ಭಯೋತ್ಪಾದನೆ ಇದು ಇಸ್ಲಾಂಗೆ ಅಂಟಿದ ಪಿಡುಗು! – ಜಮೀಯತ್ ಉಲೇಮಾ-ಎ-ಹಿಂದ್

ನವದೆಹಲಿ – ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಜಮೀಯತ್ ಉಲೇಮಾ-ಎ-ಹಿಂದ್ ಖಂಡಿಸಿದೆ. ಸಂಘಟನೆಯಿಂದ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಸರಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯು ಒತ್ತಾಯಿಸಿದೆ. ಜಮೀಯತ್ ಉಲೇಮಾ-ಎ-ಹಿಂದ್, “ಭಯೋತ್ಪಾದನೆಯು ಒಂದು ಪಿಡುಗು ಆಗಿದ್ದು, ಅದು ಶಾಂತಿ ಮತ್ತು ಮಾನವೀಯತೆಯ ಮೇಲೆ ಆಧಾರಿತವಾದ ಇಸ್ಲಾಂನ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ; ಆದ್ದರಿಂದ ಇದರ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬ ಮುಸಲ್ಮಾನನ ನೈತಿಕ ಹೊಣೆಗಾರಿಕೆಯಾಗಿದೆ.”, ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಈ ಗ್ಯದ್ದಲವನ್ನು ‘ಸ್ವಚ್ಛ’ ಗೊಳಿಸಲು ಜಮೀಯತ್ ಇಲ್ಲಿಯವರೆಗೆ ಯಾವ ಪ್ರಯತ್ನಗಳನ್ನು ಮಾಡಿದೆ?, ಎಂಬುದೂ ಜನರ ಮುಂದೆ ಬರಬೇಕು!
  • ಮದರಸಾಗಳಲ್ಲಿ ಮುಸಲ್ಮಾನ ಮಕ್ಕಳಿಗೆ ಏನು ಕಲಿಸಲಾಗುತ್ತಿದೆ?, ಅವರು ಮುಂದೆ ಏನು ಮಾಡುತ್ತಾರೆ?, ಎಂಬುದರ ಕುರಿತು ಜಮೀಯತ್ ಏಕೆ ಮಾತನಾಡುವುದಿಲ್ಲ?
  • ಮಸೀದಿಗಳಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ನಡೆಯುವ ದಾಳಿಗಳು, ಲವ್ ಜಿಹಾದ್, ಉಗುಳು ಜಿಹಾದ್ ಮುಂತಾದ ಜಿಹಾದ್‌ಗಳ ಬಗ್ಗೆ ಜಮೀಯತ್ ಮೌನವಾಗಿರುವುದೇಕೆ?, ಎಂಬುದನ್ನೂ ಅದು ಹೇಳಬೇಕು!