ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್ನೆಸ್’ನಿಂದ ಪ್ರಶಸ್ತಿ ಪ್ರದಾನ !

ಕಣ್ಣೂರು (ಕೇರಳ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಹಾಗೂ ವಿಶ್ವಕಲ್ಯಾಣಕ್ಕಾಗಿ ಮಹರ್ಷಿಗಳ ಆಜ್ಞೆಯ ಮೇರೆಗೆ ದೇಶ-ವಿದೇಶಗಳಲ್ಲಿ ಲಕ್ಷಾಂತರ ಕಿಲೋಮೀಟರ್ ಸಂಚರಿಸುತ್ತಿರುವ, ಹಸಿವು-ಬಾಯರಿಕೆ, ಬಿಸಿಲು-ಮಳೆ ಎನ್ನದೆ ಧರ್ಮ ಪ್ರಚಾರ ಮಾಡುತ್ತಿರುವ ಮತ್ತು ಸೂಕ್ಷ್ಮ ಜ್ಞಾನದ ಅಪಾರ ಸಾಮರ್ಥ್ಯ ಹೊಂದಿರುವ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ‘ಓಂ ಶಿವ ಶಕ್ತಿ ಓಂ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇರಳದ ‘ಶಿವೋಹಂ ಟೆಂಪಲ್ ಆಫ್ ಕಾನ್ಷಿಯಸ್ನೆಸ್ ಟ್ರಸ್ಟ್’ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ‘ಸನಾತನ ಎಲಂ ವಾಸ್ತೂರತ್ನ’ದ ಕುಲಪತಿಗಳಾದ ಬ್ರಹ್ಮಶ್ರೀ ಡಾ. ಸೋಮನಾಥ ರಾಘವನ್ ಆಚಾರ್ಯ ಅವರು ಆಗಮಿಸಿದ್ದರು, ಹಾಗೆಯೇ ಗೌರವ ಅತಿಥಿಗಳಾಗಿ ‘ಕೃಷ್ಣಾ ಬಿಚ್ ರಿಸಾರ್ಟ್’ನ ‘ಶಿವೋಹಂ ಸ್ಪಿರಿಚ್ಯುಯಲ್ ವೆಲ್ನೆಸ್ ಸೆಂಟರ್’ನ ಮುಖ್ಯ ವೈದ್ಯರಾದ ಡಾ. ಜ್ಯೋತಿ ಶಮಿತ ಅವರನ್ನು ಆಹ್ವಾನಿಸಲಾಗಿತ್ತು.
ಬ್ರಹ್ಮಶ್ರೀ ಡಾ. ಸೋಮನಾಥ ರಾಘವನ್ ಆಚಾರ್ಯ ಅವರು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು. ಡಾ. ಜ್ಯೋತಿ ಶಮಿತ ಅವರು ಪ್ರಮಾಣಪತ್ರವನ್ನು ನೀಡಿದರು ಮತ್ತು ಸೌ. ಸುಧಾ ರವೀಂದ್ರನಾಥ ಅವರು ಪೊನ್ನಾಡ (ದಕ್ಷಿಣ ಭಾರತದಲ್ಲಿ ನೀಡಲಾಗುವ ಒಂದು ರೀತಿಯ ಶಾಲು)ವನ್ನು ನೀಡಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ತಮಿಳುನಾಡಿನ ಗೂಡಲೂರು ಇಲ್ಲಿಯ ಚಿಂತಾಮಣಿ ವಾಘೇಶ್ವರಿ ಮುಕಾಂಬಿಕಾ ದೇವಾಲಯದ ಮಠಾಧಿಪತಿ ಪ.ಪೂ. ಡಾ. ಬ್ರಹ್ಮ ಯೋಗಿನಿ ಶ್ರೀ ಶ್ರೀ ಶ್ರೀ ಮಾತಾ ಅಂಬಿಕಾ ಚೈತನ್ಯಮಯಿ ಅವರಿಗೂ ‘ಓಂ ಶಿವ ಶಕ್ತಿ ಓಂ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಮ್ಮ ಆಂತರಿಕ ಶಕ್ತಿ, ದೃಢ ನಿಶ್ಚಯ ಮತ್ತು ಕೃಪಾಶೀರ್ವಾದದಿಂದ ನೇತೃತ್ವ ವಹಿಸಿ ಮಾರ್ಗದರ್ಶನ ನೀಡುವ ಮಹಿಳೆಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪುರಸ್ಕಾರವನ್ನು ‘ಶಿವೋಹಂ ಸ್ಪಿರಿಚ್ಯುಯಲ್ ವೆಲ್ನೆಸ್ ಸೆಂಟರ್’ನ ಸಂಸ್ಥಾಪಕರಾದ ಡಾ. ಸಿ.ವಿ. ರವೀಂದ್ರನಾಥ್ ಅವರು ಘೋಷಿಸಿದ್ದರು.