India Can Block Kabul River : ಭಾರತವು ಪಾಕಿಸ್ತಾನಕ್ಕೆ ಹರಿಯುವ ಅಫ್ಘಾನಿಸ್ತಾನದ ಕಾಬೂಲ್ ನದಿಯ ನೀರನ್ನು ಸಹ ತಡೆಯಬಹುದು !

ಪಾಕಿಸ್ತಾನದ ಭೂ-ರಾಜಕೀಯ ವ್ಯವಹಾರಗಳ ತಜ್ಞರ ದಾವೆ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದ ಉದ್ದೇಶ ಯುದ್ಧ ಮಾಡುವುದಲ್ಲ, ಬದಲಿಗೆ ಪಾಕಿಸ್ತಾನದ ನೀರಿನ ಸರಬರಾಜನ್ನು ನಿಲ್ಲಿಸುವುದು ಆಗಿತ್ತು. ಭಾರತದ ಇತ್ತೀಚಿನ ಧೈರ್ಯಶಾಲಿ ನಿರ್ಧಾರದ ಹಿಂದಿನ ನಿಜವಾದ ಉದ್ದೇಶ ಪಾಕಿಸ್ತಾನದ ನೀರನ್ನು ತಡೆಯುವುದಾಗಿದೆ. ಭಾರತವು ಕೇವಲ ಚೀನಾಬ್, ಝೇಲಂ ಮತ್ತು ಸಿಂಧೂ ನದಿಗಳನ್ನು ಮಾತ್ರ ತಡೆಯಲು ಬಯಸುತ್ತಿಲ್ಲ, ಬದಲಾಗಿ ಅಫ್ಘಾನಿಸ್ತಾನದಿಂದ ಹರಿಯುವ ಕಾಬೂಲ್ ನದಿಯನ್ನು ಸಹ 12 ಸ್ಥಳಗಳಲ್ಲಿ ತಡೆಯಲು ಬಯಸುತ್ತಿದೆ ಎಂದು ಪಾಕಿಸ್ತಾನದ ಭೂ-ರಾಜಕೀಯ ವ್ಯವಹಾರಗಳ ತಜ್ಞ ಡಾ. ಹುಮಾ ಬಕಾಯಿ ಅವರು ‘ಜಿಯೋ ನ್ಯೂಸ್’ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಮೀದ್ ಮೀರ್ ಅವರೊಂದಿಗೆ ಮಾತನಾಡುತ್ತಾ ದಾವೆ ಮಾಡಿದರು. ಆದಾಗ್ಯೂ, ಭಾರತ ಸರಕಾರವು ಅಂತಹ ದಾವೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಹಲ್ಗಾಮ್ ನ ಭಯೋತ್ಪಾದಕ ದಾಳಿಯ ನಂತರ ಭಾರತೀಯ ರಾಯಭಾರಿಗಳು ತಾಲಿಬಾನ್ ಸರಕಾರದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಆದ್ದರಿಂದ ಈ ಅನುಮಾನ ಮೂಡಿದೆ.

ಡಾ. ಹುಮಾ ಬಕಾಯಿ ಅವರು ಮಾತು ಮುಂದುವರೆಸಿ, ಪಾಕಿಸ್ತಾನವು ವಿಶ್ವಸಂಸ್ಥೆಗೆ ಹೋಗಲು ಬಯಸಿದರೆ, ಅದು ನೀರಿನ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ಹೇಳಿದರು.

ಭಾರತವು ಅಫ್ಘಾನಿಸ್ತಾನದ ನದಿಗಳನ್ನು ತಡೆಯುತ್ತದೆಯೇ ?

1. ಕಾಬೂಲ್ ನದಿಯು ಅಫ್ಘಾನಿಸ್ತಾನದಲ್ಲಿ ಹುಟ್ಟುತ್ತದೆ ಮತ್ತು ಪಾಕಿಸ್ತಾನವನ್ನು ಪ್ರವೇಶಿಸಿದ ನಂತರ ಅದು ಖೈಬರ್ ಪಖ್ತುಂಖ್ವಾದ ಅನೇಕ ಭಾಗಗಳಿಗೆ ಜೀವನಾಡಿಯಾಗುತ್ತದೆ.

2. ಈ ನದಿಯ ನೀರು ಪೇಶಾವರ, ನೌಶೇರಾ, ಅಟೋಕ ಮತ್ತು ಸಿಂಧೂ ನದಿಯ ಸಂಗಮದವರೆಗೆ ತಲುಪುತ್ತದೆ. ಇದು ಅಲ್ಲಿನ ಕೃಷಿ ಮತ್ತು ನೀರಿನ ಸರಬರಾಜಿನ ಮುಖ್ಯ ಮೂಲವಾಗಿದೆ.

3. ಪಾಕಿಸ್ತಾನವು ನದಿಗಳ ವಿಷಯದಲ್ಲಿ ಅಫ್ಘಾನಿಸ್ತಾನದೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ, ಆದ್ದರಿಂದ ಇದು ಭಾರತಕ್ಕೆ ಒಂದು ದೊಡ್ಡ ಅವಕಾಶವಾಗಿದೆ.

4. ಭಾರತವು ಕಾಬೂಲ್ ನದಿಗೆ 12 ಅಣೆಕಟ್ಟುಗಳನ್ನು ನಿರ್ಮಿಸಿದೆ, ಇದರ ಲಾಭ ಈಗ ಗೋಚರಿಸುತ್ತಿದೆ. ಈ ನದಿಯ ನೀರು ನಿರ್ವಹಣಾ ಯೋಜನೆಗಳಲ್ಲಿ ಭಾರತವು ಅಫ್ಘಾನಿಸ್ತಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಗಳ ಮೂಲಕ ಭಾರತವು ಅಫ್ಘಾನಿಸ್ತಾನಕ್ಕೆ ಇಂಧನ ಮತ್ತು ನೀರಾವರಿ ಕ್ಷೇತ್ರದಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ಈ ಅಣೆಕಟ್ಟುಗಳ ನೀರನ್ನು ತಡೆದರೆ, ಅಫ್ಘಾನಿಸ್ತಾನದ ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುವ ನೀರಿನ ಸರಬರಾಜು ನಿಲ್ಲಬಹುದು. ಇದರ ಮೂಲಕ ಭಾರತವು ಒಂದು ಗುಂಡನ್ನೂ ಹಾರಿಸದೆ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಬಹುದು.

5. ಕಾಬೂಲ್ ನದಿಯ ನೀರಿನ ಹರಿವನ್ನು ನಿಯಂತ್ರಿಸಿದರೆ, ಪಾಕಿಸ್ತಾನದ ಪಶ್ತೂನ್ ಪಟ್ಟಿಯಲ್ಲಿ ಮತ್ತಷ್ಟು ಅಸ್ಥಿರತೆ ಉಂಟಾಗುತ್ತದೆ, ಅಲ್ಲಿ ಈಗಾಗಲೇ ಸೈನ್ಯದ ವಿರುದ್ಧ ತೀವ್ರ ಅಸಮಾಧಾನವಿದೆ.

6. ಪಾಕಿಸ್ತಾನದ ಮತ್ತೊಂದು ಸಮಸ್ಯೆ ಎಂದರೆ ಅವರಲ್ಲಿ ನೀರನ್ನು ಸಂಗ್ರಹಿಸಲು ಯಾವುದೇ ಮೂಲಗಳಿಲ್ಲ ಮತ್ತು ಭಾರತವು ಅಫ್ಘಾನಿಸ್ತಾನದಲ್ಲಿ ಶಾಹತೂತ ಅಣೆಕಟ್ಟು, ಸಲ್ಮಾ ಅಣೆಕಟ್ಟು ಮುಂತಾದ ಯೋಜನೆಗಳನ್ನು ಈಗಾಗಲೇ ನಿರ್ಮಿಸಿದೆ.