
‘ರಾತ್ರಿ ನಿದ್ದೆ ಮಾಡಲು ಪ್ರಯತ್ನಿಸಿದರೂ ನಿದ್ದೆ ಬರದಿರುವುದಕ್ಕೆ ನಾವು ‘ನಿದ್ರಾನಾಶ’ ಎಂದು ಹೇಳುತ್ತೇವೆ. ನಿದ್ರಾಹೀನತೆಗೆ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ಮುಂದೆ ಕೊಡಲಾಗಿದೆ.
೧. ನಿದ್ರಾಹೀನತೆಗೆ ಕಾರಣಗಳು
ಅ. ಒತ್ತಡ-ಸಂಘರ್ಷ, ಚಿಂತೆ
ಆ. ಹದಗೆಟ್ಟ ಜೀವನಶೈಲಿ
ಇ. ಮಲಗುವ ಮೊದಲು ಸಂಚಾರವಾಣಿ (ಮೊಬೈಲ್), ಸಂಚಾರಿಗಣಕಯಂತ್ರ (ಲ್ಯಾಪ್ಟಾಪ್) ಅಥವಾ ದೂರಚಿತ್ರವಾಹಿನಿ (ಟಿವಿ) ನೋಡುವುದು
ಈ. ದೇಹದಲ್ಲಿ ಏನಾದರೂ ನೋವಿರುವುದು
ಉ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದು
೨. ಪರಿಹಾರ
ಅ. ಹಾಲಿನಲ್ಲಿ ಜಾಜಿಕಾಯಿಯನ್ನು ತೇಯ್ದು ಅದನ್ನು ಒಂದು ಕಪ್ ಹಾಲಿನಲ್ಲಿ ಬೆರೆಸಿ ಪ್ರತಿದಿನ ರಾತ್ರಿ ಮಲಗುವ ಅರ್ಧ ಅಥವಾ ಮುಕ್ಕಾಲು ಗಂಟೆ ಮೊದಲು ಕುಡಿಯುವುದು : ಮೊದಲ ದಿನ ಸಾಣೆಕಲ್ಲಿನ ಮೇಲೆ ಒಂದು ಚಮಚ ಹಾಲು ಹಾಕಿ ಜಾಜಿಕಾಯಿಯ ೩ ತುಂಡುಗಳನ್ನು ತೇಯ್ದು ಅದನ್ನು ಒಂದು ಕಪ್ ಹಾಲಿನಲ್ಲಿ ಸೇರಿಸಿ ಕುಡಿಯಬೇಕು. ಎರಡನೇ ದಿನ ೫ ತುಂಡುಗಳನ್ನು, ಮೂರನೇ ದಿನ ೬ ತುಂಡುಗಳು ಮತ್ತು ಹೀಗೆ ಮಾಡುತ್ತಾ ೭ ದಿನಗಳ ವರೆಗೆ ಒಂದೊಂದು ತುಂಡು ಹೆಚ್ಚಿಸುತ್ತಾ ಹೋಗಬೇಕು. ಏಳನೇ ದಿನ ೯ ತುಂಡುಗಳಾಗುತ್ತವೆ. ಏಳನೇ ದಿನದ ನಂತರ ಪುನಃ ಒಂದೊಂದು ತುಂಡನ್ನು ಕಡಿಮೆ ಮಾಡುತ್ತಾ ೩ ತುಂಡು ಗಳಾದಾಗ ನಿಲ್ಲಿಸಬೇಕು.
ಆ. ಪ್ರತಿದಿನ ರಾತ್ರಿ ಒಂದು ಚಿಕ್ಕ ಈರುಳ್ಳಿಯನ್ನು ತುರಿದು ಅಥವಾ ಸಣ್ಣದಾಗಿ ಕತ್ತರಿಸಿ ಮೊಸರಿನೊಂದಿಗೆ ತಿನ್ನಬೇಕು ಮತ್ತು ಒಂದು ಲೋಟ ಹಾಲು ಕುಡಿಯಬೇಕು. ಹೀಗೆ ೭ ದಿನ ಮಾಡಬೇಕು. (ಇದು ಔಷಧಿಯಾಗಿರುವುದರಿಂದ ‘ಈರುಳ್ಳಿ ಮತ್ತು ಹಾಲು ಇದು ಹೇಗೆ ಒಟ್ಟಿಗೆ ಸೇವಿಸುವುದು ?’, ಎಂಬ ವಿಚಾರ ಮಾಡಬಾರದು.)
ಇ. ಪ್ರತಿದಿನ ನಾವು ಮಲಗುವ ಸಮಯವನ್ನು ಬದಲಾಯಿಸದೇ ಒಂದೇ ಸಮಯಕ್ಕೆ ಮಲಗಬೇಕು.
ಈ. ಮಲಗುವ ಜಾಗ ಅಥವಾ ಕೋಣೆ ಗಾಳಿಯಾಡುವಂತೆ ಮತ್ತು ತಂಪಾಗಿರಬೇಕು.
ಉ. ಮಲಗುವ ಕೋಣೆಯಲ್ಲಿ ಸ್ವಲ್ಪ ಕತ್ತಲೆ ಇದ್ದರೆ ಉತ್ತಮ; ಏಕೆಂದರೆ ಅದರಿಂದ ನಿದ್ದೆ ಬೇಗ ಬರಲು ಸಹಾಯವಾಗುತ್ತದೆ.
ಊ. ಮಲಗುವ ಮೊದಲು ಸಂಚಾರವಾಣಿ ಅಥವಾ ದೂರಚಿತ್ರವಾಹಿನಿ ನೋಡಬಾರದು.
ಎ. ಒತ್ತಡ-ಸಂಘರ್ಷವನ್ನು ಕಡಿಮೆ ಮಾಡಲು ಪ್ರತಿದಿನ ಸ್ವಲ್ಪ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಬೇಕು.
ಐ. ರಾತ್ರಿ ಊಟ ಹಗುರವಾಗಿರಬೇಕು.’
– ಡಾ. ದೀಪಕ ಜೋಶಿ, ನಿಸರ್ಗೋಪಚಾರ ತಜ್ಞರು (ಬ್ಯಾಚ್ಯುಲರ್ ಆಫ್ ನ್ಯಾಚರೋಪಥಿ ಯಾಂಡ್ ಯೋಗಿಕ್ ಸೈನ್ಸ್), ದೇವದ, ಪನವೇಲ. (೨೪.೮.೨೦೨೪)