ಭಾರತೀಯ ಇತಿಹಾಸವನ್ನು ತಿರುಚಿದ ರಾಣಿ ದುರ್ಗಾವತಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ!
(ಮಕ್ಬರಾ ಎಂದರೆ ಮುಸ್ಲಿಂ ವ್ಯಕ್ತಿಯನ್ನು ಹೂಳಿದ ನಂತರ ಆ ಸ್ಥಳದಲ್ಲಿ ನಿರ್ಮಿಸಲಾದ ಕಟ್ಟಡ (ಕಬರ್))
ಜಬಲ್ಪುರ (ಮಧ್ಯಪ್ರದೇಶ) – ಜಬಲ್ಪುರದ ರಾಣಿ ದುರ್ಗಾವತಿ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪದವಿಯ ‘ಫೌಂಡೇಶನ್ ಕೋರ್ಸ್’ ಪರೀಕ್ಷೆಯಲ್ಲಿ ರಾಣಿ ದುರ್ಗಾವತಿಯವರ ಇತಿಹಾಸವನ್ನು ತಪ್ಪಾಗಿ ವಿವರಿಸುವ ಪ್ರಶ್ನೆಯಿಂದಾಗಿ ವಿಶ್ವವಿದ್ಯಾಲಯದ ಆಡಳಿತ ಮತ್ತು ವಿದ್ಯಾರ್ಥಿಗಳ ನಡುವೆ ವಿವಾದ ಉಂಟಾಗಿದೆ. ಮೇ 3, 2025 ರಂದು ನಡೆದ ‘ಬಿಎಸ್ಸಿ’ ದ್ವಿತೀಯ ವರ್ಷದ ‘ಫೌಂಡೇಶನ್ ಕೋರ್ಸ್’ ಪ್ರಶ್ನೆ ಪತ್ರಿಕೆಯಲ್ಲಿ ರಾಣಿ ದುರ್ಗಾವತಿಯವರ ಸಮಾಧಿ ಸ್ಥಳದ ಬಗ್ಗೆ ‘ರಾಣಿ ದುರ್ಗಾವತಿಯವರ ‘ಮಕ್ಬರಾ’ ಎಲ್ಲಿದೆ?’ ಎಂದು ಪ್ರಶ್ನೆ ಕೇಳಲಾಗಿತ್ತು.
1. ಈ ಪ್ರಶ್ನೆಯಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ; ಏಕೆಂದರೆ ರಾಣಿ ದುರ್ಗಾವತಿಯವರ ಸಮಾಧಿ ಸ್ಥಳವಿದೆ, ಕಬರ್ ಅಲ್ಲ. ಇದು ರಾಣಿ ದುರ್ಗಾವತಿಯವರ ಶೌರ್ಯ, ಪರಾಕ್ರಮ ಮತ್ತು ಬಲಿದಾನಕ್ಕೆ ಮಾಡಿದ ಅವಮಾನ ಎಂದು ನಾಗರಿಕರಲ್ಲಿ ಚರ್ಚೆ ನಡೆಯುತ್ತಿದೆ.
2. ಈ ಘಟನೆಯನ್ನು ವಿವಿಧ ಸಾಮಾಜಿಕ ಸಂಘಟನೆಗಳು ಮತ್ತು ವಿದ್ಯಾರ್ಥಿಗಳು ಖಂಡಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಇದನ್ನು ‘ಅಜ್ಞಾನದ ಪರಿಣಾಮ’ ಎಂದು ಕರೆದಿದೆ. ಇತಿಹಾಸದ ಈ ತಿರುಚುವಿಕೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪರಿಷತ್ತು ಒತ್ತಾಯಿಸಿದೆ.
ಸಂಪಾದಕೀಯ ನಿಲುವು
|