ಭಾಜಪದ ಸಂಸದ ನಿಶಿಕಾಂತ್ ದುಬೆ ಇವರ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಗೃಹಯುದ್ಧಕ್ಕೆ ಸಿಜೆಐ ಖನ್ನಾ ಹೊಣೆ ಎಂದು ದುಬೆ ಆರೋಪ ಮಾಡಿದ್ದರು !

ನವದೆಹಲಿ – ಭಾಜಪದ ಸಂಸದ ನಿಶಿಕಾಂತ್ ದುಬೆ ಅವರು ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ, “ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಗೃಹರ್ಯುದ್ಧಗಳಿಗೆ ಮುಖ್ಯ ನ್ಯಾಯಾ ಧೀಶ ಸಂಜೀವ್ ಖನ್ನಾ ಸಂಪೂರ್ಣ ಜವಾಬ್ದಾರರು ಮತ್ತು ಧಾರ್ಮಿಕ ಯುದ್ಧಗಳನ್ನು ಪ್ರಚೋದಿಸಲು ಸುಪ್ರೀಂ ಕೋರ್ಟ್ ಸಂಪೂರ್ಣ ಜವಾಬ್ದಾರವಾಗಿದೆ,” ಎಂದು ಏಪ್ರಿಲ್ 19 ರಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಅವರ ವಿರುದ್ಧ ಮಾಜಿ ಪೊಲೀಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರು ಸುಪ್ರೀಂ ಕೊರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಮೇ 5 ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು. ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಮಾತನಾಡಿ, ನಮ್ಮ ಭುಜಗಳು ಬಲಿಷ್ಠವಾಗಿವೆ, ನಮಗೆ ಅರ್ಜಿಯ ಬಗ್ಗೆ ವಿಚಾರ ಮಾಡುವುದು ಬೇಕಾಗಿಲ್ಲ. ನಾವು ಸಧ್ಯಕ್ಕೆ ಯಾವುದೇ ಯುಕ್ತಿ ವಾದ ಅಥವಾ ವಾದವಿವಾದಗಳನ್ನು ಕೇಳುವುದಿಲ್ಲ; ಆದರೆ ನಾವು ಒಂದು ಸಣ್ಣ ಆದೇಶ ನೀಡುತ್ತೇವೆ, ಎಂದರು.