ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಚೀನಾ ಕೈವಾಡ!

  • ಪಾಕ್ ಗೆ ಛೀಮಾರಿ ಹಾಕಿದ ಪಾಕಿಸ್ತಾನದ ನಿವೃತ್ತ ಮೇಜರ್ ಆದಿಲ್ ರಜಾ

  • ಚೀನಾದ ಹೇಳಿಕೆಯಂತೆ ಪಾಕ್ ಸೇನಾ ಮುಖ್ಯಸ್ಥರು ಪಹಲ್ಗಾಮ್ ದಾಳಿಯ ಸಂಚು ರೂಪಿಸಿದ್ದರು!

  • ಆಮದು ಸುಂಕದ ಯುದ್ಧದಿಂದ ಭಾರತವನ್ನು ಅಸ್ಥಿರಗೊಳಿಸಲು ಚೀನಾದ ಸಂಚು

ಇಸ್ಲಾಮಾಬಾದ್ (ಪಾಕಿಸ್ತಾನ) – ಪಹಲ್ಗಾಮ್ ಮೇಲಿನ ದಾಳಿಯ ಸಂಚನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ರೂಪಿಸಿದ್ದರು. ಪಾಕಿಸ್ತಾನವನ್ನು 10 ವರ್ಷಗಳ ಕಾಲ ಆಳುವುದೇ ಜನರಲ್ ಮುನೀರ್ ಅವರ ವೈಯಕ್ತಿಕ ಆಸೆಯಾಗಿದೆ. ಇದೆಲ್ಲವೂ ಒಂದೇ ಯೋಜನೆಯ ಭಾಗವಾಗಿದೆ. ಪಾಕಿಸ್ತಾನವು ಈ ದಾಳಿಯನ್ನು ಏಕಾಂಗಿಯಾಗಿ ಮಾಡಿಲ್ಲ. ಚೀನಾ ಪಾಕಿಸ್ತಾನವನ್ನು ಇದಕ್ಕೆ ಸಿದ್ಧಪಡಿಸಿದೆ ಎಂದು ಪಾಕ್ ನ ನಿವೃತ್ತ ಮೇಜರ್ ಆದಿಲ್ ರಜಾ ‘ಇಂಡಿಯಾ ಟುಡೆ’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

ಮೇಜರ್ (ನಿವೃತ್ತ) ಆದಿಲ್ ರಜಾ ಅವರು ಮಾತನಾಡಿ,

ಪಹಲ್ಗಾಮ್ ಮೇಲಿನ ದಾಳಿಗೂ ಚೀನಾಕ್ಕೂ ನೇರ ಸಂಬಂಧವಿಲ್ಲದಿದ್ದರೂ, ಭಾರತದ ದೌರ್ಬಲ್ಯದ ಲಾಭವನ್ನು ಚೀನಾ ಪಡೆಯುತ್ತದೆ ಎಂಬುದು ಸ್ಪಷ್ಟವಾಗಿದೆ. ಚೀನಿಯರು ಎಂದಿಗೂ ಪರಸ್ಪರ ಹೋರಾಡುವುದಿಲ್ಲ. ಅವರು ಎಂದಿಗೂ ತಮ್ಮನ್ನು ಇದರಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಚೀನಾ ಈಗಾಗಲೇ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದೆ ಮತ್ತು ಈಗ ಮುನೀರ್ ಅವರ ನಾಯಕತ್ವದಲ್ಲಿ ಪಾಕಿಸ್ತಾನವೂ ಕೂಡ ಚೀನಾ ವ್ಯಾಪ್ತಿಗೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಅಮೇರಿಕ ಮತ್ತು ಚೀನಾ ನಡುವಿನ ಸ್ಪರ್ಧೆಯೇ ಇವೆಲ್ಲದರ ಹಿಂದಿನ ಕಾರಣವಾಗಿದೆ. ಅಮೇರಿಕದ ಆಮದು ಸುಂಕದ ಯುದ್ಧದ ನಂತರ ದೊಡ್ಡ-ದೊಡ್ಡ ಸಂಸ್ಥೆಗಳು ಚೀನಾವನ್ನು ತೊರೆಯಲು ಸಿದ್ಧತೆ ನಡೆಸುತ್ತಿವೆ.

ಈ ಸಂಸ್ಥೆಗಳಿಗೆ ಭಾರತವು ಒಂದು ಉತ್ತಮ ಪರ್ಯಾಯವಾಗಿ ಕಾಣುತ್ತಿದೆ; ಆದರೆ ಭಾರತ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಚೀನಾ ಬಿಡುವುದಿಲ್ಲ. ಚೀನಾ ಜಗತ್ತಿನ ಕಾರ್ಖಾನೆ ಎಂಬ ಬಿರುದನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ತನ್ನ ಈ ಉದ್ದೇಶವನ್ನು ಸಫಲಗೊಳಿಸಲು ಚೀನಾಗಿರುವ ಉತ್ತಮ ಮಾರ್ಗವೆಂದರೆ ಭಾರತವನ್ನು ಅಸ್ಥಿರಗೊಳಿಸುವುದು; ಏಕೆಂದರೆ ಜಾಗತಿಕ ಸಂಸ್ಥೆಗಳು ಯುದ್ಧದಂತಹ ಪರಿಸ್ಥಿತಿ ಇರುವ ಸ್ಥಳಗಳಿಗೆ ಹೋಗಲು ಬಯಸುವುದಿಲ್ಲ ಎಂದು ಜನರಲ್ ಮುನೀರ್ ವಿವರಿಸಿದರು.

ಸಂಪಾದಕೀಯ ನಿಲುವು

  • ಪಾಕಿಸ್ತಾನದ ಮಾಜಿ ಸೇನಾಧಿಕಾರಿ ಇಂತಹ ಮಾಹಿತಿಯನ್ನು ನೀಡುತ್ತಿರುವುದು ಭಾರತೀಯ ಗುಪ್ತಚರರಿಗೆ ತಿಳಿದಿತ್ತೇ? ಭಾರತವು ಈಗ ಪಾಕ್ ಮತ್ತು ಚೀನಾ ಎರಡೂ ಗಡಿಗಳಲ್ಲಿ ಯುದ್ಧ ಮಾಡಲು ಸಿದ್ಧತೆ ನಡೆಸಬೇಕಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!
  • ಅಮೇರಿಕದ ಆಮದು ಸುಂಕ ಹೆಚ್ಚಳದ ಪರಿಣಾಮವೇ ಇದಾಗಿದ್ದು, ಬಹುಶಃ ಅಮೇರಿಕಕ್ಕೆ ಇವೆಲ್ಲವೂ ಮುಂಚೆಯೇ ತಿಳಿದಿದ್ದರಿಂದ ಅಚಾನಕ್ ಆಗಿ ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿದೆ ಎಂಬುದು ಇದರಿಂದ ತಿಳಿಯುತ್ತದೆ!