Pakistan Threat : ‘ಭಾರತವು ಸಿಂಧೂ ನದಿಗೆ ಅಣೆಕಟ್ಟು ಕಟ್ಟಿದರೆ, ಅದರ ಮೇಲೆ ದಾಳಿ ಮಾಡುವೆವು!’

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಂದ ಪುನಃ ಬೆದರಿಕೆ

ಇಸ್ಲಾಮಾಬಾದ (ಪಾಕಿಸ್ತಾನ) – ಒಂದು ವೇಳೆ ಭಾರತವು ಸಿಂಧೂ ನದಿಗೆ ಯಾವುದೇ ಅಣೆಕಟ್ಟು ಕಟ್ಟಿದರೆ, ಪಾಕಿಸ್ತಾನವು ಅದರ ಮೇಲೆ ದಾಳಿ ಮಾಡುತ್ತದೆ. ದಾಳಿಯನ್ನು ಕೇವಲ ಗುಂಡುಗಳಿಂದ ತೋರಿಸಲಾಗುವುದಿಲ್ಲ, ನೀರನ್ನು ತಡೆಯುವುದು ಸಹ ಒಂದು ದಾಳಿಯಾಗಿದೆ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮತ್ತೊಮ್ಮೆ ಬೆದರಿಕೆ ನೀಡಿದ್ದಾರೆ. ಅವರು ಒಂದು ಸುದ್ದಿ ವಾಹಿನಿಗೆ ಸಂದರ್ಶನ ನೀಡುವಾಗ ಮಾತನಾಡುತ್ತಿದ್ದರು.

ಖ್ವಾಜಾ ಆಸಿಫ್ ಅವರು, ಭಾರತದ ಆರೋಪಗಳನ್ನು ಅಂತರರಾಷ್ಟ್ರೀಯ ಸಮುದಾಯವು ತಿರಸ್ಕರಿಸಿದೆ. ಮೋದಿ ಸರಕಾರದ ಬಳಿ ತಮ್ಮ ಹೇಳಿಕೆಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದರು. (ಹಗಲುಗನಸು ಕಾಣುವ ಪಾಕಿಸ್ತಾನದ ಸಚಿವರು! ಇಂತಹ ಹೇಳಿಕೆಗಳು ಪಾಕಿಸ್ತಾನದ ಅಜ್ಞಾನಿ ಮತ್ತು ಹಳ್ಳಿಯ ನಾಗರಿಕರನ್ನು ಸಂತೋಷಪಡಿಸಲು ಇದ್ದರೂ, ಜಗತ್ತಿನ ದೃಷ್ಟಿಯಿಂದ ಇದು ಹಾಸ್ಯಾಸ್ಪದವಾಗಿದೆ! – ಸಂಪಾದಕರು)

ಸಂಪಾದಕೀಯ ನಿಲುವು

ಪಾಕಿಸ್ತಾನವು ಇಂತಹ ಸಾಹಸವನ್ನಾದರೂ ಮಾಡಿ ನೋಡಲಿ, ಅದಕ್ಕೆ ಸಿಗುವ ಪ್ರತ್ಯುತ್ತರದಿಂದ ಪಾಕಿಸ್ತಾನವೇ ಉಳಿಯುವುದಿಲ್ಲ!