ಕರ್ನಾಟಕ: ಹಿಂದುತ್ವನಿಷ್ಠ ನಾಯಕರು ಮತ್ತು ಕಾರ್ಯಕರ್ತರಿಗೆ ಜೀವ ಬೆದರಿಕೆ

ಬೆಂಗಳೂರು – ರಾಜ್ಯದಲ್ಲಿ ಸುಹಾಸ್ ಶೆಟ್ಟಿ ಅವರ ಹತ್ಯೆಯ ನಂತರ, ಹಿಂದುತ್ವನಿಷ್ಠ ನಾಯಕ ಶರಣ ಪಂಪವೆಲ್ ಸೇರಿದಂತೆ ೩ ರಿಂದ ೫ ಹಿಂದುತ್ವನಿಷ್ಠ ನಾಯಕರಿಗೆ ಹಾಗೂ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರಿಗೆ ಕೊಲೆ ಬೆದರಿಕೆಗಳು ಬಂದಿವೆ. ಹಿಂದುತ್ವನಿಷ್ಠ ಕಾರ್ಯಕರ್ತರಾದ ಭರತ ಕುಮ್ಮೆಳು ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ‘ನಾವು ಮೇ ೫ ರ ರಾತ್ರಿ ೯.೩೦ಕ್ಕೆ ನಿನ್ನ ಮನೆಗೆ ಬಂದು ನಿನ್ನನ್ನು ಕೊಲ್ಲುತ್ತೇವೆ,’ ಎಂಬ ಬೆದರಿಕೆ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ.