Bangladeshi Writer Taslima Statement : ಇಸ್ಲಾಂ ಇರುವವರೆಗೆ ಭಯೋತ್ಪಾದನೆ ಇರಲಿದೆ !

ಬಾಂಗ್ಲಾದೇಶದ ಲೇಖಕಿ ತಸ್ಲೀಮ ಇವರ ಹೇಳಿಕೆ

ನವದೆಹಲಿ – ಯುರೋಪದಲ್ಲಿನ ಚರ್ಚ್ ಗಳು ಸಂಗ್ರಹಾಲಯದಲ್ಲಿ ರೂಪಾಂತರಿತವಾಗಿವೆ; ಆದರೆ ಮುಸಲ್ಮಾನರು ಎಲ್ಲೆಡೆ ಮಸೀದಿಗಳನ್ನು ಕಟ್ಟುವಲ್ಲಿ ತೊಡಗಿದ್ದಾರೆ. ಪ್ರಸ್ತುತ ಸಾವಿರಾರು ಮಸೀದಿಗಳು ಇವೆ ಮತ್ತು ಅವರಿಗೆ ಇನ್ನಷ್ಟು ಮಸಿದಿಗಳು ಕಟ್ಟುವುದಿದೆ. ಅದರಿಂದ ಜಿಹಾದ ನಿರ್ಮಾಣ ಆಗುತ್ತದೆ. ಮದರಸಾಗಳು ಇರಬಾರದು. ಇಸ್ಲಾಂ ಅಸ್ತಿತ್ವದಲ್ಲಿ ಇರುವವರೆಗೆ ಭಯೋತ್ಪಾದನೆ ಅಸ್ತಿತ್ವದಲ್ಲಿ ಉಳಿಯುವುದು. ಮುಸಲ್ಮಾನ ಹುಡುಗರು ಕೇವಲ ಒಂದೇ ಪುಸ್ತಕ ಅಲ್ಲ ಎಲ್ಲಾ ಪುಸ್ತಕಗಳನ್ನು ಓದಬೇಕು ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಇವರು ಇಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಸ್ಲಿಮಾ ನಸ್ರೀನ್ ಮಾತು ಮುಂದುವರೆಸುತ್ತ,

೧. ಇಸ್ಲಾಂನ ಅಭಿವೃದ್ಧಿ ೧ ಸಾವಿರದ ೪೦೦ ವರ್ಷಗಳಲ್ಲಿಯು ಆಗಿಲ್ಲ. ಎಲ್ಲಿಯವರೆಗೆ ಅಭಿವೃದ್ಧಿ ಆಗುವುದಿಲ್ಲ ಅಲ್ಲಿಯವರೆಗೆ ಇಸ್ಲಾಂ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಾ ಇರುತ್ತದೆ.

೨. ೨೦೧೬ ರ ಢಾಕಾದಲ್ಲಿನದಾಳಿಯಲ್ಲಿ ಮುಸಲ್ಮಾನರಿಗೆ ‘ಕಲ್ಮ’ (ಅಲ್ಲಾನ ಹೊಗಳುವ ವಾಕ್ಯಗಳು) ಹೇಳಲು ಬರದಿದ್ದರೆ ಅವರ ಹತ್ಯೆ ಮಾಡಲಾಗುತ್ತದೆ. ಯಾವಾಗ ಶ್ರದ್ಧೆಗೆ ತರ್ಕ ಮತ್ತು ಮಾನವೀಯತೆನ್ನು ಮೆಟ್ಟಿನಿಲ್ಲುವ ಅನುಮತಿ ನೀಡಲಾಗುತ್ತದೆ ಆಗ ಹೀಗೆ ಘಟಿಸುತ್ತದೆ.

೩. ನಾನು ಅಮೇರಿಕಾದ ಶಾಶ್ವತ ನಿವಾಸಿಯಾಗಿದ್ದೇನೆ. ನಾನು ಇಲ್ಲಿ ೧೦ ವರ್ಷಗಳಿಂದ ವಾಸಿಸುತ್ತಿದ್ದೇನೆ; ಆದರೆ ನನಗೆ ಯಾವಾಗಲೂ ಹೊರಗಿನವಳಂತೆ ಭಾಸವಾಗುತ್ತದೆ. ಕೊಲಕಾತಾಗೆ ಬಂದ ನಂತರ ನನಗೆ ಮನೆಗೆ ಬಂದಿರುವ ಹಾಗೆ ಅನಿಸುತ್ತದೆ. ಬಂಗಾಳದಿಂದ ಹೊರದೂಡಿದ ನಂತರ ಕೂಡ ನನಗೆ ದೆಹಲಿಯಲ್ಲಿ ಇನ್ನೊಂದು ಮನೆ ದೊರೆಯಿತು. ಈ ದೇಶ ನನಗೆ ಆಪ್ತತೆಯ ಭಾವನೆ ನೀಡಿದೆ. ಅದು ನನ್ನ ಸ್ವಂತ ದೇಶ ನನಗೆ ನೀಡಲು ಸಾಧ್ಯವಾಗಲಿಲ್ಲ.

೪. ಪ್ರತಿಯೊಂದು ಸುಸಂಸ್ಕೃತ ದೇಶದಲ್ಲಿ ಒಂದೇ ಸಮಾನ ನಾಗರಿಕ ಸಂಹಿತೆ ಇರಬೇಕು. ಭಾರತದಲ್ಲಿ ಕೂಡ. ನಾನು ಅದನ್ನು ಬೆಂಬಲಿಸುತ್ತೇನೆ. ಇಸ್ಲಾಮಿ ಧರ್ಮ ಗುರುಗಳಿಗೆ ಕುರಾನಿನ ಅಧಿಕಾರ ಬೇಕಿದೆ. ಅಧಿಕಾರ ಎಂದಿಗೂ ಧಾರ್ಮಿಕ ಇರಬಾರದು.

ಸಂಪಾದಕೀಯ ನಿಲುವು

ಇದನ್ನೇ ಯಾವುದಾದರೂ ಹಿಂದೂ ಹೇಳಿಕೆ ನೀಡಿದ್ದರೆ, ಆಗಲೇ ಅವರ ಮೇಲೆ ಮುಸಲ್ಮಾನದ್ವೇಷಿ, ಅಶಾಂತತಾವಾದಿ, ಜಾತ್ಯತೀತ ವಿರೋಧಿ ಮುಂತಾದ ಆರೋಪಗಳನ್ನು ಹರಿಸುತ್ತಾ ವಾಗ್ದಾಳಿ ನಡೆಸುತ್ತಿದ್ದರು ! ಓರ್ವ ಮುಸಲ್ಮಾನ ಮಹಿಳೆಯೇ ಹೇಗೆ ಹೇಳುತ್ತಿದ್ದಾರೆ ಎಂದು ಜಾತ್ಯತೀತ ವಾದಿಗಳು ಮೌನವಾಗಿದ್ದಾರೆ !