Pakistan Muslims Against War : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ, ಜನರು ಈ ಯುದ್ಧದಿಂದ ದೂರವಿರಬೇಕು!

ಪಾಕಿಸ್ತಾನದ ಪ್ರಸಿದ್ಧ ಲಾಲ್ ಮಸೀದಿಯ ಮೌಲಾನಾದಿಂದ ಕರೆ!

ಮೌಲಾನಾ ಅಬ್ದುಲ್ ಗಾಜಿ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ)

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ, ಜನರು ಈ ಯುದ್ಧದಿಂದ ದೂರವಿರಬೇಕು ಎಂದು ಇಲ್ಲಿನ ಪ್ರಸಿದ್ಧ ಲಾಲ್ ಮಸೀದಿಯ ಮೌಲಾನಾ ಸಲಹೆ ನೀಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮೌಲಾನಾ ಅಬ್ದುಲ್ ಗಾಜಿ ಅವರು ಮಸೀದಿಗೆ ಬಂದ ಜನರನ್ನು ‘ನೀವು ಭಾರತದ ವಿರುದ್ಧ ಹೋರಾಡುತ್ತೀರಾ? ಭಾರತದ ವಿರುದ್ಧ ಹೋರಾಡುವವರು ಕೈ ಎತ್ತಿ’ ಎಂದು ಕೇಳುತ್ತಿದ್ದಾರೆ. ಆದರೆ ಅಲ್ಲಿ ನೆರೆದಿದ್ದ ಒಬ್ಬ ವ್ಯಕ್ತಿಯೂ ಕೈ ಎತ್ತಲಿಲ್ಲ. ನಂತರ ಮೌಲಾನಾ ಈ ಜನರನ್ನು ಉದ್ದೇಶಿಸಿ, ‘ನೀವು ವಿವೇಕಿಗಳು. ಇದು ಧರ್ಮಯುದ್ಧವಲ್ಲ, ಇದು ಎರಡು ದೇಶಗಳ ನಡುವಿನ ಯುದ್ಧ, ಆದ್ದರಿಂದ ಈ ಯುದ್ಧದಲ್ಲಿ ಸರಕಾರವೇ ಹೋರಾಡುತ್ತದೆ. ಧರ್ಮಕ್ಕಾಗಿ ಯುದ್ಧ ಅವಶ್ಯಕ; ಆದರೆ ಎರಡೂ ದೇಶಗಳ ನಡುವಿನ ಈ ಯುದ್ಧದಿಂದ ಯಾವುದೇ ಲಾಭವಾಗುವುದಿಲ್ಲ. ಭಾರತದಲ್ಲಿ ಮುಸಲ್ಮಾನರಿಗೆ ಹಿಂಸಿಸಲಾಗುವುದಿಲ್ಲ, ಅದಕ್ಕಿಂತ ಹೆಚ್ಚು ಪಾಕಿಸ್ತಾನದಲ್ಲಿ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ. (‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ ಎಂದು ಕೂಗುತ್ತಿರುವವರಿಗೆ ಇದು ಕಪಾಳಮೋಕ್ಷ! – ಸಂಪಾದಕರು)

ಯುದ್ಧವಾದರೆ ನಾವು ಪಶ್ತೂನ್ ಜನರು ಭಾರತದೊಂದಿಗೆ ಇರುತ್ತೇವೆ! – ಪಶ್ತೂನ್‌ನ ಓರ್ವ ಇಮಾಮ್

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಓರ್ವ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸುವ ವ್ಯಕ್ತಿ), ‘ಭಾರತ ಏನಾದರೂ  ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಾವು ಪಶ್ತೂನ್ ಜನರು ಭಾರತದೊಂದಿಗೆ ಇರುತ್ತೇವೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದರಿದ್ರಗೆಟ್ಟ ಪಾಕಿಸ್ತಾನದಲ್ಲಿ ಸ್ಥಳೀಯ ನಾಗರಿಕರು ಮತ್ತು ಮೌಲಾನಾ ಅವರಿಗೆ ಪಾಕಿಸ್ತಾನದ ಸೋಲು ಸ್ಪಷ್ಟವಾಗಿ ಕಾಣಿಸುತ್ತಿರುವುದರಿಂದ ಅವರು ಅದರಿಂದ ತಮ್ಮನ್ನು ದೂರವಿರಿಸಲು ಪ್ರಯತ್ನಿಸುತ್ತಿದ್ದಾರೆ. ನಾಳೆ ಈ ಪಾಕಿಸ್ತಾನಿಗಳು ಭಾರತದ ಮುಂದೆ ಪ್ರಾಣ ಮತ್ತು ಆಹಾರಕ್ಕಾಗಿ ಭಿಕ್ಷೆ ಬೇಡಿದರೆ ಆಶ್ಚರ್ಯಪಡಬೇಕಾಗಿಲ್ಲ!