‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಉಪಸ್ಥಿತನಾಗುವೆನೆಂದು ಭರವಸೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್!

ಎಡದಿಂದ ಶ್ರೀ. ಸುನೀಲ್ ಘನವಟ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶ್ರೀ. ಅಭಯ ವರ್ತಕ್ ಮತ್ತು ಶಾಸಕ ಡಾ. ಪರಿಣೀತಾ ಫುಕೆ.

ಮುಂಬಯಿ – ಸನಾತನ ಸಂಸ್ಥೆಯ ವತಿಯಿಂದ ಗೋವಾದಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಉಪಸ್ಥಿತನಾಗುವೆನೆಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಆಹ್ವಾನ ಮಾಡಲು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಅವರು ಇತ್ತೀಚೆಗೆ ಶ್ರೀ. ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದರು. ಮೇ ೧೭ ರಿಂದ ೧೯ ರವರೆಗೆ ಗೋವಾದ ಫೊಂಡಾದ ಫರ್ಮಾಗುಡಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಈ ಮಹೋತ್ಸವ ನಡೆಯಲಿದೆ. ‘ಈ ಕಾರ್ಯಕ್ರಮಕ್ಕೆ ಖಂಡಿತ ಬರುತ್ತೇನೆ’ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಂಘಟಕರಾದ ಶ್ರೀ. ಸುನೀಲ ಘನವಟ್ ಮತ್ತು ಭಾಜಪ ಶಾಸಕ ಡಾ. ಪರಿಣೀತಾ ಫುಕೆ ಉಪಸ್ಥಿತರಿದ್ದರು.