ಮೊಘಲರ ವಂಶಸ್ಥರೆಂದು ಹೇಳಿಕೊಂಡು ಕೆಂಪು ಕೋಟೆಯನ್ನು ಕೋಳಿದ ಸುಲ್ತಾನಾ ಬೇಗಂ ಅವರ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
ನವದೆಹಲಿ – ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹದ್ದೂರ್ ಶಾ ಜಾಫರ್ ಅವರ ಮರಿಮೊಮ್ಮಗನ ವಿಧವೆ ಸುಲ್ತಾನಾ ಬೇಗಂ, ಅವರು ಸುಪ್ರೀಂ ಕೋರ್ಟ್ ನಲ್ಲಿ ಕೆಂಪು ಕೋಟೆಯ ನಿಯಂತ್ರಣ ಸಿಗಬೇಕು, ಎಂದು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸುತ್ತ ‘ಕೇವಲ ಕೆಂಪು ಕೋಟೆಯೇ ಏಕೆ?” ಫತೇಪುರ್ ಸಿಕ್ರಿ ಮತ್ತು ತಾಜ್ ಮಹಲ್ ಏಕಿಲ್ಲ? ಅದನ್ನು ಏಕೆ ಕೈಬಿಡಲಾಯಿತು? ಹೀಗೆ ಪ್ರಶ್ನೆ ಕೇಳಿದರು. ಈ ಮೂಲಕ ನ್ಯಾಯಾಲಯವು ಈ ಅರ್ಜಿಯನ್ನು ನಿರರ್ಥಕ ಎಂದು ಘೋಷಿಸಿತು.
ಸುಲ್ತಾನಾ ಬೇಗಂ ಅವರು 2021 ರಲ್ಲಿ ಮೊದಲ ಬಾರಿಗೆ ಹೈಕೋರ್ಟ್ನಲ್ಲಿ ಹೀಗೆ ಮನವಿ ಮಾಡಿರುವ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯವು ಅರ್ಜಿಯನ್ನು ಸಲ್ಲಿಸುವಲ್ಲಿ 164 ವರ್ಷಗಳಿಗೂ ಹೆಚ್ಚು ವಿಳಂಬವಾಗಿರುವ ಕಾರಣ ನೀಡಿ ಅದನ್ನು ವಜಾಗೊಳಿಸಿತ್ತು.