Minister Jaishankar Statement : ಪಹಲ್ಗಾಮ್‌ನಲ್ಲಿ ದಾಳಿ ಮಾಡಿದವರಿಗೆ ಶಿಕ್ಷೆಯಾಗಲೇಬೇಕು ! – ಡಾ. ಎಸ್. ಜೈಶಂಕರ

ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರೊಂದಿಗಿನ ಚರ್ಚೆಯ ನಂತರ ಜೈಶಂಕರ್ ಅವರ ಹೇಳಿಕೆ

ನವದೆಹಲಿ – ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರೊಂದಿಗೆ ಪಹಲ್ಗಾಮ್‌ನಲ್ಲಿನ ದಾಳಿಯ ಕುರಿತು ಚರ್ಚೆಯ ನಂತರ, ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮೇ 1 ರಂದು ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಭೇಟಿಯ ಬಗ್ಗೆ ಮಾಹಿತಿ ನೀಡಿದರು. ಜೈಶಂಕರ್ ಅವರು “ಈ ದಾಳಿಯ ಅಪರಾಧಿಗಳು, ಅವರಿಗೆ ಬೆಂಬಲ ನೀಡುವವರು ಮತ್ತು ದಾಳಿಯನ್ನು ಯೋಜಿಸಿದವರು ಎಲ್ಲರೂ ಶಿಕ್ಷೆಗೆ ಗುರಿಯಾಗಬೇಕು” ಎಂದು ಹೇಳಿದರು. ಈ ಪೋಸ್ಟ್‌ನಿಂದ ಭಾರತವು ಪಾಕಿಸ್ತಾನಕ್ಕೆ ಪಾಠ ಕಲಿಸುವ ನಿಲುವಿನಲ್ಲಿ ದೃಢವಾಗಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.