|
ದಿಂಡೋರಿ (ಮಧ್ಯಪ್ರದೇಶ) – ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರ ಮತ್ತು ಹಿಂದೂ ವಿರೋಧಿ ಪೋಸ್ಟ್ಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಇಲ್ಲಿನ ಅತಿಥಿ ಪ್ರಾಧ್ಯಾಪಕಿ ನಸೀಮ್ ಬಾನೊಗೆ ಜಾಮೀನು ನೀಡಲು ಇಲ್ಲಿನ ಜಿಲ್ಲಾ ನ್ಯಾಯಾಲಯವು ನಿರಾಕರಿಸಿದೆ. ‘ದೇಶವನ್ನೇ ಬೆಚ್ಚಿಬೀಳಿಸಿದ ಪಹಲ್ಗಾಮ್ನಲ್ಲಿನ ಭಯೋತ್ಪಾದಕ ಘಟನೆಯ ನಂತರ, ಕ್ರೂರ ಭಯೋತ್ಪಾದಕರನ್ನು ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ಹೋಲಿಸುವುದು ಗಂಭೀರ ಅಪರಾಧ. ಇಂತಹ ಸಮಯದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸುವುದು ಮತ್ತು ದೇಶ ವಿರೋಧಿ ಪೋಸ್ಟ್ಗಳನ್ನು ಪ್ರಸಾರ ಮಾಡುವುದು ಸಹ ಒಂದು ಗಂಭೀರ ಅಪರಾಧವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ,’ ಎಂದು ನ್ಯಾಯಾಲಯವು ಹೇಳಿದೆ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣವೆ, ಮಹಾವಿದ್ಯಾಲಯದ ಪ್ರಾಂಶುಪಾಲರು ಆರೋಪಿ ನಸೀಮ್ ಬಾನೋಗೆ ನೋಟಿಸ್ ಜಾರಿ ಮಾಡಿದ್ದರು. ಹಾಗೆಯೇ ಪೊಲೀಸರು ಅವಳನ್ನು ಬಂಧಿಸಿದ್ದರು.