ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿ ಅವರನ್ನು ಸಾಧನೆಯ ಮುಂದಿನ ಹಂತಕ್ಕೆ ಕರೆದೊಯ್ಯುವ ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯದಾಯಕ ಸತ್ಸಂಗ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ೧೯೯೦ ರಿಂದ ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಪ್ರಾರಂಭಿಸಿದರು. ಇದರಲ್ಲಿ, ಅವರು ‘ಆನಂದಪ್ರಾಪ್ತಿಗಾಗಿ ಸಾಧನೆ’, ಈ ವಿಷ ಯದ ಬಗ್ಗೆ ಅಧ್ಯಯನ ವರ್ಗಗಳನ್ನು ತೆಗೆದುಕೊಳ್ಳುವುದು, ವಿವಿಧ ಗ್ರಂಥಗಳ ಸಂಕಲನ ಮಾಡುವುದು, ಅನೇಕ ದೊಡ್ಡ ಪ್ರವಚನಗಳನ್ನು ಮಾಡುವುದು ಇಂತಹ ವಿವಿಧ ಮಾರ್ಗಗಳನ್ನು ಅವಲಂಬಿಸಿದ್ದಾರೆ. ಆರಂಭದಿಂದಲೂ, ಜಿಜ್ಞಾಸುಗಳ ಸಂದೇಹ ನಿವಾರಣೆ ಮಾಡುವುದು ಮತ್ತು ‘ಉತ್ತಮ ಸಾಧಕನಾಗುವುದು ಹೇಗೆ ?’ ಈ ವಿμÀಯದಲ್ಲಿ ಮಾರ್ಗದರ್ಶನ ಮಾಡುವುದು’ ಇದು ಅವರ ಕಾರ್ಯದ ಏಕೈಕ ಉದ್ದೇಶವಾಗಿತ್ತು. ‘ಸಾಧಕರ ಸಾಧನೆಗೆ ಸಂಬಂಧಿಸಿದ ತೊಂದರೆಗಳನ್ನು ತಿಳಿದುಕೊಳ್ಳುವುದು ಮತ್ತು ಅವರ ತೊಂದರೆಗಳನ್ನು ನಿವಾರಿಸಿ, ಉಪಾಯಗಳನ್ನು ಹೇಳುವುದು, ಇದು ಅವರ ಕಾರ್ಯದ ಒಂದು ಅವಿಭಾಜ್ಯ ಅಂಗವಾಗಿದೆ.

‘ಮಗು ತೊದಲುತ್ತಿದ್ದರೂ ಅದು ತಾಯಿಗೆ ಅರ್ಥವಾಗುತ್ತದೆ’ ಎನ್ನುವ ಹೇಳಿಕೆಯಂತೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಗೆ ಸಂಬಂಧಿಸಿದ ತೊಂದರೆಗಳನ್ನು ತಕ್ಷಣವೇ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅವುಗಳಿಗೆ ಸರಿಯಾದ ಉಪಾಯಗಳನ್ನು ಹೇಳುತ್ತಾರೆ ಎನ್ನುವ ಅನುಭೂತಿಯನ್ನು ಅನೇಕ ಸಾಧಕರು ಅನುಭವಿಸಿದ್ದಾರೆ. ೨೬/೩೩ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗಗಳನ್ನು ನೋಡಿದ್ದೇವೆ. ಇಂದು ಅದರ ಕೊನೆಯ ಭಾಗವನ್ನು ನೋಡೋಣ.

(ಭಾಗ ೩)

೧೨. ಸ್ವಭಾವದೋಷ ಗಳನ್ನು ದೂರಗೊಳಿಸಿದ ನಂತರವೇ ಏಕಾಗ್ರತೆಯಿಂದ ನಾಮಜಪ ಆಗುತ್ತದೆ !

ಓರ್ವ ಸಾಧಕಿ : ಪ.ಪೂ. ಗುರುದೇವರೇ, ನನಗೆ ನನ್ನ ಮಗನ ಬಗ್ಗೆ ತುಂಬಾ ಕಾಳಜಿ ಅನಿಸುತ್ತದೆ. ಅವನು ಮನಸ್ಸಿಟ್ಟು ಸೇವೆ ಮಾಡುತ್ತಾನೆ; ಆದರೆ ಮನಸ್ಸಿಟ್ಟು ನಾಮಜಪ ಮಾಡುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ : ದೊಡ್ಡವರಿಗೂ ಮನಸ್ಸಿಟ್ಟು ನಾಮಜಪ ಮಾಡಲು ಆಗುವುದಿಲ್ಲ, ಹೀಗಿರುವಾಗ ಚಿಕ್ಕ ಮಕ್ಕಳಿಂದ ನಾವು ಹೇಗೆ ಅಪೇಕ್ಷಿಸಬಹುದು ? ಸ್ವಭಾವದೋಷಗಳು ದೂರವಾದಾಗಲೇ ನಾಮಜಪವು ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಆಗುವುದು. ಅಲ್ಲಿಯವರೆಗೆ ಆಗುವುದಿಲ್ಲ.

೧೩. ಜಪ ಮಾಡುವಾಗ ಮನಸ್ಸಿನಲ್ಲಿ ಬೇರೆ ವಿಚಾರಗಳು ಬರುವುದಕ್ಕಿಂತ ತಾನಾಗಿಯೇ ಆಗುವ ನಾಮಜಪವನ್ನು ಮಾಡುವುದು ಉತ್ತಮ !

ಶ್ರೀ. ಅರವಿಂದ ಪಾನಸರೆ : ಪ.ಪೂ. ಗುರುದೇವರೇ, ಬಹಳಷ್ಟು ಸಲ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮಜಪವು ನನ್ನಿಂದ ತನ್ನಷ್ಟಕ್ಕೆ ಪ್ರಾರಂಭವಾಗುತ್ತದೆ. ಆಗ ಉಪಾಯಕ್ಕಾಗಿ ಹೇಳಿರುವ ನಾಮಜಪವನ್ನು ಮಾಡಬೇಕೆಂದು ನಾನು ಆ ನಾಮಜಪವನ್ನು ಮಾಡುತ್ತೇನೆ; ಆದರೆ ಪುನಃ ನನ್ನಿಂದ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಜಪ ಪ್ರಾರಂಭವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದನ್ನೇ ಮುಂದುವರಿಸಿ. ‘ರಾಮರಾಜ್ಯ’ವನ್ನು ತರಲಿಕ್ಕಿದೆಯಲ್ಲ ? ಇದರ ಮೂಲ ಶಾಸ್ತ್ರ ಏನಿದೆ ? ಮನಸ್ಸಿನಲ್ಲಿ ಇತರ ವಿಚಾರಗಳು ಬರುವುದಕ್ಕಿಂತ ಒಂದು ವಿಚಾರದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುವುದು. ಅಂದರೆ ನಾಮಜಪ.

೧೪. ನಮಗೆ ನೀಡಿರುವ ಸೇವೆಯನ್ನು ಸಕಾರಾತ್ಮಕ ವಿಚಾರ ಮಾಡಿ ಚೆನ್ನಾಗಿ ಮಾಡುವುದು ಮಹತ್ವದ್ದಾಗಿದೆ !

ಶ್ರೀ. ಅಭಿಷೇಕ ಪೈ : ಪರಮಪೂಜ್ಯರೇ, ಸೇವೆಯನ್ನು ಮಾಡುವಾಗ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರಗಳಿರುತ್ತವೆ, ‘ನೀವು ಇಷ್ಟೆಲ್ಲ ಗ್ರಂಥಗಳನ್ನು ಬರೆಯುತ್ತಿದ್ದೀರಿ, ಅವು ಆದಷ್ಟು ಬೇಗನೇ ಸಮಾಜಕ್ಕೆ ತಲುಪಬೇಕು. ಜನರು ಅವುಗಳನ್ನು ಸ್ವೀಕರಿಸಬೇಕು ಮತ್ತು ಸಮಾಜಕ್ಕೆ ಅವುಗಳಿಂದ ಲಾಭ ಆಗಬೇಕು; ಆದರೆ ಯಾವುದಾದರೂ ಲೇಖನವು ಜಾಲತಾಣದಲ್ಲಿ ನಿರೀಕ್ಷಿಸಿದಂತೆ ಇಲ್ಲದಿದ್ದರೆ, ನನ್ನಲ್ಲಿಯ ‘ಅಪೇಕ್ಷೆ ಪಡುವುದು’ ಈ ಅಹಂಕಾರದ ಕಾರಣದಿಂದಾಗಿ ‘ನನಗೆ ಅದರಲ್ಲಿ ಸುಧಾರಣೆ ಮಾಡಬೇಕಾಗಿದೆ, ನಾವು ಅದರಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇವೆ’ ? ಎನ್ನುವ ವಿಚಾರಗಳಿಂದ ನಾನು ಬಹಳ ಅಸ್ಥಿರಗೊಳ್ಳುತ್ತೇನೆ. ಅದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಮೊದಲು ಏನನ್ನೂ ಮಾಡುತ್ತಿರಲಿಲ್ಲ. ಈಗ ನಾನು ನನ್ನ ಸ್ತರದಲ್ಲಿ ಸಾಧಕರಿಗೆ ‘ನಾವು ಇಲ್ಲಿ ಕಡಿಮೆ ಬೀಳುತ್ತಿದ್ದೇವೆ’ ಎಂದು ಹೇಳುತ್ತಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿಮ್ಮ ಸೇವೆಯ ಸ್ವರೂಪವೇನಿದೆ ? ಬಂದಿರುವ ಲೇಖನಗಳನ್ನು ಜಾಲತಾಣದಲ್ಲಿ ‘ಅಪ್ಲೋಡ್’ ಮಾಡುವುದೋ ಅಥವಾ ಲೇಖನಗಳನ್ನು ಬರೆಯುವುದೋ ?

ಶ್ರೀ. ಅಭಿಷೇಕ ಪೈ : ಲೇಖನಗಳನ್ನು ಜಾಲತಾಣದಲ್ಲಿ ‘ಅಪ್ಲೋಡ್’ ಮಾಡುವುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಯಾವ ಲೇಖನಗಳು ಉತ್ತಮ ಗುಣಮಟ್ಟದ್ದಾಗಿಲ್ಲವೋ ಅವುಗಳ ವಿಷಯದಲ್ಲಿ ವಿಚಾರ ಹೇಗಿರಬೇಕು ? ಮೊದಲು, ಜಾಲತಾಣದಲ್ಲಿ ‘ಅಪ್ಲೋಡ್’ ಮಾಡಲು ನಮ್ಮಲ್ಲಿ ಒಂದೇ ಒಂದು ಲೇಖನ ಇರಲಿಲ್ಲ. ಈಗ ಕೆಲವು ಲೇಖನಗಳು ಬರುತ್ತಿವೆ. ಕಾಲ ಕಳೆದಂತೆ, ಮತ್ತಷ್ಟು ಉತ್ತಮ ಲೇಖನಗಳು ಬರುವವು. ಅವುಗಳ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಗುಣಮಟ್ಟವೂ ಉತ್ತಮವಾಗುತ್ತವೆ. ಅದರ ಬಗ್ಗೆ ಚಿಂತಿಸಬಾರದು. ನಾವು ನಮ್ಮ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದೇವಲ್ಲ ? ಅಷ್ಟು ಸಾಕು. ನಿಮಗೆ ಅರ್ಥವಾಯಿತಲ್ಲ ?

ಶ್ರೀ. ಅಭಿಷೇಕ ಪೈ : ಹೌದು. ‘ಅದರೊಂದಿಗೆ ಅದರಲ್ಲಿ ಏನಾದರೂ ಸುಧಾರಣೆಗಳನ್ನು ಮಾಡಲು ಸಾಧ್ಯವಿದ್ದರೆ, ಅದನ್ನು ಜವಾಬ್ದಾರ ಸಾಧಕರಿಗೆ ಬರೆದು ಕೊಡುವುದು’ ಈ ರೀತಿಯಲ್ಲಿಯೂ ಪ್ರಯತ್ನಿಸುತ್ತಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅಷ್ಟು ಸಾಕು. ಹೆಚ್ಚು ವಿಚಾರ ಮಾಡಬಾರದು.

೧೫. ಆಪತ್ಕಾಲದಲ್ಲಿ ಗುರುಗಳ ಮೇಲೆ ಶ್ರದ್ಧೆಯಿಟ್ಟು ಪ್ರತಿಯೊಂದು ಸೇವೆಯನ್ನು ಮಾಡುವುದು ಅವಶ್ಯಕವಾಗಿದೆ !

ಶ್ರೀ. ಅಭಿಷೇಕ ಪೈ : ಮುಂದೆ ಆಪತ್ಕಾಲದ ತೀವ್ರತೆ ಹೆಚ್ಚಾಗಲಿದೆ. ತಮ್ಮ ಆಪತ್ಕಾಲ ಸಹನೀಯವಾಗಲು ಯಾವ ಸಾಧಕರು ಯಾವ ಪ್ರಯತ್ನವನ್ನು ಮಾಡಬೇಕು ? ಈ ರೀತಿಯ ಬಹಳಷ್ಟು ವಿಚಾರಗಳು ನನ್ನ ಮನಸ್ಸಿಗೆ ಬರುತ್ತಿದ್ದವು. ಆ ಸಮಯದಲ್ಲಿ, ‘ಎಲ್ಲರನ್ನೂ ಆಪತ್ಕಾಲದಿಂದ ಹೊರತರುವವರು ನೀವೇ ಇದ್ದೀರಿ’ ಎಂಬ ನಿಮ್ಮ ಮೇಲಿನ ನನ್ನ ಶ್ರದ್ಧೆ ಕಡಿಮೆಯಾಯಿತು. ನನ್ನ ಮನಸ್ಸಿನಲ್ಲಿ ಈ ವಿಚಾರ ಬಹಳ ಹೆಚ್ಚಾಯಿತು. ನನ್ನ ಮನಸ್ಸಿನಲ್ಲಿರುವ ಈ ವಿಚಾರ ಕೇವಲ ನನ್ನ ತಂದೆ-ತಾಯಿ ಅಥವಾ ಸಂಬಂಧಿಕರ ಬಗ್ಗೆ ಮಾತ್ರವಿರಲಿಲ್ಲ, ಬದಲಾಗಿ ಎಲ್ಲ ಸಾಧಕರ ಬಗ್ಗೆ ಇತ್ತು. ‘ನಾವೇನು ಮಾಡಬಹುದು ?’ ಇನ್ನೂ ಏನಾದರೂ ಅಭ್ಯಾಸ ಮಾಡಬೇಕೇ ? ಎಲ್ಲರಿಗೂ ತಲುಪಿಸಬಹುದಾದಂತಹ ಏನಾದರೂ ಮಾಹಿತಿ ಹೊರಗಿನಿಂದ ಸಿಗಬಹುದೇ ? ‘ಇಂತಹ ವಿಚಾರಗಳಿಂದ ಕೆಲವು ದಿನಗಳನ್ನು ವ್ಯರ್ಥ ಮಾಡಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಯಾವುದರ ಬಗ್ಗೆಯೂ ವಿಚಾರ ಮಾಡಬಾರದು; ಏಕೆಂದರೆ ನಮ್ಮಲ್ಲಿರುವ ಜ್ಞಾನ ಪಡೆಯುವ ಸಾಧಕರಾಗಿರುವ ಸುಶ್ರೀ(ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಶ್ರೀ. ನಿಷಾದ ದೇಶಮುಖ (ಆಧ್ಯಾತ್ಮಿಕ ಮಟ್ಟ ಶೇ. ೬೩) ಮತ್ತು ಶ್ರೀ. ರಾಮ ಹೊನಪ ಇವರು ಪಡೆಯುವ ಜ್ಞಾನವು ಯಾವ ಗುಣಮಟ್ಟದ್ದಾಗಿದೆ ?

ಋಷಿಮುನಿಗಳು ವೇದಗಳು, ಉಪನಿಷತ್ತುಗಳು ಮತ್ತು ಪುರಾಣ ಗಳನ್ನು ಬರೆದಿದ್ದಾರೆ. ನಮ್ಮ ಸಾಧಕರಿಗೆ ಸಿಗುವ ಜ್ಞಾನವು ಅಷ್ಟು ಗುಣಮಟ್ಟದ್ದಾಗಿದೆ. ಆ ಸಮಯದಲ್ಲಿ, ಋಷಿಮುನಿಗಳು ಹೇಳುವುದು ಎಲ್ಲರಿಗೂ ಒಪ್ಪಿಗೆಯಾಗುತ್ತಿತ್ತು. ಆ ವಿಷ ಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಈ ಕಲಿಯುಗದಲ್ಲಿ, ನಾವು ಈ ೩ ಜ್ಞಾನಪಡೆಯುವ ಸಾಧಕರನ್ನು ಪಡೆದಿದ್ದೇವೆ. ಅವರ ಕಾರ್ಯ ಅನೇಕ ಶತಮಾನಗಳು ಮತ್ತು ಸಾವಿರಾರು ವರ್ಷಗಳ ವರೆಗೆ ಮುಂದುವರಿಯುವುದು; ಏಕೆಂದರೆ ಈಗ, ‘ಕಲಿಯುಗ’ ವಿಜ್ಞಾನದ ಯುಗವಾಗಿದೆ. ‘ಏಕೆ ಮತ್ತು ಹೇಗೆ ?’ (How and Why ?) ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ಈ ಎಲ್ಲಾ ಪ್ರಶ್ನೆಗಳ ಉತ್ತರಗಳು ಈ ೩ ಜ್ಞಾನಪಡೆಯುವ ಸಾಧಕರಲ್ಲಿ ಈಗಾಗಲೇ ಸಿದ್ಧವಿವೆ. ಅವುಗಳ ಬಹಳಷ್ಟು ಗ್ರಂಥಗಳಾಗಲಿವೆ; ಆದರೆ ಈಗ ಆಪತ್ಕಾಲವಿರುವುದರಿಂದ, ನಾವು ಅವರಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ‘ನಾನು ಇನ್ನೇನು ಮಾಡಲಿ ?’ ‘ನಾನು ಏನು ಬರೆಯಲಿ ?’, ಈ ವಿಚಾರನ್ನೇ ಮಾಡಬೇಕಾಗಿಲ್ಲ. ನಮ್ಮ ಬಳಿ ಬರೆದಿರುವ ಎಲ್ಲವೂ ಸಿದ್ಧವಾಗಿದೆ.

ಶ್ರೀ. ಅಭಿಷೇಕ ಪೈ : ನನಗೆ ಇದೇ ಅನುಭೂತಿ ಬಂದಿತು. ಕೆಲವು ದಿನಗಳ ನಂತರ, ನನ್ನ ವಿಚಾರಗಳಲ್ಲಿ ಅಕಸ್ಮಾತ ಬದಲಾವಣೆಯಾಯಿತು. ನೀವೇ ಮಾಡುವವರು ಮತ್ತು ಮಾಡಿಸಿಕೊಳ್ಳುವವರು ಆಗಿದ್ದೀರಲ್ಲ ? ಹಾಗಾಗಿ ನನಗೆ ಅದರ ಬಗ್ಗೆ ಚಿಂತೆ ಮಾಡುವ ಆವಶ್ಯಕತೆಯಿಲ್ಲ.

ಡಾ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಬಹಳ ಒಳ್ಳೆಯದು ! ಈಶ್ವರನು ಹೇಗೆ ಕಲಿಸುತ್ತಾನಲ್ಲ ?

ಶ್ರೀ. ಅಭಿಷೇಕ ಪೈ : ಈ ವಿಚಾರವನ್ನು ನಾನು ನನ್ನ ತಂದೆ-ತಾಯಿ ಯವರಿಗೆ ಹೇಳುವವನೇ ಇದ್ದೆ, ಅಷ್ಟರಲ್ಲಿ ನನಗೆ ಅವರಿಂದಲೇ ಕರೆ ಬಂತು ಮತ್ತು ಅವರು ನನಗೆ, ‘ನಮ್ಮ ಬಗ್ಗೆ ಯಾವುದೇ ಚಿಂತೆ ಮಾಡಬೇಡ; ಏಕೆಂದರೆ ಮಂಗಳೂರಿನ ಪೂ. ರಮಾನಂದ ಅಣ್ಣ (ಸನಾತನ ಸಂಸ್ಥೆಯ ೭೫ ನೇ ಸಂತ ರಮಾನಂದ ಗೌಡ, ವಯಸ್ಸು ೪೮) ಅವರು ಸ್ವತಃ ನಮಗೆ ಕರೆ ಮಾಡಿದರು ಮತ್ತು ನಮ್ಮ ಆರೋಗ್ಯದ ಬಗ್ಗೆ ವಿಚಾರಿಸಿದರು’ ಎಂದು ಹೇಳಿದರು. ಆಗ ನನಗೆ ‘ನನ್ನ ಆಲೋಚನೆ ತಪ್ಪಾಗಿವೆ ಮತ್ತು ನನ್ನ ಶ್ರದ್ಧೆ ಎಷ್ಟು ಕಡಿಮೆ ಬೀಳುತ್ತಿದೆ’ ಎನ್ನುವುದು ನನ್ನ ಗಮನಕ್ಕೆ ಬಂದಿತು. (ಮುಕ್ತಾಯ)