
ದೆಹಲಿ – ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿ ಪ್ರತಿಯೊಬ್ಬರೂ ಅನುಮತಿ ಪಡೆದು ಶಸ್ತ್ರಾಸ್ತ್ರಗಳನ್ನು ಹೊಂದಿರಬೇಕು. ಅದಕ್ಕಾಗಿ ಎಲ್ಲರೂ ಜಿಲ್ಲಾ ದಂಡಾಧಿಕಾರಿಗಳ ಮೂಲಕ ಅಧಿಕೃತ ಶಸ್ತ್ರಾಸ್ತ್ರ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬೇಕು. ಯಾರಿಗೆ ಅಧಿಕೃತ ಶಸ್ತ್ರಾಸ್ತ್ರ ಅನುಮತಿ ನೀಡಲಾಗುವುದಿಲ್ಲವೋ, ಅವರು ಅದಕ್ಕಾಗಿ ಕಾನೂನು ಹೋರಾಟ ನಡೆಸಬೇಕು. ಮನೆಯಲ್ಲಿ ಕೇವಲ ಚಾಕುವನ್ನು ಇಟ್ಟುಕೊಂಡು ಕೆಲಸ ನಡೆಯುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು ಪಹಲ್ಗಾಮ್ನಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಚರ್ಚಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.
🛡️ ‘Knives Won’t Protect Your Family’: SC Advocate @Vishnu_Jain1 Urges Citizens to Apply for Arms Licenses Now 🔫🇮🇳
In the wake of the #PahalgamTerrorAttack on Hindus, he says every law-abiding Indian must take charge of their safety by applying through District Magistrates and… pic.twitter.com/NzW7xk5jwf
— Sanatan Prabhat (@SanatanPrabhat) May 3, 2025
ಈ ಚರ್ಚಾಗೋಷ್ಠಿಯಲ್ಲಿ ಜಿಜ್ಞಾಸು ಒಬ್ಬರು ‘ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆ ಇರುತ್ತದೆ. ಅದರಲ್ಲಿ ದೇವತೆಯ ರೂಪದಲ್ಲಿ ಚಾಕುವನ್ನು ಸ್ಥಾಪಿಸಿದರೆ ಅದರೊಂದಿಗೆ ನಮ್ಮ ಬದ್ಧತೆ ಉಳಿಯುತ್ತದೆ’ ಎಂದು ಸಲಹೆ ನೀಡಿದರು. ಅದರ ಬಗ್ಗೆ ಮಾತನಾಡಿದ ನ್ಯಾಯವಾದಿ ಜೈನ್ ಅವರು ಮೇಲೆ ತಿಳಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಮಾತು ಮುಂದುವರೆಸಿ, ಸದರಿ ಅರ್ಜಿಯನ್ನು ಹೇಗೆ ಸಲ್ಲಿಸುವುದು?, ಎಂಬುದರ ಕುರಿತು ನಾನು ಮಾರ್ಗದರ್ಶನ ನೀಡುತ್ತೇನೆ ಎಂದರು.