ಕಾಂಗ್ರೆಸ್ ಸರಕಾರದ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ
ಬೆಂಗಳೂರು – ನಾವೆಲ್ಲರೂ ಭಾರತೀಯರು. ನಮಗೆ ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನವು ಯಾವಾಗಲೂ ನಮ್ಮ ಶತ್ರು ರಾಷ್ಟ್ರವಾಗಿದೆ. ನಾನು ಪಾಕಿಸ್ತಾನಕ್ಕೆ ಹೋಗಿ ಹೋರಾಡಲು ಸಿದ್ಧನಿದ್ದೇನೆ. ಮೋದಿ, ಶಹಾ ನನಗೆ ಆತ್ಮಾಹುತಿ ಬಾಂಬ್ ನೀಡಿ, ನಾನು ಅದನ್ನು ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗಿ ದಾಳಿ ಮಾಡುತ್ತೇನೆ ಎಂದು ಕಾಂಗ್ರೆಸ್ ಸರಕಾರದ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ, ಈ ಹೇಳಿಕೆಯ ನಂತರ ಸುತ್ತಮುತ್ತಲಿನವರೆಲ್ಲರೂ ನಗಲು ಪ್ರಾರಂಭಿಸಿದರು. ಅದಕ್ಕೆ ಖಾನ್, ನಾನು ತಮಾಷೆ ಮಾಡುತ್ತಿಲ್ಲ ಅಥವಾ ಹಾಸ್ಯ ಮಾಡುತ್ತಿಲ್ಲ, ನಾನು ಇದರ ಬಗ್ಗೆ ತುಂಬಾ ಗಂಭೀರವಾಗಿದ್ದೇನೆ. ಭಯೋತ್ಪಾದನೆಯನ್ನು ಎದುರಿಸಲು ಪ್ರತಿಯೊಬ್ಬ ಭಾರತೀಯನು ಒಗ್ಗೂಡಬೇಕು, ಎಂದು ಹೇಳಿದರು.
ಸಂಪಾದಕೀಯ ನಿಲುವುಜಮೀರ್ ಖಾನ್ ಅವರು ಪಾಕಿಸ್ತಾನಕ್ಕೆ ಹೋಗಿ ಹಾಗೆ ಮಾಡುವುದಕ್ಕಿಂತ ಮತ್ತು ಅದಕ್ಕಾಗಿ ಬಾಂಬ್ ಕೇಳುವುದಕ್ಕಿಂತ ಭಾರತದಲ್ಲಿನ ಪಾಕಿಸ್ತಾನ ಪ್ರೇಮಿ ಮುಸ್ಲಿಮರ ವಿರುದ್ಧ ಹೋರಾಟ ಪ್ರಾರಂಭಿಸಿ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಯತ್ನಿಸಲಿ ! |