Suhas Shetty Murder Case : ಹಿಂದೂ ಮುಖಂಡ ಸುಹಾಸ ಶೆಟ್ಟಿ ಕೊಲೆ ಪ್ರಕರಣದಲ್ಲಿ 7 ಮುಸ್ಲಿಮರು ಸೇರಿದಂತೆ 8 ಮಂದಿ ಬಂಧನ

ಮಂಗಳೂರು – ಹಿಂದೂ ಮುಖಂಡ ಸುಹಾಸ ಶೆಟ್ಟಿ ಅವರ ಕೊಲೆ ಪ್ರಕರಣದಲ್ಲಿ 8 ಜನರನ್ನು ಬಂಧಿಸಲಾಗಿದೆ. ಅಬ್ದುಲ ಸಫ್ವಾನ (29 ವರ್ಷ), ನಿಯಾಜ (28 ವರ್ಷ), ಮೊಹಮ್ಮದ ಮುಜಮ್ಮಿಲ (32 ವರ್ಷ), ಕಲಂದರ ಶಫಿ (31 ವರ್ಷ), ಮೊಹಮ್ಮದ ರಿಜ್ವಾನ (28 ವರ್ಷ), ಆದಿಲ ಮೆಹರೂಫ, ರಂಜಿತ (19 ವರ್ಷ) ಮತ್ತು ನಾಗರಾಜ (20 ವರ್ಷ) ಬಂಧಿತರಾದವರ ಹೆಸರುಗಳು. ಆರೋಪಿಗಳು ಮಂಗಳೂರಿನ ಬಜ್ಪೆ ಮತ್ತು ಚಿಕ್ಕಮಗಳೂರಿನ ಕಳಸ ಪಟ್ಟಣದ ನಿವಾಸಿಗಳು. ಶೀಘ್ರದಲ್ಲೇ ಇನ್ನೂ 2 ಶಂಕಿತರನ್ನು ಬಂಧಿಸುವ ಸಾಧ್ಯತೆ ಇದೆ. ಈ ಕೊಲೆಯಲ್ಲಿ 6 ಆರೋಪಿಗಳು ನೇರವಾಗಿ ಭಾಗಿಯಾಗಿದ್ದರು.

1. ಇದರಲ್ಲಿ ಅಬ್ದುಲ ಸಫ್ವಾನ ಮುಖ್ಯ ಆರೋಪಿ ಎಂದು ಹೇಳಲಾಗುತ್ತಿದೆ. 2023 ರಲ್ಲಿ ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಸಫ್ವಾನನನ್ನು ಕೊಲ್ಲುವ ಉದ್ದೇಶದಿಂದಲೇ ದಾಳಿ ನಡೆಸಲಾಗಿತ್ತು. ಈ ದಾಳಿಯನ್ನು ಸುಹಾಸ ಶೆಟ್ಟಿ ಮತ್ತು ಆತನ ಸಹಚರರಾದ ಪ್ರಶಾಂತ ಮತ್ತು ಧನರಾಜ ಸೇರಿ ಮಾಡಿದ್ದರು. ಈ ದಾಳಿಯ ಸೇಡು ತೀರಿಸಿಕೊಳ್ಳಲು ಸಫ್ವಾನನು ಶೆಟ್ಟಿಯನ್ನು ಕೊಲ್ಲಲು ಸಂಚು ರೂಪಿಸಿದ್ದನು. ಆತನು ಈ ಹಿಂದೆ ಇದೇ ರೀತಿ ಎರಡು ಬಾರಿ ಪ್ರಯತ್ನಿಸಿದ್ದನು.

2. ಪೊಲೀಸ ಆಯುಕ್ತರು, ಮುಖ್ಯ ಆರೋಪಿ ಅಬ್ದುಲ ಸಫ್ವಾನ್ ಫಾಝಿಲ್ ಸಹೋದರ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿದ್ದನು. ಹತ್ಯೆ ಮಾಡಲು ಸಫ್ವಾನನಿಗೆ 5 ಲಕ್ಷ ರೂಪಾಯಿ ಕೊಡುವುದಾಗಿ ಆದಿಲ್ ಭರವಸೆ ನೀಡಿದ್ದನು. 3 ಲಕ್ಷ ರೂಪಾಯಿ ಮುಂಗಡ ಹಣ ಪಡೆದ ನಂತರ ಸಫ್ವಾನ್ ದಾಳಿ ನಡೆಸಲು ಒಂದು ತಂಡವನ್ನು ಸಿದ್ಧಪಡಿಸಿದ್ದನು.

ಸಂಪಾದಕೀಯ ನಿಲುವು

ಇಂತಹವರ ವಿರುದ್ಧ ತ್ವರಿತ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಯಾಗುವಂತೆ ಹಿಂದೂ ಸಂಘಟನೆಗಳು ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹೇರಬೇಕು !