ತಲೆಯನ್ನು ಚೀಲದಲ್ಲಿ ಹಾಕಿ ಮುಳುಗಿಸಿದರೆ, ದೇಹವನ್ನು ಕಾಲುವೆಗೆ ಎಸೆದನು!
ರುದ್ರಪುರ (ಉತ್ತರಾಖಂಡ) – ಉತ್ತರಾಖಂಡದ ಉಧಮ ಸಿಂಗ ನಗರ ಜಿಲ್ಲೆಯ ಖಾತಿಮಾ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ಗೆಳತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮತಾಂಧ ಆರೋಪಿಯು ಆಕೆಯ ಶಿರಚ್ಛೇದನ ಮಾಡಿ ತಲೆಯನ್ನು ಕಲ್ಲುಗಳಿಂದ ತುಂಬಿದ ಚೀಲದಲ್ಲಿ ಹಾಕಿ ಮುಳುಗಿಸಿದರೆ, ದೇಹವನ್ನು ಕಾಲುವೆಗೆ ಎಸೆದಿದ್ದಾನೆ. ಮೃತಳ ಸಹೋದರಿ ತನ್ನ ಸಹೋದರಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಳು. ಹರಿಯಾಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದಾರೆ. ತಲೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1. ಈ ಬಗ್ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಪೂಜಾ ಮಂಡಲ (32) ಎಂಬಾಕೆ ತನ್ನ ಕಿರಿಯ ಸಹೋದರಿ ಪುರಮಿಲಾ ಬಿಸ್ವಾಸ್ ಅವರೊಂದಿಗೆ ಗುರುಗ್ರಾಮ (ಹರಿಯಾಣ)ದ ಸ್ಪಾ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಳು. ಪೂಜಾ ಕೆಲವು ದಿನಗಳ ಹಿಂದೆ ಸಿತಾರಗಂಜ್ (ಉತ್ತರಾಖಂಡ) ಬಂದಿದ್ದಳು ಮತ್ತು ನಂತರ ಮನೆಗೆ ಹಿಂತಿರುಗಲೇ ಇಲ್ಲ.
2. ಪೂಜಾಳ ಕಿರಿಯ ಸಹೋದರಿ ಪುರಮಿಲಾ ಡಿಸೆಂಬರ್ 19 ರಂದು ಗುರುಗ್ರಾಮದ ಸೆಕ್ಟರ್ 5 ಪೊಲೀಸ್ ಠಾಣೆಯಲ್ಲಿ ಸಹೋದರಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದಳು. ಹರಿಯಾಣ ಪೊಲೀಸರು ಆಕೆಯನ್ನು ನಿರಂತರವಾಗಿ ಹುಡುಕುತ್ತಿದ್ದರು. ಅಂತಿಮವಾಗಿ ಪೊಲೀಸರು ಟ್ಯಾಕ್ಸಿ ಚಾಲಕ ಮುಷ್ತಾಕ ಅಲಿಯನ್ನು ಬಂಧಿಸಿದರು. ಆರೋಪಿ ಮುಷ್ತಾಕ ಅಲಿ ಸಿತಾರಗಂಜ್ ನ ನಿವಾಸಿಯಾಗಿದ್ದಾನೆ. ಐದುವರೆ ತಿಂಗಳ ಹಿಂದೆ ಪೂಜಾಳ ಕತ್ತು ಕೊಯ್ದು ಮೃತದೇಹವನ್ನು ಕಾಲುವೆಗೆ ಎಸೆದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
3. ಆರೋಪಿ ಮುಷ್ತಾಕ ಅಲಿಯು, ತಾನು 2022 ರಲ್ಲಿ ರುದ್ರಪುರ ಬಸ್ ನಿಲ್ದಾಣದಲ್ಲಿ ಪೂಜಾಳನ್ನು ಭೇಟಿಯಾದೆ, ನಂತರ ಇಬ್ಬರ ನಡುವೆ ಪರಿಚಯ ಹೆಚ್ಚಾಯಿತು. ಇಬ್ಬರ ನಡುವೆ ಪ್ರೇಮ ಸಂಬಂಧ ಏರ್ಪಟ್ಟಿತು; ಆದರೆ ಒಂದು ದಿನ ಆರೋಪಿ ಮುಷ್ತಾಕ ಬೇರೆಯ ಹುಡುಗಿಯನ್ನು ಮದುವೆಯಾದನು.
4. ಇದರಿಂದ ಇಬ್ಬರ ನಡುವೆ ಜಗಳ ನಡೆಯಿತು. ಒಂದು ದಿನ ಅವಕಾಶ ಸಿಕ್ಕಾಗ ಆರೋಪಿ ಮುಷ್ತಾಕ ಪೂಜಾಳನ್ನು ಖಾತಿಮಾದ ನಾದನ್ನಾ ಕಾಲುವೆಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದನು. ಅಲ್ಲಿ ಆತನು ಚಾಕುವಿನಿಂದ ಪೂಜಾಳ ಕತ್ತು ಕೊಯ್ದು ಕೊಲೆ ಮಾಡಿದನು.
ಸಂಪಾದಕೀಯ ನಿಲುವುಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವ ಮುಸ್ಲಿಮರು ಬಹುಸಂಖ್ಯಾತ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ನಾಶಪಡಿಸುತ್ತಿದ್ದಾರೆ ಮತ್ತು ಯಾವುದೇ ಸರಕಾರ ಈ ಕೃತ್ಯಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ, ಇದು ಹಿಂದೂಗಳಿಗೆ ನಾಚಿಕೆಗೇಡು! |