Bangladesh Chinmoy Das Arrest : ಚಿನ್ಮಯ್ ದಾಸ್ ಅವರನ್ನು ಮತ್ತೆ ಬಂಧಿಸಿದ ಬಾಂಗ್ಲಾದೇಶ

ವಕೀಲ ಸೈಫುಲ್ ಇಸ್ಲಾಂನ ಹತ್ಯೆಯ ಆರೋಪ

ಇಸ್ಕಾನ್ ನಾಯಕ ಚಿನ್ಮಯ ಕೃಷ್ಣ ದಾಸ್

ಚಿತ್ ಗಾವ್ (ಬಾಂಗ್ಲಾದೇಶ) – ಇಸ್ಕಾನ್ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಂಧಿಸಲು ಇಲ್ಲಿನ ನ್ಯಾಯಾಲಯ ಆದೇಶಿಸಿದ ನಂತರ ಅವರನ್ನು ಮತ್ತೆ ಬಂಧಿಸಲಾಗಿದೆ. ಚಿತ್ ಗಾವ್ ನ್ಯಾಯಾಲಯದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ನ ಹತ್ಯೆಯ ಪ್ರಕರಣದಲ್ಲಿ ಈ ಬಂಧನ ಮಾಡಲಾಗಿದೆ. ಕಳೆದ ವರ್ಷ ನವೆಂಬರ್ 7 ರಂದು ನ್ಯಾಯಾಲಯದ ಆವರಣದ ಹೊರಗೆ ಸೈಫುಲ್ ನನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಪ್ರಕರಣದಲ್ಲಿ ಇದುವರೆಗೆ 51 ಜನರನ್ನು ಬಂಧಿಸಲಾಗಿದ್ದು, ಅವರಲ್ಲಿ 21 ಜನರು ಇನ್ನೂ ಜೈಲಿನಲ್ಲಿದ್ದಾರೆ.

ಈ ಹಿಂದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ಜೈಲಿನಲ್ಲಿದ್ದ ಚಿನ್ಮಯ್ ದಾಸ್ ಅವರಿಗೆ ಇತ್ತೀಚೆಗೆ ಢಾಕಾ ಹೈಕೋರ್ಟ್ ಜಾಮೀನು ನೀಡಿತ್ತು. ಚಿನ್ಮಯ್ ದಾಸ್ ಕಳೆದ 5 ತಿಂಗಳಿನಿಂದಲೂ ದೇಶದ್ರೋಹದ ಆರೋಪದ ಅಡಿಯಲ್ಲಿ ಜೈಲಿನಲ್ಲಿದ್ದರು.