Bhendwal Buldhana Ghat Mandani : ಯುದ್ಧದಂತಹ ಪರಿಸ್ಥಿತಿಯಿಂದ ರಾಜನಿಗೆ (ಪ್ರಧಾನಿಗೆ) ತೀವ್ರ ಒತ್ತಡ ಮತ್ತು ಆತಂಕ ಇರಲಿದೆ !

  • ಭೆಂಡವಳ (ಬುಲಢಾಣಾ) ಇಲ್ಲಿನ ಘಟ ಮಂಡಣಿಯ ಭವಿಷ್ಯವಾಣಿ

  • ದೇಶದ ಆರ್ಥಿಕ ಪರಿಸ್ಥಿತಿ ಕಷ್ಟಕರ !

ಬುಲಡಾಣಾ – ದೇಶದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿರುತ್ತದೆ. ಯುದ್ಧದಂತಹ ಪರಿಸ್ಥಿತಿಯಿಂದ ರಾಜನಿಗೆ (ಪ್ರಧಾನಿಗೆ) ತೀವ್ರ ಒತ್ತಡ ಮತ್ತು ಆತಂಕ ಇರಲಿದೆ. ದೇಶದಲ್ಲಿ ವಿದೇಶಿಯರ ತೊಂದರೆ ಹೆಚ್ಚಾಗುತ್ತದೆ. ಪ್ರಳಯದ ಭಯ ಮತ್ತು ಆರ್ಥಿಕ ಹಿಂಜರಿತದ ಕಾರ್ಮೋಡ ಕವಿಯಲಿದೆ. ನೆರೆಯ ರಾಷ್ಟ್ರದೊಂದಿಗೆ ಯುದ್ಧವಾಗುವ ಸಾಧ್ಯತೆ ಕಡಿಮೆ ಇದೆ; ಆದರೆ ಯುದ್ಧವಾದರೆ, ಅದು ಮೂರನೇ ಮಹಾಯುದ್ಧದಂತೆ ಇರುತ್ತದೆ ಎಂದು ಮೇ 1 ರಂದು ಇಲ್ಲಿನ ಭೆಂಡವಾಳದ ಘಟ ಮಂಡಣಿಯ ಬಹುನಿರೀಕ್ಷಿತ ಭವಿಷ್ಯವಾಣಿಯಲ್ಲಿ ಹೇಳಲಾಗಿದೆ. ಚಂದ್ರಭಾನ ಮಹಾರಾಜರ ವಂಶಸ್ಥರಾದ ಸಾರಂಗಧರ ಮಹಾರಾಜ ಮತ್ತು ಪುಂಜಾಜಿ ಮಹಾರಾಜ ಇವರು ಈ ಭವಿಷ್ಯವಾಣಿಯನ್ನು ಬಹಿರಂಗಪಡಿಸಿದರು. ಈ ಸಂದರ್ಭದಲ್ಲಿ ಬುಲಡಾಣಾ ಜಿಲ್ಲೆಯಲ್ಲದೆ ಜಳಗಾಂವ, ಕಾನ್ಹಾ ದೇಶ ಮತ್ತು ಗಡಿ ಭಾಗದ ಮಧ್ಯಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಭವಿಷ್ಯದಲ್ಲಿ ಹೇಳಲಾದ ಅಂಶಗಳು :

1. ಮಳೆಗಾಲದ ಮೊದಲ ತಿಂಗಳು ಮತ್ತು ನಂತರದ ಮೂರು ತಿಂಗಳುಗಳಲ್ಲಿ ಉತ್ತಮ ಮಳೆಯಾಗಲಿದೆ. ಸಾಕಷ್ಟು ಅಕಾಲಿಕ ಮಳೆಯಾಗಲಿದೆ. ಆದ್ದರಿಂದ ರೈತರು ಮೊದಲ ತಿಂಗಳಲ್ಲಿ ಬಿತ್ತನೆಗೆ ಆತುರಪಡಬಾರದು.
2. ಈ ವರ್ಷ ಬೆಳೆಗಳ ಪ್ರಮಾಣ ಸಾಧಾರಣವಾಗಿದೆ. ಬೆಳೆಗಳ ನಾಶದ ಪ್ರಮಾಣ ಹೆಚ್ಚಾಗಿದೆ.
3. ದೇಶದಲ್ಲಿ ರೋಗಗಳ ಪ್ರಮಾಣ ಹೆಚ್ಚಾಗಿರುತ್ತದೆ.
4. ಅಕಾಲಿಕ ಮಳೆಯಿಂದ ಗೋಧಿ, ಜೋಳ, ಅಕ್ಕಿ ಮತ್ತು ಇತರ ಬೆಳೆಗಳಿಗೆ ಹಾನಿಯಾಗುತ್ತದೆ.
5. ದೇಶದ ರಾಜನು ಶಾಶ್ವತವಾಗಿರುತ್ತಾನೆ.
6. ಪಾಕಿಸ್ತಾನದೊಂದಿಗೆ ನಡೆಯುತ್ತಿರುವ ವಾಕ್ಸಮರವು ನಿಜವಾದ ಯುದ್ಧವಾಗಿ ಬದಲಾಗುವ ಸಾಧ್ಯತೆ ಕಡಿಮೆ ಇದೆ; ಆದರೆ ಯುದ್ಧವಾದರೆ ಅದು ಮಹಾಯುದ್ಧವಾಗುತ್ತದೆ.