|
ಮಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಅವರು ಪಹಲ್ಗಾಮ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಹಿಂದೂಗಳು ತಮ್ಮ ರಕ್ಷಣೆಗಾಗಿ ಚಾಕುವನ್ನು ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಟ್ ಅವರು ಮಾತನಾಡುತ್ತಿದ್ದರು. ಮಹಿಳೆಯರು ಸಹ ತಮ್ಮ ಬ್ಯಾಗ್ ಗಳಲ್ಲಿ ಚಾಕುವನ್ನು ಇಟ್ಟುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ಭಟ್ ಅವರು ತಮ್ಮ ಮಾತು ಮುಂದುವರಿಸಿ, 6 ಇಂಚಿನ ಚಾಕುವನ್ನು ಇಟ್ಟುಕೊಳ್ಳಲು ಯಾವುದೇ ಅನುಮತಿಯ ಅಗತ್ಯವಿಲ್ಲ. ಯಾರಾದರೂ ಸಂಜೆಯ ನಂತರ ಹೊರಗೆ ಹೋದರೆ, ದಾಳಿಯಾಗುವ ಸಾಧ್ಯತೆ ಇರುತ್ತದೆ. ದಾಳಿ ಮಾಡುವವರನ್ನು ಬೇಡಿಕೊಳ್ಳುವ ಬದಲು ಅವರಿಗೆ ಚಾಕುವನ್ನು ತೋರಿಸಿದರೆ ಅವರು ಹೆದರಿ ಓಡಿಹೋಗುತ್ತಾರೆ ಎಂದು ಹೇಳಿದರು.
Manjeshwar, Kerala: "Had Hindus shown weapons during the #PahalgamTerroristAttack, it might have deterred the assailants," says senior RSS leader Kalladka Prabhakar Bhat, urging Hindus to carry 6-inch knives for self-defense, claiming no permit is needed. 🛡️
PC: @aajtak pic.twitter.com/rjuHaqP1bA
— Sanatan Prabhat (@SanatanPrabhat) May 1, 2025