ಸಾಯಿ ಸಂಸ್ಥಾನಕ್ಕೆ ಅನಾಮಧೆಯದಿಂದ ಬೆದರಿಕೆ ಇ-ಮೇಲ್!
ಶಿರ್ಡಿ – ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾದ ಶಿರ್ಡಿಯ ‘ಶ್ರೀ ಸಾಯಿಬಾಬಾ ಸಮಾಧಿ ಮಂದಿರ’ವನ್ನು ‘ಪೈಪ್ ಬಾಂಬ್’ನಿಂದ ಸ್ಫೋಟಿಸುವುದಾಗಿ ಬೆದರಿಕೆಯ ಇ-ಮೇಲ್ ಬಂದಿದೆ. ಮೇ 3 ರಂದು ಬೆಳಗ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಈ ಬೆದರಿಕೆ ಹಾಕಿದ್ದಾನೆ. ಈ ಇ-ಮೇಲ್ ಅನ್ನು ಯಾರು ಕಳುಹಿಸಿದ್ದಾರೆ? ಮತ್ತು ಎಲ್ಲಿಂದ ಬಂದಿದೆ?, ಎಂಬ ತನಿಖೆ ನಡೆಯುತ್ತಿದೆ. ಈ ಕುರಿತು ಶಿರ್ಡಿ ಸಂಸ್ಥಾನ ಮತ್ತು ಶಿರ್ಡಿ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಭದ್ರತಾ ಮುಖ್ಯಸ್ಥ ಪೊಲೀಸ ಉಪನಿರೀಕ್ಷಕ ರೋಹಿದಾಸ ಮಾಳಿ ಅವರು ಶಿರ್ಡಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬೆದರಿಕೆಯಿಂದ ಭಕ್ತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಶ್ರೀ ಸಾಯಿಬಾಬಾ ಸಮಾಧಿ ಮಂದಿರದ ಆವರಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಸಾಯಿ ಸಂಸ್ಥಾನಕ್ಕೆ ಈ ಹಿಂದೆಯೂ ಇಂತಹ ಬೆದರಿಕೆ ಇ-ಮೇಲ್ಗಳು ಬಂದಿದ್ದವು. ಅವುಗಳ ತನಿಖೆಯಿಂದ ಅವು ಸುಳ್ಳು ಎಂದು ತಿಳಿದುಬಂದಿತ್ತು. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರು ಇತ್ತೀಚೆಗೆ ಸಾಯಿಬಾಬಾ ಸಮಾಧಿಗೆ ಭೇಟಿ ನೀಡಿದ್ದರು. ಭಯೋತ್ಪಾದಕ ದಾಳಿಗೆ ಹೇಗೆ ಉತ್ತರಿಸಲಾಗುವುದು? ಎಂಬ ಪ್ರಶ್ನೆಗೆ ಅವರು ‘ಈಗ ಕೇವಲ ಆಕ್ಷನ್ (ಕ್ರಮ) ನೋಡಿ’ ಎಂದು ಸೂಚ್ಯವಾಗಿ ಹೇಳಿದ್ದರು. ಅವರ ಭೇಟಿ ಮುಗಿದ ಕೆಲವೇ ಗಂಟೆಗಳಲ್ಲಿ ಬೆದರಿಕೆ ಇ-ಮೇಲ್ ಬಂದಿದೆ.”
ಸಂಪಾದಕೀಯ ನಿಲುವುಹಿಂದೂ ದೇವಸ್ಥಾನಗಳಿಗೆ ಇಂತಹ ಬೆದರಿಕೆಗಳು ಬರುವುದು, ಪೊಲೀಸರ ಮತ್ತು ಭದ್ರತಾ ವ್ಯವಸ್ಥೆಗಳ ಮೇಲಿನ ಭಯ ಇಲ್ಲದಿರುವುದು ಸೂಚಿಸುತ್ತದೆ! |