|
ಜಮ್ಮು – ಭಾರತವು ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಿ ದೊಡ್ಡ ಕ್ರಮವನ್ನು ಪ್ರಾರಂಭಿಸಿದೆ. ಚೆನಾಬ್ ನದಿಯ ಬಗಲಿಹಾರ ಅಣೆಕಟ್ಟಿನಿಂದ ನೀರಿನ ಹರಿವನ್ನು ಸ್ಥಗಿತಗೊಳಿಸಿದ ನಂತರ, ಈಗ ಸಲಾಲ ಅಣೆಕಟ್ಟಿನಿಂದಲೂ ನೀರನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ, ಝೇಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಿಶನ್ ಗಂಗಾ ಅಣೆಕಟ್ಟಿಗೆ ಸಂಬಂಧಿಸಿದಂತೆಯೂ ಇದೇ ರೀತಿಯ ಕ್ರಮಗಳನ್ನು ಯೋಜಿಸಲಾಗುತ್ತಿದೆ. ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ ನಂತರ, ಭಾರತದ ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ಹಸಿವಿನಿಂದ ಕಂಗಾಲಾಗುವ ಸಮಯ ಬರಲಿದೆ.
🚨 Chenab runs dry near Pakistan!
🇮🇳 Shuts sluice gates of Salal & Baglihar dams after Pahalgam terror attack
🌊 Water dips below waist level in J&K’s Akhnoor — locals stunned!
⚡️ Part of India’s diplomatic offensive against 🇵🇰 #IndiaPakistanWar pic.twitter.com/BhdNqpzQ59
— Sanatan Prabhat (@SanatanPrabhat) May 5, 2025
1. ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತವು ‘ಸಿಂಧೂ ಜಲ ಒಪ್ಪಂದ’ವನ್ನು ರದ್ದುಗೊಳಿಸಲು ನಿರ್ಧರಿಸಿತು. ವಿಶ್ವ ಬ್ಯಾಂಕ್ ನ ಮಧ್ಯಸ್ಥಿಕೆಯಲ್ಲಿ ಮಾಡಲಾದ ‘ಸಿಂಧೂ ಜಲ ಒಪ್ಪಂದ’ವು 1960 ರಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯ ನಿಯಮಗಳನ್ನು ನಿರ್ವಹಿಸುತ್ತಿದೆ.
2. ರಾಮಬನ್ ಜಿಲ್ಲೆಯ ಬಗಲಿಹಾರ ಅಣೆಕಟ್ಟು ಎರಡೂ ದೇಶಗಳ ನಡುವೆ ದೀರ್ಘಕಾಲದಿಂದ ವಿವಾದದ ವಿಷಯವಾಗಿದೆ. ಪಾಕಿಸ್ತಾನವು ಈ ಹಿಂದೆಯೂ ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯನ್ನು ಕೋರಿತ್ತು.
3. ಭಾರತೀಯ ಅಧಿಕಾರಿಗಳು ಅಖನೂರನಿಂದ ಮತ್ತೊಂದು ದೊಡ್ಡ ಕಾಲುವೆಯನ್ನು ನಿರ್ಮಿಸುವ ಬಗ್ಗೆ ಆಯೋಚಿಸುತ್ತಿದ್ದಾರೆ, ಇದು ಜಮ್ಮು ಜಿಲ್ಲೆಯ ರಾಮಗಢ ಸೇರಿದಂತೆ ಉಳಿದ ಭಾಗ ಹಾಗೂ ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಕೆಲವು ಭಾಗಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
4. ಅಖನೂರ, ಜೌರಿಯನ ಮತ್ತು ಖೌರ ಪ್ರದೇಶಗಳ ಕೆಲವು ಭಾಗಗಳಿಂದ ಬರುವ ಜುನಾ ಪ್ರತಾಪ ಕಾಲುವೆಯನ್ನು ಮುಂದುವರಿಸುವ ಮತ್ತು ಕೊನೆಯ ಭಾಗಕ್ಕೆ ನೀರನ್ನು ತಿರುಗಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
5. ಪರಗಲವಾಲ ವಲಯ ಹಾಗೂ ಘರೋಟಾ ಮತ್ತು ಕೋಟ ಭಾಲವಾಲನ ಕಾಂಡಿ ಪಟ್ಟಿಯ ಸುಮಾರು 35 ಗ್ರಾಮಗಳಿಗೆ ಚೆನಾಬ್ ನದಿಯ ನೀರಿನ ಲಾಭ ನೀಡುವ ಯೋಜನೆಯಿದೆ ಎಂದು ಮೂಲಗಳು ತಿಳಿಸಿವೆ.