‘ಮುಸಲ್ಮಾನರು ಮತ್ತು ಕಾಶ್ಮೀರಿಯರನ್ನು ಗುರಿಯಾಗಿಸಬೇಡಿ’ ಎಂದು ಮನವಿ ಮಾಡಿದ್ದರು!
ನವದೆಹಲಿ – ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ ನರ್ವಾಲ್ ಕೂಡ ಮೃತಪಟ್ಟರು. ಈ ಘಟನೆ ನಡೆದಾಗ ಅವರ ಪತ್ನಿ ಹಿಮಾಂಶಿ ಕೂಡ ಅವರೊಂದಿಗೆ ಇದ್ದರು. ಈ ಘಟನೆಯ ನಂತರ, ಹಿಮಾಂಶಿ ಅವರು ಭಾರತೀಯರಿಗೆ ‘ಮುಸಲ್ಮಾನರು ಮತ್ತು ಕಾಶ್ಮೀರಿಯರನ್ನು ಗುರಿಯಾಗಿಸಬೇಡಿ’ ಎಂದು ಮನವಿ ಮಾಡಿದರು. ಇದರಿಂದಾಗಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮೇಲೆ ಟೀಕೆಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ, ಹಿಮಾಂಶಿ ಅವರ ಬೆಂಬಲಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಮನವಿಯನ್ನು ಬಿಡುಗಡೆ ಮಾಡಿದ್ದು, ‘ಯಾವುದೇ ಮಹಿಳೆಯನ್ನು ಆಕೆಯ ವೈಯಕ್ತಿಕ ಜೀವನದ ಆಧಾರದ ಮೇಲೆ ಟೀಕಿಸುವುದು ತಪ್ಪು’ ಎಂದು ಹೇಳಿದೆ.
ವಿನಯ ನರ್ವಾಲ್ ಅವರ ಜನ್ಮದಿನದ ಅಂಗವಾಗಿ ಮೇ 1 ರಂದು ಅವರ ಕುಟುಂಬ ಸದಸ್ಯರು ಕರ್ನಾಲ್ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ, ಕೆಲವು ರಾಜ್ಯಗಳಲ್ಲಿ ಕಾಶ್ಮೀರಿಯರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಬಗ್ಗೆ ಪತ್ರಕರ್ತರು ಹಿಮಾಂಶಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಹಿಮಾಂಶಿ, ‘ನಮಗೆ ಹಿಂದೂ ಮತ್ತು ಮುಸ್ಲಿಂ ಹೆಸರಿನಲ್ಲಿ ದ್ವೇಷವನ್ನು ಹರಡಲು ಇಷ್ಟವಿಲ್ಲ. ಜನರು ಮುಸ್ಲಿಮರು ಮತ್ತು ಕಾಶ್ಮೀರಿಯರ ವಿರುದ್ಧ ಹೋಗಬೇಕು’, ಎಂದು ನಾವು ಬಯಸುವುದಿಲ್ಲ. ನಮಗೆ ಇದು ಬೇಡ. ನಾವೆಲ್ಲರೂ ಶಾಂತಿಗಾಗಿ ಮಾತ್ರ ಮನವಿ ಮಾಡುತ್ತೇವೆ’ ಎಂದು ಹೇಳಿದರು.
ಸಂಪಾದಕೀಯ ನಿಲುವುಯಾರನ್ನೂ ದ್ವೇಷಿಸುವುದು ತಪ್ಪು; ಆದರೆ ಹಿಂದೂಗಳನ್ನು ಅವರ ಧರ್ಮವನ್ನು ಕೇಳಿ ಗುರಿಯಾಗಿಸಿದಾಗ, ಜನರ ಪ್ರತಿಕ್ರಿಯೆಯೂ ಅಷ್ಟೇ ತೀವ್ರವಾಗಿರುತ್ತದೆ. ಅಂತಹ ಸಮಯದಲ್ಲಿ, ಸಂತ್ರಸ್ತರು ಗಾಂಧಿಗಿರಿಯನ್ನು ತೋರಿಸಲು ಪ್ರಯತ್ನಿಸಿದರೆ, ಜನರು ಇನ್ನಷ್ಟು ಕೋಪಗೊಳ್ಳಬಹುದು ಎಂಬುದನ್ನು ಈ ಘಟನೆಯಿಂದ ತಿಳಿಯಬಹುದು! |