ವೃಂದಾವನ (ಉತ್ತರ ಪ್ರದೇಶ) – ಆಶ್ರಮವೊಂದರಲ್ಲಿ, ಮುಸ್ಲಿಂ ಕುಟುಂಬದ 8 ಸದಸ್ಯರು ವೇದ ಮಂತ್ರಗಳ ಪಠಣದ ಮೂಲಕ ಹಿಂದೂ ಧರ್ವನ್ನು ಸ್ವೀಕರಿಸಿದರು. ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರು ಪ್ರವೇಶಿಸಲು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಅವರು ಹೇಳಿದರು. ಈ ಕುಟುಂಬದ ಮುಖ್ಯಸ್ಥ ಜಾಕೀರ್ (ವಯಸ್ಸು 50), ಹಿಂದೂ ಧರ್ಮ ಸ್ವೀಕರಿಸಿದ ನಂತರ ತನ್ನ ಹೆಸರನ್ನು ಜಗದೀಶ್ ಎಂದು ಬದಲಾಯಿಸಿದ್ದಾನೆ. ಈ ಬಗ್ಗೆ ಜಗದೀಶ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಮ್ಮ ಪೂರ್ವಜರು ಮೊಘಲರ ಕಾಲದವರೆಗೂ ಹಿಂದೂಗಳಾಗಿದ್ದರು. ನಂತರ, ಅವರ ಪೂರ್ವಜರನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಯಿತು. “ಯಾರದೇ ಒತ್ತಡಕ್ಕೂ ಮಣಿಯದೆ ನಾವು ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿದ್ದೇವೆ” ಎಂದು ಅವರು ಈ ಸಮಯದಲ್ಲಿ ಹೇಳಿದರು.
ಈ ಬಗ್ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಜಗದೀಶ್ ಅವರ ಕುಟುಂಬದಲ್ಲಿ ಅವರ ಪತ್ನಿ, ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸೇರಿದ್ದಾರೆ. ಅವರೆಲ್ಲರೂ ಅಧಿಕೃತವಾಗಿ ಈಗ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.