ನವದೆಹಲಿ – ಭಾರತವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿದ ನಂತರ, ಈಗ ಚೆನಾಬ್ ನದಿಗೆ ನಿರ್ಮಿಸಲಾದ ಬಗ್ಲಿಹಾರ್ ಅಣೆಕಟ್ಟಿನಿಂದ ಚೆನಾಬ್ ನದಿಯ ನೀರನ್ನು ತಡೆದಿದೆ. ಝೇಲಂ ನದಿಗೆ ನಿರ್ಮಿಸಲಾದ ಕಿಶನಗಂಗಾ ಅಣೆಕಟ್ಟಿನಿಂದ ಹರಿಯುವ ನೀರನ್ನು ಸಹ ತಡೆಯಲು ಪ್ರಯತ್ನಿಸಲಾಗುವುದು. ಭಾರತ ಸರಕಾರವು ಈ ಅಣೆಕಟ್ಟುಗಳಿಂದ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಅದರೊಂದಿಗೆ, ಈ ಅಣೆಕಟ್ಟುಗಳ ಮೂಲಕ ಭಾರತವು ಈ ನದಿಗಳಲ್ಲಿ ನೀರನ್ನು ಸಂಗ್ರಹಿಸಬಹುದು ಮತ್ತು ಬಿಡಬಹುದು.