡಿದರೂ ಅತಿಕ್ರಮಣವನ್ನು ತೆಗೆಯದಿದ್ದರೆ ಬುಲ್ಡೋಜರ್ ವನ್ನು ಬಳಸಲಾಗುತ್ತಿದೆ.

೨. ನೇಪಾಳ ಗಡಿಗೆ ಹೊಂದಿಕೊಂಡಿರುವ ಶ್ರಾವಸ್ತಿ ಜಿಲ್ಲೆಯಲ್ಲಿ ೬೮ ಮದರಸಾಗಳನ್ನು ಮುಚ್ಚಲಾಗಿದೆ. ಆಡಳಿತ ಮಂಡಳಿಯು ೧೬೪ ಮದರಸಾಗಳನ್ನು ಖಾಲಿ ಮಾಡಿಸಿದೆ. ಅನೇಕ ಮದರಸಾಗಳಿಗೆ ನಿರಂತರವಾಗಿ ನೋಟಿಸ್‌ಗಳನ್ನು ಕಳುಹಿಸಲಾಗುತ್ತಿದೆ. ಬಲರಾಮಪುರ ಜಿಲ್ಲೆಯಲ್ಲಿ ೧೬ ಅಕ್ರಮ ಮದರಸಾಗಳನ್ನು ಮುಚ್ಚಲಾಗಿದೆ. ಇನ್ನೂ ೧೮ ಧಾರ್ಮಿಕ ಸ್ಥಳಗಳು ಅಕ್ರಮವಾಗಿರುವುದು ಬೆಳಕಿಗೆ ಬಂದಿದ್ದು, ಅವುಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ಈದ್ಗಾ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ.

೩. ಸಿದ್ಧಾರ್ಥನಗರ ಜಿಲ್ಲೆಯಲ್ಲಿ ೧೭ ಅಕ್ರಮ ಮದರಸಾಗಳು ಮತ್ತು ೪ ಅಕ್ರಮ ಧಾರ್ಮಿಕ ಸ್ಥಳಗಳು ಪತ್ತೆಯಾಗಿವೆ. ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಬಹರೈಚ್‌ನಲ್ಲಿ ೬ ಮದರಸಾಗಳಿಗೆ ಬೀಗ ಹಾಕಲಾಗಿದೆ.

೪. ಮಹಾರಾಜಗಂಜ್‌ನಲ್ಲಿ ಅಕ್ರಮವೆಂದು ಕಂಡುಬಂದ ೩೪ ಮದರಸಾಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವುಗಳಲ್ಲಿ ೨ ಅನ್ನು ಬುಲ್ಡೋಜರ್‌ನಿಂದ ಕೆಡವಲಾಗಿದೆ. ಪಿಲಿಭೀತ್‌ನಲ್ಲಿಯೂ ೭ ಮದರಸಾಗಳಿಗೆ ನೋಟಿಸ್ ಕಳುಹಿಸಲಾಗಿದೆ. ಇಲ್ಲಿ ೭೭ ಅಕ್ರಮ ಧಾರ್ಮಿಕ ಸ್ಥಳಗಳೂ ಕಂಡುಬಂದಿವೆ.

೫. ಉತ್ತರಪ್ರದೇಶವು ನೇಪಾಳದೊಂದಿಗೆ ಉದ್ದವಾದ ಗಡಿಯನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿನ ಗಡಿ ಪ್ರದೇಶಗಳಲ್ಲಿ ಮಸೀದಿಗಳು ಮತ್ತು ಮದರಸಾಗಳು ವೇಗವಾಗಿ ಹೆಚ್ಚಾಗಿವೆ. ಇವುಗಳಲ್ಲಿ ಅನೇಕ ಮಸೀದಿಗಳು ಮತ್ತು ಮದರಸಾಗಳು ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ. ಇದರಿಂದಾಗಿ ಅನೇಕ ಕಡೆ ಗ್ರಾಮಗಳ ಜನಸಂಖ್ಯೆಯೂ ಬದಲಾಗಿದೆ.

ಸಂಪಾದಕೀಯ ನಿಲುವು

ಇಷ್ಟು ಅಕ್ರಮ ಮದರಸಾಗಳು ಮತ್ತು ಮಸೀದಿಗಳು ನಿರ್ಮಾಣವಾಗುವವರೆಗೆ ಆಡಳಿತ ಮಂಡಳಿ ಮಲಗಿತ್ತೇ? ಸಂಬಂಧಪಟ್ಟವರ ಮೇಲೂ ಕ್ರಮ ಕೈಗೊಳ್ಳಬೇಕು!