ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯ್ನಿಂದ ಪಹಲ್ಗಾಮ್ ದಾಳಿಯ ಕುರಿತು ಘೋಷಣೆ
ನವದೆಹಲಿ – ಪಹಲ್ಗಾಮ್ನ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಲು ಸಿದ್ಧತೆ ನಡೆಸುತ್ತಿರುವಾಗ, ಕುಖ್ಯಾತ ರೌಡಿ ಲಾರೆನ್ಸ್ ಬಿಷ್ಣೋಯ್ ಕೂಡ ಈ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಹೇಳಿದ್ದಾನೆ. ಪ್ರಸ್ತುತ ಜೈಲಿನಲ್ಲಿರುವ ಬಿಷ್ಣೋಯ್ನ ಗ್ಯಾಂಗ್ನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಪೋಸ್ಟ್ ಹರಿದಾಡಿದೆ. ಅದರಲ್ಲಿ ಭಯೋತ್ಪಾದಕ ಹಫೀಜ್ ಸಯೀದ್ನ ಚಿತ್ರದ ಮೇಲೆ ಕ್ರಾಸ್ ಹಾಕಲಾಗಿದೆ. ಮುಂದೆ, “ಯಾವುದೇ ತಪ್ಪಿಲ್ಲದೆ ಮುಗ್ಧ ಜನರನ್ನು ಕೊಲ್ಲಲಾಗಿದೆ. ನಾವು ಶೀಘ್ರದಲ್ಲೇ ಇದಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ಅವರು ನಮ್ಮ ಜನರನ್ನು ಕಾನೂನುಬಾಹಿರವಾಗಿ ಕೊಂದಿದ್ದಾರೆ. ನಾವು ಅವರನ್ನು ಕಾನೂನುಬದ್ಧವಾಗಿ ಕೊಲ್ಲುತ್ತೇವೆ. ನಾವು ಪಾಕಿಸ್ತಾನದೊಳಗೆ ನುಗ್ಗಿ ಒಂದು ಲಕ್ಷಕ್ಕೆ ಸಮಾನನಾಗಿರುವ ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತೇವೆ,” ಎಂದು ಬರೆಯಲಾಗಿದೆ.