ವಿವಿಧ ಮಾಧ್ಯಮಗಳಿಂದ ಭಾರತೀಯ ಪ್ರಾಚೀನ ಸಂಸ್ಕೃತಿಯನ್ನು ಪ್ರಚಾರ ಮಾಡುವ ದೆಹಲಿಯಲ್ಲಿನ ಪ್ರಖ್ಯಾತ ‘ಇಂಡೋಲಾಜಿಸ್ಟ್‌’ ಪ್ರಾ. ಡಾ.ಶಶಿಬಾಲಾ !

ಪ್ರಾ. ಡಾ. ಶಶಿಬಾಲಾ

ಪ್ರಖ್ಯಾತ ‘ಇಂಡೋಲಾಜಿಸ್ಟ್‌’ (ಭಾರತೀಯ ವಿದ್ಯೆ), ‘ಭಾರತೀಯ ವಿದ್ಯಾಭವನ’ದ ‘ಕೆ.ಎಮ್. ಮುನ್ಶಿ ಸೆಂಟರ್‌ ಫಾರ್‌ ಇಂಡೋಲಾಜಿ’ಯ ಅಧ್ಯಕ್ಷೆ (ಡೀನ್‌), ದೆಹಲಿಯಲ್ಲಿನ ಭಾರತೀಯ ವಿದ್ಯಾ ಭವನದ ಮುಖ್ಯ ಪ್ರಾಂಶುಪಾಲರಾದ ರಘು ವೀರಾ ಪ್ರಾ. ಡಾ. ಶಶಿಬಾಲಾ ಅವರು ವಿವಿಧ ಮಾಧ್ಯಮಗಳಿಂದ ಭಾರತೀಯ ಸಂಸ್ಕೃತಿ, ನಮ್ಮ ಪ್ರಾಚೀನ ಶಾಸ್ತ್ರಗಳ ಪ್ರಚಾರ-ಪ್ರಸಾರ ಮಾಡುತ್ತಿದ್ದಾರೆ. ಅವರ ಕಾರ್ಯದ ವ್ಯಾಪ್ತಿ ಹಾಗೂ ಸಂಕ್ಷಿಪ್ತ ಪರಿಚಯವನ್ನು ಈ ವಿಶೇಷ ಲೇಖನದಲ್ಲಿ ನೋಡೋಣ.

ಪ್ರಾ. ಡಾ. ಶಶಿಬಾಲಾ ವಿಶೇಷ ಲೇಖನ ಮಾಲೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಸೈನಿಕರು ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ರಾಷ್ಟ್ರ-ಧರ್ಮದ ರಕ್ಷಣೆಗಾಗಿ ‘ಸೈನಿಕ’ರಾಗಿ ಕಾರ್ಯ ಮಾಡುತ್ತಿದ್ದಾರೆ. ಅಂತಹ ಸೈನಿಕರ ಹಾಗೂ ಅವರ ಧರ್ಮರಕ್ಷಣೆಯ ಸಂಘರ್ಷವನ್ನು ಪರಿಚಯಿಸುವ ‘ಹಿಂದುತ್ವದ ಶಿಲೆದಾರ’ ಎಂಬ ಲೇಖನದ ಮೂಲಕ ಇತರರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

‘ಜೀ ೨೦’ರ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪ್ರಾ. ಡಾ. ಶಶಿಬಾಲಾ

೧. ಪ್ರಾ. ಡಾ. ಶಶಿಬಾಲಾ ಅವರು ಅಲಂಕರಿಸಿದ ಹಾಗೂ ಸದ್ಯ ಅಲಂಕರಿಸುತ್ತಿರುವ ಹುದ್ದೆಗಳು

ಅ. ‘ಸೀ ೨೦’/’ಜೀ ೨೦’ಯ ಅಂತರರಾಷ್ಟ್ರೀಯ ಸಲಹೆಗಾರ ಸಮಿತಿಯ ಸದಸ್ಯೆ (ಜೀ ೨೦ ಎಂದರೆ ೧೯ ದೇಶಗಳು ಮತ್ತು ಯುರೋಪಿಯನ್‌ ಯೂನಿಯನ್‌ (ಇದರಲ್ಲಿ ೨೭ ದೇಶಗಳಿವೆ) ಇವುಗಳ ವಿತ್ತಸಚಿವರು ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ಸಂಘಟನೆ)
ಆ. ‘ರಘುವಿರಾದ ೯ ಖಂಡಗಳ ಆಂಗ್ಲ-ಸಂಸ್ಕೃತ ಶಬ್ದಕೋಶ’ದ ಸಂಪಾದಕಿ
ಇ. ಮಾಜಿ ಸದಸ್ಯೆ : ಮಿಶನ್‌ ಉಚ್ಚಸ್ತರ ಸಮಿತಿ, ಭಾರತೀಯ ಜ್ಞಾನ ಪದ್ಧತಿ, ಶಿಕ್ಷಣ ಸಚಿವಾಲಯ
ಈ. ಸದಸ್ಯೆ : ಸೊಸೈಟಿ, ಮಕಾಯಸ, ಕೋಲಕಾತಾ
ಉ. ಅಧ್ಯಕ್ಷೆ : ಅಂತರರಾಷ್ಟ್ರೀಯ ಸಾಂಸ್ಕೃತಿಕ ಅಭ್ಯಾಸ ಪರಿಷತ್ತು, ಭಾರತ
ಊ. ಪ್ರಾ. ರಘು ವೀರಾ ಅವರು ಸ್ಥಾಪನೆ ಮಾಡಿದ ‘ಭಾರತೀಯ ಸಂಸ್ಕೃತಿ ಅಂತರರಾಷ್ಟ್ರೀಯ ಎಕಾಡೆಮಿ’ಯ ಕಾರ್ಯಕಾರೀ ಸದಸ್ಯೆ(ಪ್ರಸ್ತುತ ಸಂಚಾಲಕರು ಪ್ರಾ. ಲೋಕೇಶ ಚಂದ್ರ)
ಎ. ಸಲಹೆಗಾರರು : ಭಾರತೀಯ ಸಂಸ್ಕೃತಿ ವೈಶ್ವಿಕ ನ್ಯಾಸ
ಏ. ಕಾರ್ಯಕಾರೀ ಸದಸ್ಯೆ : ಭಾರತೀಯ ಶಿಕ್ಷಣ ಮಂಡಳ (ಶಾಲಾ ಶಿಕ್ಷಣ)
ಒ. ಸದಸ್ಯೆ : ಅನುಸಂಧಾನ ಪ್ರಕೋಷ್ಠ (ಒಳಚಾವಡಿ), ಭಾರತೀಯ ಶಿಕ್ಷಣ ಮಂಡಳ
ಔ. ಸಂಸ್ಥಾಪಕ ಸದಸ್ಯೆ : ಅಂತರರಾಷ್ಟ್ರೀಯ ಬೌದ್ಧ ಮಹಾಸಂಘ ಹಾಗೂ ಇನ್ನಿತರ ವಿವಿಧ ಸಂಸ್ಥೆಗಳು
ಅಂ. ರಾಷ್ಟ್ರೀಯ ಸಂಗ್ರಹಾಲಯ ಸಂಸ್ಥೆಯ ಮಾಜಿ ಅಭ್ಯಾಗತ ಪ್ರಾಧ್ಯಾಪಕಿ
ಕ. ಇಂಗ್ಲೇಂಡ್‌ನಲ್ಲಿನ ಬ್ರಿಸ್ಟಲ್‌ ವಿದ್ಯಾಪೀಠದಲ್ಲಿ ಅತಿಥಿ ಪ್ರಾಧ್ಯಾಪಕಿ, ರಶ್ಯಾದಲ್ಲಿನ ಉರಲ ಫೆಡರಲ್‌ ವಿದ್ಯಾಪೀಠ ಮತ್ತು ನವದೆಹಲಿಯಲ್ಲಿನ ‘ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಈಉಓಅಂ)’ದಲ್ಲಿ ಸಲಹೆಗಾರರು.

೨. ಪ್ರಾ. ಡಾ. ಶಶಿಬಾಲಾ ಅವರು ಮಾಡಿದ ಕಾರ್ಯ

ಅ. ಜಾಗತಿಕ ಸ್ತರದಲ್ಲಿನ ಭಾರತದ ಸಾಂಸ್ಕೃತಿಕ ಯೋಗದಾನ, ವೈಶ್ವಿಕ ದೃಷ್ಟಿಕೋನದಿಂದ ಸಂಸ್ಕೃತ, ಭಾರತೀಯ ಕಲೆಗಳ ಇತಿಹಾಸ, ಬೌದ್ಧ ಧರ್ಮ ಹಾಗೂ ರಾಜಕೀಯ ಸೀಮೆಯ ಆಚೆಗೆ ಸಾಂಸ್ಕೃತಿಕ ಸಂಬಂಧವನ್ನು ದೃಢಪಡಿಸಲು ಅವರು ಕಾರ್ಯ ಮಾಡಿದರು.
ಆ. ನವದೆಹಲಿಯಲ್ಲಿನ ‘ನ್ಯಾಶನಲ್‌ ಮ್ಯುಝಿಯಮ್‌ ಇನ್ಸ್ಟಿಟ್ಯೂಟ್’ ಈ ಸ್ವಾಯತ್ತ (ಅಧೀನ) ವಿದ್ಯಾಪೀಠದಲ್ಲಿ ೧೫ ವರ್ಷ ‘ಕಲೆಯ ಇತಿಹಾಸ’ ಈ ವಿಷಯದಲ್ಲಿ ವ್ಯಾಖ್ಯಾನಗಳನ್ನು ನೀಡಿದ್ದಾರೆ.
ಇ. ಡಾ. ಶಶಿಬಾಲಾ ಅವರು ವಿವಿಧ ವಿಷಯಗಳಲ್ಲಿನ ೨೫ ಪುಸ್ತಕಗಳು ಮತ್ತು ೧೧೦ ಶೋಧ ನಿಬಂಧಗಳನ್ನು ಪ್ರಕಾಶನ ಮಾಡಿದ್ದಾರೆ. ಪರಿಷತ್ತುಗಳನ್ನು ಆಯೋಜಿಸುವುದು, ಪ್ರದರ್ಶನಗಳ ಆಯೋಜನೆ ಮಾಡುವುದು, ವಿದೇಶಗಳಲ್ಲಿ ಭಾರತೀಯ ಸಾಂಸ್ಕೃತಿಕ ಅವಶೇಷಗಳನ್ನು ಜೋಪಾನ ಮಾಡುವುದು, ಎಲ್ಲೆಡೆ ಪ್ರವಾಸ ಮಾಡಿ ಹಿಂದೂ ಸಂಸ್ಕೃತಿಯ ಪ್ರಸಾರ ಮಾಡುವುದು, ವಿವಿಧ ಪಠ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಿ ಅವುಗಳನ್ನು ಸಾದರಪಡಿಸುವುದು, ದೂರಚಿತ್ರವಾಣಿಯಲ್ಲಿ ಸಂದರ್ಶನ ನೀಡುವುದು, ಹೀಗೆ ವಿವಿಧ ಮಾಧ್ಯಮಗಳಿಂದ ಅವರು ಕಾರ್ಯನಿರತರಾಗಿದ್ದಾರೆ. ಭಾರತೀಯ ವಿದ್ಯಾ ಭವನಕ್ಕಾಗಿ ಸಂಸ್ಕೃತದಲ್ಲಿನ ‘ಸಮಗ್ರ ವಿಜ್ಞಾನ ಹಾಗೂ ಭಾರತೀಯ ಜ್ಞಾನ ಪರಂಪರೆ’ಯ ಆಧಾರದಲ್ಲಿ ಸಿದ್ಧಪಡಿಸಿದ ಪಠ್ಯಕ್ರಮ ‘ಎ.ಐ.ಸಿ.ಟಿ.ಇ.’ಯ (‘ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜ್ಯುಕೇಶನ್‌’ನ)ಮೂಲಕ ಮನ್ನಣೆ ಪಡೆದಿದೆ.

೩. ಸನ್ಮಾನ ಮತ್ತು ಪುರಸ್ಕಾರ

ಡಾ. ಶಶಿಬಾಲಾ ಅವರಿಗೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸನ್ಮಾನ ಮತ್ತು ಪುರಸ್ಕಾರಗಳು ಲಭಿಸಿವೆ. ಅವರಿಗೆ ಮಂಗೋಲಿಯಾದ ರಾಷ್ಟ್ರಪತಿಗಳ ಶುಭಹಸ್ತಗಳಿಂದ ‘ದ ಆರ್ಡ್‌ರ್‌ ಆಫ್‌ ದ ಪೋಲಾರ್‌ ಸ್ಟಾರ್’ ಎಂಬ ನಾಗರಿಕ ರಾಜ್ಯ ಪುರಸ್ಕಾರ ಲಭಿಸಿದೆ.