ರಾಷ್ಟ್ರೀಯ ತನಿಖಾ ದಳಕ್ಕೆ ಪಾಕ್ ವಿರುದ್ಧ ಸಿಕ್ಕಿದವು ಬಲವಾದ ಸಾಕ್ಷ್ಯಗಳು!

ಪಾಕಿಸ್ತಾನಿ ಭಯೋತ್ಪಾದಕರಿಗೆ ಸ್ಥಳೀಯರು ಸಹಾಯ ಮಾಡಿದ್ದೂ ಬಹಿರಂಗ!

ಪಹಲ್ಗಾಮ್ (ಜಮ್ಮು-ಕಾಶ್ಮೀರ) – ಬೈಸರಣ ಪ್ರದೇಶದಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಾಥಮಿಕ ವರದಿ ಬಹಿರಂಗವಾಗಿದೆ. ಈ ವರದಿಯ ಪ್ರಕಾರ, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಮತ್ತು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಸೇರಿ ಈ ದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಲಷ್ಕರ್-ಎ-ತೊಯ್ಬಾದ ಪಾಕಿಸ್ತಾನದ ಮುಖ್ಯ ಕಚೇರಿಯಲ್ಲಿ ಐಎಸ್ಐ ನಿರ್ದೇಶನದ ಮೇರೆಗೆ ಈ ಸಂಚನ್ನು ರೂಪಿಸಲಾಯಿತು. ದಾಳಿಯ ವೇಳೆ ಭಯೋತ್ಪಾದಕರು ಪಾಕ್ ಆಕ್ರಮಿತ ಕಾಶ್ಮೀರದ ಪ್ರಮುಖರ ಸಂಪರ್ಕದಲ್ಲಿದ್ದರು. ಉಗ್ರರಿಗೆ ಪಾಕಿಸ್ತಾನದಿಂದ ನಿರ್ದೇಶನ ಮತ್ತು ಹಣಕಾಸಿನ ನೆರವು ಸಹ ನೀಡಲಾಗಿತ್ತು. ಈ ದಾಳಿಯಲ್ಲಿ ಹಶೀಮ್ ಮೂಸಾ ಮತ್ತು ಅಲಿ ಉರ್ಫ್ ತಲ್ಹಾಭಾಯಿ ಎಂಬ ಇಬ್ಬರು ಮುಖ್ಯ ಭಯೋತ್ಪಾದಕರಿದ್ದರು. ಇವರಿಬ್ಬರೂ ಕೂಡ ಪಾಕಿಸ್ತಾನದ ಪ್ರಜೆಗಳಾಗಿದ್ದು, ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸಂಬಂಧಿಸಿದ್ದಾರೆ. ಈ ಉಗ್ರರಿಗೆ ಕಾಶ್ಮೀರದಲ್ಲಿ ವಾಸಿಸುತ್ತಿದ್ದ ಆದಿಲ್ ಥೋಕರ್ ಎಂಬಾತ ಸಹಾಯ ಮಾಡಿದ್ದನು. ಪಾಕಿಸ್ತಾನಿ ಭಯೋತ್ಪಾದಕರಿಗೆ ಸ್ಥಳೀಯರು ಸಹಾಯ ಮಾಡಿದ್ದೂ ಕೂಡ ಈ ವರದಿಯಲ್ಲಿ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಭಾರತವು ಎಷ್ಟೇ ತನಿಖೆ ನಡೆಸಿ ಪಾಕಿಸ್ತಾನಕ್ಕೆ ಎಷ್ಟೇ ಸಾಕ್ಷ್ಯಗಳನ್ನು ನೀಡಿದರೂ, ಪಾಕಿಸ್ತಾನವು ಅವನ್ನು ಎಂದಿಗೂ ಒಪ್ಪುವುದಿಲ್ಲ, ಎನ್ನುವುದು ಇದುವರೆಗಿನ ಇತಿಹಾಸವಾಗಿದೆ. ಮುಂದೆ ಇಂತಹ ತನಿಖೆಗಳಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಈ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗೊಳಿಸುವುದು ಅನಿವಾರ್ಯವಾಗಿದೆ!