3 Men Arrested Khalistani Links : ಪಂಜಾಬ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ 3 ಜನರ ಬಂಧನ

ಶಸ್ತ್ರಾಸ್ತ್ರಗಳು ವಶಕ್ಕೆ

ಅಮೃತಸರ (ಪಂಜಾಬ್) – ಇಲ್ಲಿನ ಪೊಲೀಸರು ಖಲಿಸ್ತಾನಿ ಭಯೋತ್ಪಾದಕನಾದ ರೌಡಿ ಧರಂಪ್ರೀತ್ ಸಿಂಗ್ ಅಲಿಯಾಸ್ ಧರಂ ಸಂಧು ಜೊತೆ ಸಂಬಂಧ ಹೊಂದಿರುವ ವಿಜಯ ಮಸಿಹ, ಅಗ್ರೇಜ ಸಿಂಹ ಮತ್ತು ಇಕ್ಬಾಲ ಸಿಂಹ ಎಂಬ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಮೂವರು ಆರೋಪಿಗಳು ತರಣತಾರನ್ ಜಿಲ್ಲೆಯವರು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ ಯಾದವ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಕಂಡು ಬಂದಿರುವ ಪ್ರಕಾರ, ಈ ಮೂವರು ಆರೋಪಿಗಳು ಅಂತರರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದು, ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ 3 ಗ್ಲಾಕ್ ಪಿಸ್ತೂಲ್‌ಗಳು, 3 ಬೆರೆಟ ಪಿಸ್ತೂಲ್‌ಗಳು, 20 ಜೀವಂತ ಕಾರ್ಟ್ರಿಡ್ಜ್‌ಗಳು (9 ಮಿ.ಮೀ), 20 ಲೈವ್ ಕಾರ್ಟ್ರಿಡ್ಜ್‌ಗಳು (30 ಬೋರ್) ಮತ್ತು 1 ಆಕ್ಟಿವಾ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರ ವಿಚಾರಣೆಯ ಮೂಲಕ ಭಯೋತ್ಪಾದಕರ ಜಾಲದ ಬಗ್ಗೆ ಮಾಹಿತಿ ಬೆಳಕಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.