ಭಯೋತ್ಪಾದಕರಿಗೆ ಸಹಾಯ ಮಾಡಿದ ಆರೋಪ; ಪೊಲೀಸರು ಬಂಧಿಸಿದ ಯುವಕ ನದಿಗೆ ಹಾರಿ ಸಾವು

ಪೊಲೀಸರ ಮೇಲೆ ಕೊಲೆ ಆರೋಪ ಹಾಕಿದ ಯುವಕನ ಕುಟುಂಬಸ್ಥರು

ಶ್ರೀನಗರ (ಜಮ್ಮು-ಕಾಶ್ಮೀರ) – ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಕಾಶ್ಮೀರದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಾಗ, ಆತ ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಅಲ್ಲಿನ ನದಿಗೆ ಹಾರಿದನು. ನದಿಯಲ್ಲಿ ಈಜಲು ಬಾರದೆ ಮುಳುಗಿ ಸಾವನ್ನಪ್ಪಿದನು. ಮೃತ ಯುವಕನ ಹೆಸರು ಇಮ್ತಿಯಾಜ್ ಅಹ್ಮದ್ ಮಗ್ರೆ (ವಯಸ್ಸು 22 ವರ್ಷ). ಭದ್ರತಾ ಪಡೆಯು ಆತನನ್ನು ಕಸ್ಟಡಿಯಲ್ಲಿ ಕೊಂದ ನಂತರ ನದಿಗೆ ಎಸೆದಿದ್ದಾರೆ ಎಂದು ಇಮ್ತಿಯಾಜ್‌ನ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಾಶ್ಮೀರ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಮ್ತಿಯಾಜ್ ನು ಭಯೋತ್ಪಾದಕರ ‘ಓವರ್‌ಗ್ರೌಂಡ್ ವರ್ಕರ್’ (ರಹಸ್ಯವಾಗಿ ಸಹಾಯ ಮಾಡುವವನು) ಎಂದು ಒಪ್ಪಿಕೊಂಡಿದ್ದನು. ಏಪ್ರಿಲ್ 23 ರಂದು ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ಗೂ ಆತನಿಗೆ ಸಂಬಂಧವಿತ್ತು. ಅಂದು ಇಬ್ಬರು ಭಯೋತ್ಪಾದಕರು ಪರಾರಿಯಾಗಿದ್ದರು. ಭಯೋತ್ಪಾದಕರು ಅಡಗಿದ್ದ ಸ್ಥಳದ ಬಗ್ಗೆ ತನಗೆ ತಿಳಿದಿದೆ ಎಂದು ಆತ ಒಪ್ಪಿಕೊಂಡಿದ್ದನು. ನಂತರ, ಆತನ ಸೂಚನೆಯ ಮೇರೆಗೆ ಆತನನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ಯಲಾಗುತ್ತಿತ್ತು. ಸಂದರ್ಭ ನೋಡಿ ಆತ ತಪ್ಪಿಸಿಕೊಳ್ಳಲು ನದಿಗೆ ಹಾರಿದನು.

ಪೊಲೀಸರು ಈ ಸಂಪೂರ್ಣ ಘಟನೆಯ ಡ್ರೋನ್ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಇಮ್ತಿಯಾಜ್ ನದಿಗೆ ಹಾರಿ ಕೊಚ್ಚಿ ಹೋಗುತ್ತಿರುವುದು ಕಂಡುಬರುತ್ತದೆ. ಈ ಪ್ರಕರಣದಲ್ಲಿ, ಕೇಂದ್ರಾಡಳಿತ ಪ್ರದೇಶದ ಕ್ಯಾಬಿನೆಟ್ ಸಚಿವೆ ಸಕಿನಾ ಇಟೂ ಅವರು ಘಟನೆಯ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿನ ಜಿಹಾದಿ ಮನಸ್ಥಿತಿಯ ಮತಾಂಧ ಮುಸ್ಲಿಮರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವುದೇ ಅಲ್ಲಿನ ಭಯೋತ್ಪಾದನೆ ನಿರ್ಮೂಲನೆಯಾಗದಿರಲು ಮುಖ್ಯ ಕಾರಣವಾಗಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೆ ಈ ಭಯೋತ್ಪಾದನೆ ಹೀಗೆಯೇ ಮುಂದುವರಿಯುತ್ತದೆ!