ಹಿಂದೂ ಧರ್ಮ ಮತ್ತು ಹಿಂದುತ್ವದ ಕಾರ್ಯದ ಬಗ್ಗೆ ತೀವ್ರ ತಳಮಳ ಹೊಂದಿರುವ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿ!

‘ಮಡಿಕೇರಿಯ ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿ ಪಂಜಿತ್ತಡ್ಕ (ವಯಸ್ಸು ೪೭ ವರ್ಷ) ಅವರು ದೇವಿ ಭಕ್ತರಾಗಿದ್ದು, ಕಳೆದ ೧೪ ವರ್ಷಗಳಿಂದ ಸಾಧನೆ ಮಾಡುತ್ತಿದ್ದಾರೆ. 2021 ರಿಂದ ಎರಡು ವರ್ಷಗಳ ಕಾಲ ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷರಾಗಿದ್ದರು ನಂತರ ಜವಾಬ್ಧಾರಿಯಿಂದ ನಿವೃತ್ತರಾದರು. ಅವರು ಹಿಂದೂ ಕಾರ್ಯಕರ್ತರ ವಿವಿಧ ಕಾನೂನು ಪ್ರಕರಣಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಧರ್ಮ ಮತ್ತು ಹಿಂದುತ್ವದ ಕಾರ್ಯದ ಬಗ್ಗೆ ಅವರಿಗೆ ಬಹಳಷ್ಟು ತಳಮಳವಿದೆ. ೭ ವರ್ಷಗಳ ಹಿಂದೆ ಅವರು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬಂದರು. ಪರಾತ್ಪರ ಗುರು ಡಾಕ್ಟರವರ ಬಗ್ಗೆ ಅವರಿಗೆ ಅಪಾರ ಶ್ರದ್ಧೆ ಇದೆ.

ನ್ಯಾಯವಾದಿ ಪಿ. ಕೃಷ್ಣಮೂರ್ತಿ

ನಾನು ಚಿಕ್ಕಂದಿನಿಂದ ಹಿರಿಯರಿಂದ ರಾಮಾಯಣ, ಮಹಾಭಾರತದ ಕಥೆಗಳನ್ನು ಕೆಳುತ್ತಿದ್ದೆ. ಓದುವುದು ಬರೆಯುವುದು ಗೊತ್ತಾದ ನಂತರ ನಾನು ಮಹಾಪುರುಷರ, ಸ್ವಾತಂತ್ರಹೋರಾಟಗಾರರ ಕಥೆ ಎಲ್ಲ ಓದುತ್ತಿದ್ದೆ. ಹಾಗೆ ಬಾಲ್ಯದಿಂದಲೇ ನನಗೆ ಹಿಂದುತ್ವದ ಕಡೆಗೆ, ರಾಷ್ಟ್ರ ಧರ್ಮದ ಕಡೆಗೆ ಸೆಳೆತ ಇತ್ತು. ಬಹುಶಃ ಅದು ಭಗವಂತನ ಇಚ್ಚೆ, ಗುರುಕೃಪೆ ಇದ್ದ ಕಾರಣ ಈ ಕಡೆಗೆ ನಮಗೆ ಎಳೆದುಕೊಂಡು ಬಂದಿತು

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಹಿಂದುತ್ವದ ನಿರಪೇಕ್ಷ ಕಾರ್ಯ

೧. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿಂದುತ್ವನಿಷ್ಠರ ಪರವಾಗಿ ಮೊಕದ್ದಮೆ ನಡೆಸಿ ಗೆಲ್ಲುವುದು: ‘ಹಿಂದುತ್ವದ ಕಾರ್ಯದಲ್ಲಿ ನ್ಯಾಯವಾದಿ ಕೃಷ್ಣಮೂರ್ತಿ ಅವರ ಸಕ್ರಿಯ ಭಾಗಿತ್ವವಿರುತ್ತದೆ. ಒಮ್ಮೆ ಮಡಿಕೇರಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯ ಸಮಯದಲ್ಲಿ ಗಲಭೆ ಸಂಭವಿಸಿತ್ತು. ಈ ಪ್ರಕರಣದಲ್ಲಿ ಅನೇಕ ಹಿಂದೂಗಳನ್ನು ಸಿಲುಕಿಸಲಾಗಿತ್ತು. ನ್ಯಾಯವಾದಿ ಕೃಷ್ಣಮೂರ್ತಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿಂದುತ್ವನಿಷ್ಠರ ಪರವಾಗಿ ಮೊಕದ್ದಮೆಯನ್ನು ನಡೆಸಿ ಗೆದ್ದರು. ಈ ರೀತಿ ಹಿಂದುತ್ವನಿಷ್ಠರಿಗೆ ಯಾವುದೇ ತೊಂದರೆ ಬಂದರೂ, ಅವರು ತಕ್ಷಣ ಸಹಾಯ ಮಾಡುತ್ತಾರೆ.

೨. ಹಿಂದುತ್ವದ ಕಾರ್ಯಕ್ಕಾಗಿ ಹಣದ ತ್ಯಾಗ ಮಾಡುವ ವೃತ್ತಿ: ಹಿಂದುತ್ವದ ಕಾರ್ಯವನ್ನು ಮಾಡುವಾಗ ಅವರಿಗೆ ವಿವಿಧ ಮೊಕದ್ದಮೆಗಳಿಗಾಗಿ ‘ಮಡಿಕೇರಿಯಿಂದ ಬೆಂಗಳೂರಿಗೆ’ ಅಥವಾ ಇತರ ಸ್ಥಳಗಳಿಗೆ ವಾಹನದಲ್ಲಿ ಹೋಗಬೇಕಾಗುತ್ತದೆ. ಆಗ ಅವರು ಯಾರಿಂದಲೂ ಪ್ರಯಾಣಕ್ಕಾಗಿ ತಗಲುವ ವೆಚ್ಚವನ್ನು (ಖರ್ಚು) ತೆಗೆದುಕೊಳ್ಳುವುದಿಲ್ಲ. ಅವರು ಸ್ವತಃ ಹಣದ ತ್ಯಾಗ ಮಾಡುತ್ತಾರೆ.

೩. ಇತರರಿಗೆ ತಕ್ಷಣ ಸಹಾಯ ಮಾಡುವುದು: ಅನೇಕ ಬಾರಿ ಅವರು ಅಗತ್ಯವಿರುವ ಹಿಂದೂ ಕಾರ್ಯಕರ್ತರಿಗೆ ಧಾನ್ಯ ಮತ್ತು ವಸ್ತುಗಳನ್ನು ಅವರ ಮನೆಗೆ ಹೋಗಿ ನೀಡುತ್ತಾರೆ, ಒಂದು ಗೋಶಾಲೆಯ ಮುಖ್ಯಸ್ಥರು ನ್ಯಾಯವಾದಿ ಕೃಷ್ಣಮೂರ್ತಿ ಅವರಲ್ಲಿ ಸಹಾಯ ಕೇಳಿದ್ದರು. ಆಗ ಅವರು ತಕ್ಷಣ ಸಹಾಯ ಮಾಡಿದರು.

2. ವಿನಮ್ರ ಮತ್ತು ಅಹಂಶೂನ್ಯ ಸ್ಥಿತಿಯಲ್ಲಿ ನ್ಯಾಯಾಲಯದ ಕಾರ್ಯಕಲಾಪ ಮಾಡುವ ನ್ಯಾಯವಾದಿ ಕೃಷ್ಣಮೂರ್ತಿ!

೧. ಕಕ್ಷಿದಾರರ ಮೊಕದ್ದಮೆಯನ್ನು ಸ್ವಯಂಪ್ರೇರಣೆಯಿಂದ ಮತ್ತು ಆತ್ಮೀಯತೆಯಿಂದ ನಡೆಸುವುದು: ಯಾರಾದರೂ ಕಕ್ಷಿದಾರರು ನ್ಯಾಯವಾದಿ ಕೃಷ್ಣಮೂರ್ತಿ ಅವರಲ್ಲಿ ಮೊಕದ್ದಮೆ ವಹಿಸಿದರೆ, ಅವರು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಅವರು ಸ್ವಯಂಪ್ರೇರಣೆಯಿಂದ ಎಲ್ಲ ಕಾರ್ಯಗಳನ್ನು ಮಾಡುತ್ತಾರೆ ಮತ್ತು ಆತ್ಮೀಯತೆಯಿಂದ ಮೊಕದ್ದಮೆಯನ್ನು ನಡೆಸುತ್ತಾರೆ.

೨. ಅನುಭವಿ ನ್ಯಾಯವಾದಿಯಾಗಿದ್ದರೂ ಎಲ್ಲರೊಂದಿಗೆ ವಿನಯದಿಂದ ಮಾತನಾಡುವುದು: ನ್ಯಾಯವಾದಿ ಕೃಷ್ಣಮೂರ್ತಿ ಅವರಿಗೆ ಕಾನೂನು ಮತ್ತು ಧರ್ಮಕಾರ್ಯಗಳ ಬಗ್ಗೆ ಉತ್ತಮ ಅನುಭವವಿದೆ, ಆದರೂ ಅವರ ವರ್ತನೆಯಿಂದ ‘ಅಧಿಕಾರವಾಣಿ ಅಥವಾ ನನಗೆ ಹೆಚ್ಚು ತಿಳಿದಿದೆ’ ಎಂದು ಎಂದಿಗೂ ಅನಿಸುವುದಿಲ್ಲ. ಅವರು ಎಲ್ಲರೊಂದಿಗೆ ವಿನಯದಿಂದ ಮಾತನಾಡುತ್ತಾರೆ. ಅವರು ತಮ್ಮೊಂದಿಗೆ ಇರುವ ಕಿರಿಯ ನ್ಯಾಯವಾದಿಗಳ ಅಭಿಪ್ರಾಯವನ್ನು ಸಹ ವಿನಯದಿಂದ ತಿಳಿದುಕೊಳ್ಳುತ್ತಾರೆ. ಅವರ ಇಂತಹ ನಡವಳಿಕೆಯಿಂದ ನ್ಯಾಯವಾದಿಗಳಿಗೆ ಉತ್ಸಾಹವುಂಟಾಗಿ ಪ್ರೇರಣೆ ಸಿಗುತ್ತದೆ ಮತ್ತು ನ್ಯಾಯವಾದಿ ಕೃಷ್ಣಮೂರ್ತಿ ಅವರ ಬಗ್ಗೆ ಆಧಾರವೂ ಅನಿಸುತ್ತದೆ.

೩. ‘ಎಲ್ಲವೂ ಈಶ್ವರನ ಇಚ್ಛೆಯಿಂದಲೇ ಆಗುತ್ತದೆ’ ಎಂಬ ಭಾವದಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಕಾರಾತ್ಮಕ ಮತ್ತು ಶಾಂತವಾಗಿರುವುದು: ನ್ಯಾಯವಾದಿ ಕೃಷ್ಣಮೂರ್ತಿ ಅವರು ಪ್ರತಿಯೊಂದು ಪ್ರಸಂಗದಲ್ಲಿಯೂ ಶಾಂತ ಮತ್ತು ಸಕಾರಾತ್ಮಕವಾಗಿರುತ್ತಾರೆ. ಒಮ್ಮೆ ಒಂದು ಮೊಕದ್ದಮೆಯ ವಿಚಾರಣೆಗಾಗಿ ಅವರು ಮಡಿಕೇರಿಯಿಂದ ೨೭೫ ಕಿ.ಮೀ. ಪ್ರಯಾಣ ಮಾಡಿ ಬೆಂಗಳೂರಿಗೆ ಹೋಗಿದ್ದರು; ಆದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಇಲ್ಲದ ಕಾರಣ ವಿಚಾರಣೆ ರದ್ದಾಯಿತು. ಆ ಸಮಯದಲ್ಲಿ ಅವರಿಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರೊಂದಿಗೆ ಇದ್ದ ನ್ಯಾಯವಾದಿಗಳು, ‘‘ನಿಮಗೆ ಏನೂ ಅನಿಸಲಿಲ್ಲವೇ?’’ ಎಂದು ಕೇಳಿದಾಗ ಆಗ ನ್ಯಾಯವಾದಿ ಕೃಷ್ಣಮೂರ್ತಿ ಅವರು, ‘‘ಎಲ್ಲವೂ ಈಶ್ವರನ ಇಚ್ಛೆಯಿಂದಲೇ ಆಗುತ್ತದೆ.’’ ಎಂದು ಹೇಳಿದರು. ಈ ರೀತಿಯಾಗಿ ಯಾವುದೇ ಪ್ರಸಂಗಗಳು ಬಂದರೂ, ನ್ಯಾಯವಾದಿ ಕೃಷ್ಣಮೂರ್ತಿ ಅವರು ಆ ಪರಿಸ್ಥಿತಿಯನ್ನು ಸ್ವೀಕರಿಸುತ್ತಾರೆ. ಮನೆಯಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾದರೂ ಅವರು ಶಾಂತ ಮತ್ತು ಸಕಾರಾತ್ಮಕವಾಗಿರುತ್ತಾರೆ.

೪. ನ್ಯಾಯಾಧೀಶರು ಮತ್ತು ನ್ಯಾಯಾಲಯದ ಇತರ ವ್ಯಕ್ತಿಗಳು ನ್ಯಾಯವಾದಿ ಕೃಷ್ಣಮೂರ್ತಿ ಅವರನ್ನು ಗೌರವಿಸುವುದು: ನ್ಯಾಯವಾದಿ ಕೃಷ್ಣಮೂರ್ತಿ ಅವರು ನ್ಯಾಯಾಲಯದಲ್ಲಿ ವಾದಿಸಿದಾಗ, ಅಲ್ಲಿನ ವಾತಾವರಣ ಸಂಪೂರ್ಣ ನಿಶ್ಯಬ್ದವಾಗಿರುತ್ತದೆ. ನ್ಯಾಯಾಧೀಶರು ಅವರ ಮಾತನ್ನು ಶಾಂತವಾಗಿ ಕೇಳುತ್ತಾರೆ ಮತ್ತು ಅವರೊಂದಿಗೆ ಗೌರವದಿಂದ ವರ್ತಿಸುತ್ತಾರೆ. ನ್ಯಾಯಾಲಯದ ಇತರ ವ್ಯಕ್ತಿಗಳು ಸಹ ಅವರೊಂದಿಗೆ ಗೌರವದಿಂದ ವರ್ತಿಸುತ್ತಾರೆ.

Spiritual Journeys of Legal Support for Hindu Activists | Adv. Krishnamoorthy P

೧.ಇ. ಸಾಧನೆ ಮಾಡುವ ಮತ್ತು ಸಂತರ ಬಗ್ಗೆ ಭಾವವಿರುವ ಸಾಧಕ – ಕೃಷ್ಣಮೂರ್ತಿ

೧.ಇ.೧. ನಾಮಜಪ ಮತ್ತು ಪ್ರಾರ್ಥನೆ ಮಾಡುವುದು: ನ್ಯಾಯವಾದಿ ಕೃಷ್ಣಮೂರ್ತಿ ಅವರು ಪ್ರತಿದಿನ ನಾಮಜಪ ಮತ್ತು ಪ್ರಾರ್ಥನೆ ಮಾಡುತ್ತಾರೆ. ಅವರು ಎಲ್ಲಿಯೇ ಇದ್ದರೂ, ‘ಅವರ ನಾಮಜಪ ನಿರಂತರವಾಗಿ ನಡೆಯುತ್ತಿರುತ್ತದೆ’ ಎಂದು ಅವರು ಹೇಳುತ್ತಾರೆ.

ಪೂ. ರಮಾನಂದ ಇವರ ಬಗ್ಗೆ ನ್ಯಾಯವಾದಿ ಕೃಷ್ಣಮೂರ್ತಿಯವರ ಭಾವ

1. ಸನಾತನದ ಸಂತ ಪೂ. ರಮಾನಂದ ಗೌಡ ಅವರನ್ನು ನ್ಯಾಯವಾದಿ ಕೃಷ್ಣಮೂರ್ತಿ ಭೇಟಿಯಾದರು. ಆಗ ಅವರೊಂದಿಗೆ ಮಾತನಾಡುತ್ತಿರುವಾಗ ನ್ಯಾಯವಾದಿ ಕೃಷ್ಣಮೂರ್ತಿ ಅವರಿಗೆ ೨೦ ನಿಮಿಷಗಳ ಕಾಲ ನಿರಂತರ ಭಾವಜಾಗೃತಿ ಉಂಟಾಗುತ್ತಿತ್ತು. ಆದ್ದರಿಂದ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ.

2. ನ್ಯಾಯವಾದಿ ಕೃಷ್ಣಮೂರ್ತಿ ಅವರ ಹುಟ್ಟುಹಬ್ಬದ ದಿನ ಪೂ. ರಮಾನಂದ ನ್ಯಾಯವಾದಿ ಕೃಷ್ಣಮೂರ್ತಿ ಅವರು ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದರು. ಆಗ ನ್ಯಾಯವಾದಿ ಕೃಷ್ಣಮೂರ್ತಿ ಅವರಿಗೆ ಬಹಳ ಕೃತಜ್ಞತೆ ಉಂಟಾಗಿ ಅವರ ಭಾವಜಾಗೃತಿ ಆಯಿತು. ಅವರು ಪೂ. ನ್ಯಾಯವಾದಿ ಕೃಷ್ಣಮೂರ್ತಿ ಅವರಿಗೆ ಹೇಳಿದರು, ‘‘ಇಂದು ನನಗೆ ಅನೇಕರು ದೂರವಾಣಿ ಕರೆ ಮಾಡಿದರು; ಆದರೆ ನಿಮ್ಮೊಂದಿಗೆ ಮಾತನಾಡಿ ಸಿಕ್ಕಿದ ಆನಂದ ನನಗೆ ಸಿಕ್ಕಿರಲಿಲ್ಲ.’’

೩. ನ್ಯಾಯವಾದಿ ಕೃಷ್ಣಮೂರ್ತಿ ಅವರ ಮನಸ್ಸಿನಲ್ಲಿ ಪರಾತ್ಪರ ಗುರು ಡಾಕ್ಟರವರ ಬಗ್ಗೆ ಇರುವ ಕೃತಜ್ಞತಾ ಭಾವ!

ಅ. ‘ಗುರುದೇವ’ ಎಂಬ ಶಬ್ದ ಕೇಳಿದ ನಂತರ ನ್ಯಾಯವಾದಿ ಕೃಷ್ಣಮೂರ್ತಿ ಅವರು ಭಾವಸ್ಥಿತಿಯನ್ನು ಅನುಭವಿಸುವುದು: ನ್ಯಾಯವಾದಿ ಕೃಷ್ಣಮೂರ್ತಿ ಅವರು ಯಾವಾಗಲೂ ಪರಾತ್ಪರ ಗುರು ಡಾಕ್ಟರವರ ಬಗ್ಗೆ ಮಾತನಾಡುತ್ತಾರೆ. ‘ಗುರುದೇವ’ ಎಂಬ ಶಬ್ದವನ್ನು ಕೇವಲ ಕೇಳಿದ ತಕ್ಷಣವೇ ಅವರ ಭಾವ ಜಾಗೃತವಾಗುತ್ತದೆ. ಆ ಸಮಯದಲ್ಲಿ ಭಾವಜಾಗೃತ ಸ್ಥಿತಿಯಿಂದ ಅವರಿಗೆ ಮಾತನಾಡಲು ಸಹ ಸಾಧ್ಯವಾಗುವುದಿಲ್ಲ.

ಆ. ರಾಮನಾಥಿ ಆಶ್ರಮದಲ್ಲಿರುವಾಗ ನ್ಯಾಯವಾದಿ ಕೃಷ್ಣಮೂರ್ತಿ ಅವರು ಅರಿವಿಲ್ಲದ ಸ್ಥಿತಿಯಲ್ಲಿ ‘ತಮ್ಮ ಪ್ರಾಣವು ಕತ್ತಲೆಯಲ್ಲಿ ಹೋಗುತ್ತಿದೆ’ ಎಂದು ಅನುಭವಿಸುವುದು ಮತ್ತು ನಂತರ ‘ಗುರುದೇವರು ತಮ್ಮ ಕೈ ಹಿಡಿದು ಮೇಲೆ ಎತ್ತಿದರು’ ಎಂದು ಕಾಣುವುದು: ಒಮ್ಮೆ ನ್ಯಾಯವಾದಿ ಕೃಷ್ಣಮೂರ್ತಿ ಅವರು ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಹೋಗಿದ್ದರು. ಆಗ ಅವರಿಗೆ ಜ್ವರ ಬಂದಿತ್ತು. ಅವರ ಎದೆ ನೋಯಲು ಪ್ರಾರಂಭಿಸಿತು ಮತ್ತು ಅವರು ಅರಿವಿಲ್ಲದ ಸ್ಥಿತಿಗೆ ಹೋದರು. ಆ ಸ್ಥಿತಿಯಲ್ಲಿರುವಾಗ ‘ನ್ಯಾಯವಾದಿ ಕೃಷ್ಣಮೂರ್ತಿ ಅವರಿಗೆ ತಮ್ಮ ಪ್ರಾಣ ಕತ್ತಲೆಯಲ್ಲಿ ಹೋಗುತ್ತಿದೆ’ ಎಂದು ಕಾಣಿಸುತ್ತಿತ್ತು. ನಂತರ ‘ಗುರುದೇವರು ಕೈ ಹಿಡಿದರು ಮತ್ತು ಅವರನ್ನು ಮೇಲೆ ಕರೆದುಕೊಂಡು ಬಂದರು’ ಎಂಬ ದೃಶ್ಯ ಅವರಿಗೆ ಕಾಣಿಸಿತು. ಪ್ರಜ್ಞೆ ಬಂದ ನಂತರ ಅವರು ಹೇಳಿದರು, ‘‘ಪರಾತ್ಪರ ಗುರು ಡಾಕ್ಟರವರು ನನಗೆ ಪುನರ್ಜನ್ಮ ನೀಡಿದರು.’’ ಅವರಿಗೆ ಗುರುದೇವರ ಬಗ್ಗೆ ಬಹಳ ಕೃತಜ್ಞತೆ ಉಂಟಾಯಿತು. ಈ ಪ್ರಸಂಗವನ್ನು ನೆನಪಿಸಿಕೊಂಡಾಗಲೂ ಅವರಿಗೆ ಕೃತಜ್ಞತೆ ಉಂಟಾಗುತ್ತದೆ.

ಇ. ‘‘ನನ್ನಿಂದ ಮಾಡಲ್ಪಡುವ ಪ್ರತಿಯೊಂದು ಕೃತಿಯನ್ನೂ ನಾನು ಮಾಡುತ್ತಿಲ್ಲ, ಗುರುದೇವರು (ಪರಾತ್ಪರ ಗುರು ಡಾಕ್ಟರವರೇ) ಮಾಡುತ್ತಿದ್ದಾರೆ.’’

ನ್ಯಾಯವಾದಿಗಳಿಗೆ ಅವರು ನೀಡಿದ ಸಂದೇಶ

ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯವಾದಿಗಳು ಧೈರ್ಯಶಾಲಿ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವುದು ಅವಶ್ಯಕ! – ನ್ಯಾಯವಾದಿ ಕೃಷ್ಣಮೂರ್ತಿ


ನಾವು ಸ್ವಾರ್ಥವನ್ನು ಬಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ಉದ್ದೇಶವನ್ನು ಸಾಧಿಸಲು ಹೋರಾಡಬೇಕು. ಇದನ್ನು ಮಾಡಲು ನಾವು ನ್ಯಾಯಾಂಗ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಅದರ ಪರಿಣಾಮಕಾರಿಯಾಗಿ ಉಪಯೋಗಿಸಬೇಕು. ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯವಾದಿಗಳು ಧೈರ್ಯಶಾಲಿ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಬೇಕು.

ಪ್ರತಿಯಂದು ಕೃತಿ ಮಾಡುವಾಗ ಸಾಧನೆಯ ಅನುಸಾರ ಮಾಡುವುದು

೧. ‘ನಾನು ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಅಥವಾ ನ್ಯಾಯಾಲಯದಲ್ಲಿಯೂ ನಾಮಜಪ ಮಾಡುತ್ತೇನೆ. ದೇವರ ಮೇಲೆ ನಮಗೆ ಅಷ್ಟು ಶ್ರದ್ಧೆ ಇರಬೇಕು, ನಮ್ಮ ಮೇಲೆ ಯಾವುದೇ ಸಂಕಟ ಬಂದರೆ, ದೇವರು ನಮಗೆ ಸಹಾಯ ಮಾಡಬೇಕು. ನಮ್ಮ ಯಜಮಾನರು ಭಗವಂತ. ದೇವರ ಭಕ್ತನಿಗೆ ಚಿಂತಿಸುವ ಅವಶ್ಯಕತೆ ಇಲ್ಲ. ನಿರಂತರ ನಾಮಜಪ ಮಾಡುತ್ತ ನ್ಯಾಯಾಲಯದ ಕೆಲಸಗಳನ್ನು ಮಾಡಬೇಕು. ದೇವರ ನಾಮಜಪ ಮಾಡುತ್ತ ಕಾರ್ಯ ಮಾಡುವುದರಿಂದ ದೇವರು ನಮಗೆ ಶಕ್ತಿ ನೀಡುತ್ತಾನೆ. ದೇವರು ನಿರಂತರ ನಮ್ಮೊಂದಿಗೆ ಇರುವ ಅನುಭವ ನಮಗೆ ಬರುತ್ತದೆ. ಸುಸ್ತಾದಾಗ ನಾನು ಭಗವಾನ್ ಶ್ರೀಕೃಷ್ಣನನ್ನು ಸ್ಮರಿಸಿದಾಗ, ತಂಪಾದ ಗಾಳಿ ಬೀಸಲು ಪ್ರಾರಂಭಿಸುತ್ತದೆ. ಈ ಮಾಧ್ಯಮದಿಂದ ಭಗವಂತನು ನನಗೆ ತನ್ನ ಅಸ್ತಿತ್ವದ ಅನುಭವ ನೀಡುತ್ತಾನೆ. ಸಾಧನೆ ಮತ್ತು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯಿಂದ ನಮ್ಮ ವ್ಯಕ್ತಿತ್ವದಲ್ಲಿ ಹೊಳಪು ಬರುತ್ತದೆ. ಸಾಧನೆಯಿಂದ ನನ್ನ ಕೋಪ ಕಡಿಮೆಯಾಗಿದೆ; ಆದರೆ ಕ್ಷಾತ್ರವೃತ್ತಿ ಮೊದಲಿನಂತೆಯೇ ಉಳಿದಿದೆ. ಕಾನೂನಿನ ಅಧ್ಯಯನದೊಂದಿಗೆ ಸಾಧನೆ ಮಾಡುತ್ತ ನ್ಯಾಯಾಲಯದ ಹೋರಾಟ (ಕೇಸ್) ಮಾಡಿದರೆ ಕೆಲಸಕ್ಕೆ ವೇಗ ಸಿಗುತ್ತದೆ ಮತ್ತು ಯಶಸ್ಸು ಸಿಗುತ್ತದೆ. ಭಗವಂತ ನಮ್ಮೊಂದಿಗಿದ್ದಾರೆ. ದೇವರಿಗೆ ಪ್ರಾರ್ಥನೆ ಮಾಡಿ ಮನೆಯಿಂದ ಹೊರಗೆ ಹೋಗಬೇಕು. ಸಾಧನೆ ಮಾಡುವುದರಿಂದ ‘ಭಗವಂತ ನಿರಂತರ ನಮ್ಮೊಂದಿಗೆ ಇದ್ದಾನೆ’ ಎಂಬ ಅನುಭವವಾಗುತ್ತದೆ. ‘ಸಾಧಕ ನ್ಯಾಯವಾದಿ’, ‘ಹಿಂದೂ ನ್ಯಾಯವಾದಿ’ ಆಗಿ ನಾವು ನ್ಯಾಯಾಲಯದ ಹೋರಾಟ ಮಾಡಬೇಕಾಗಿದೆ.

೨. ‘ಒಂದು ಮೊಕದ್ದಮೆಯ ವಿಚಾರಣೆ ಮುಗಿದ ನಂತರ ನಾನು ನನ್ನ ಸಹೋದ್ಯೋಗಿಯೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಹಿಂದಿನಿಂದ ಬಂದ ಒಂದು ಟ್ರಕ್ ನಮ್ಮ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದಿತು. ಇದರಲ್ಲಿ ನಮ್ಮ ಕಾರಿನ ಎಡಭಾಗ ಕತ್ತರಿಸಲ್ಪಟ್ಟಿತು. ಈ ಅಪಘಾತ ಎಷ್ಟು ದೊಡ್ಡದಾಗಿತ್ತು ಎಂದರೆ, ಕಾರನ್ನು ನೋಡಿದ ಯಾರೊಬ್ಬರಿಗೂ ಅದರಲ್ಲಿ ಇದ್ದ ಯಾವುದೇ ವ್ಯಕ್ತಿ ಬದುಕಿರಲು ಸಾಧ್ಯವಿಲ್ಲ ಎಂದು ಅನಿಸಿತ್ತು; ಆದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದ ನಾನು ಮತ್ತು ನನ್ನ ಸಹೋದ್ಯೋಗಿ ಸುರಕ್ಷಿತವಾಗಿ ಹೊರ ಬಂದೆವು. “ಹೀಗೆ ಗುರುದೇವರು ಪ್ರತಿಯೊಬ್ಬ ಸಾಧಕನನ್ನೂ ರಕ್ಷಿಸುತ್ತಾರೆ. ಅವರ ಕಾಳಜಿ ವಹಿಸುತ್ತಾರೆ. ಆದ್ದರಿಂದ ನಾವು ಸದಾ ಭಗವಂತನ ಸಾನ್ನಿಧ್ಯದಲ್ಲಿರಬೇಕು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಲ್ಲ ಸಾಧಕರಿಗೂ ಪ್ರೀತಿಯಿಂದ ಹೇಳುತ್ತಾರೆ. ತಮ್ಮ ಸ್ವಂತ ಆಚರಣೆಯಿಂದ ಅವರು ಸಾಧಕರನ್ನು ರೂಪಿಸುತ್ತಾರೆ.”

ಈಶ್ವರನ ಬಗ್ಗೆ ಭಾವವುಳ್ಳ ಮತ್ತು ನಿರಪೇಕ್ಷವಾಗಿ ಧರ್ಮಕಾರ್ಯ ಮಾಡುವ ನ್ಯಾಯವಾದಿ ಪಿ. ಕೃಷ್ಣಮೂರ್ತಿಯವರ ಕುರಿತಾದ ಸೂಕ್ಷ್ಮ ಪ್ರಯೋಗ!

೧೮ ಜೂನ್ ೨೦೨೩ ರಂದು ಜಾಗತಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೊದಲ ಅಧಿವೇಶನದಲ್ಲಿ ‘ಕರ್ನಾಟಕದ ನ್ಯಾಯವಾದಿ ಪಿ. ಕೃಷ್ಣಮೂರ್ತಿಯವರನ್ನು ನೋಡಿದಾಗ ಏನು ಅನಿಸುತ್ತದೆ?’ ಎಂಬ ಸೂಕ್ಷ್ಮ ಪ್ರಯೋಗವನ್ನು ತೆಗೆದುಕೊಳ್ಳಲಾಯಿತು. ಈ ಸಮಯದಲ್ಲಿ ಸಭಾಂಗಣದಲ್ಲಿದ್ದ ಬಹುತೇಕ ಹಿಂದುತ್ವನಿಷ್ಠರಿಗೆ ನ್ಯಾಯವಾದಿ ಪಿ. ಕೃಷ್ಣಮೂರ್ತಿಯವರನ್ನು ನೋಡಿದಾಗ ಆನಂದವುಂಟಾಯಿತು. ಗಾಜಿಯಾಬಾದ್ (ಉತ್ತರ ಪ್ರದೇಶ) ದ ದಸ್ನಾ ಪೀಠದ ಯತಿ ಮಾಂ ಚೇತನಾನಂದ ಸರಸ್ವತಿಯವರು ‘ಪಿ. ಕೃಷ್ಣಮೂರ್ತಿಯವರ ಮುಖದಲ್ಲಿ ಸಾಧನೆಯ ತೇಜಸ್ಸಿದೆ. ಅವರು ಧರ್ಮನಿಷ್ಠರು. ಅವರು ನಿಷ್ಠೆಯಿಂದ ಧರ್ಮಕಾರ್ಯ ಮಾಡುತ್ತಾರೆ’, ಎಂದು ಅವರನ್ನು ನೋಡಿದಾಗ ಅನಿಸುತ್ತಿದೆ ಎಂದು ಹೇಳಿದರು.


ಸಂತರು ಮಾಡಿದ ಗೌರವ

ಪೂ. ರಮಾನಂದ ಗೌಡ

“ನ್ಯಾಯವಾದಿ ಕೃಷ್ಣಮೂರ್ತಿಯವರು ಭಗವಂತನ ಅನುಸಂಧಾನದಲ್ಲಿರುತ್ತಾರೆ. ಅವರ ನಾಮಜಪ ಸದಾ ನಡೆಯುತ್ತಿರುತ್ತದೆ. ಪ್ರಯಾಣದ ಸಮಯದಲ್ಲಿ ಅವರು ವಾಹನದಲ್ಲಿ ಇಂದೋರ್ (ಮಧ್ಯಪ್ರದೇಶ) ದ ಶ್ರೇಷ್ಠ ಸಂತರು ಮತ್ತು ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಹಾಕುತ್ತಾರೆ. ಭಜನೆಗಳನ್ನು ಕೇಳುವಾಗ ಅವರಿಗೆ ಭಾವಾಶ್ರು ಬರುತ್ತದೆ. ಧರ್ಮಕಾರ್ಯಕ್ಕಾಗಿ ಅವರು ಸ್ವಂತ ಖರ್ಚು ಮಾಡಿ ವಿವಿಧ ಗ್ರಾಮಗಳಿಗೆ ಹೋಗಿ ಹಿಂದುತ್ವನಿಷ್ಠರಿಗೆ ಕಾನೂನು ಸಹಾಯ ಮಾಡುತ್ತಾರೆ. ಅವರ ಕಾರ್ಯ ನಿರಪೇಕ್ಷವಾಗಿರುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಹಿಂದುತ್ವದ ಕಾರ್ಯಕ್ಕಾಗಿ ಅವರು ನ್ಯಾಯವಾದಿಗಳ ಸಂಘಟನೆಯನ್ನು ಮಾಡುತ್ತಿದ್ದಾರೆ. ವ್ಯಷ್ಟಿ ಸಾಧನೆ ಮತ್ತು ಧರ್ಮಪ್ರಸಾರದ ಸಮಷ್ಟಿ ಕಾರ್ಯವನ್ನು ಮಾಡುವ ಅವರು ಒಂದು ಉತ್ತಮ ಉದಾಹರಣೆಯಾಗಿದ್ದಾರೆ.

ಕೆಲವು ತಿಂಗಳ ಹಿಂದೆ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ‘ಆ ಸಮಯದಲ್ಲಿ ಭಗವಾನ್ ಶ್ರೀಕೃಷ್ಣ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಅವರನ್ನು ರಕ್ಷಿಸಿದರು’, ಎಂಬುದು ಅವರ ಭಾವ ಆಗಿದೆ. ಇವರು ಒಬ್ಬ ಧರ್ಮವೀರರಾಗಿದ್ದಾರೆ.”

ಅವರಿಗೆ ಬಂದ ಅನುಭೂತಿ

೧. ‘ವರ್ಷ ೨೦೦೦ ರಲ್ಲಿ ತೊಂದರೆಯಾದಾಗ ಒಬ್ಬ ಸ್ನೇಹಿತ ವಿಷ್ಣುಸಹಸ್ರನಾಮವನ್ನು ಹೇಳಲು ಹೇಳಿದ ನಂತರ ನಾನು ಅದನ್ನು ಹೇಳಿದೆ. ಒಮ್ಮೆ ಕೇರಳದ ‘ಅಮ್ಮ’ ದೇವಸ್ಥಾನದಲ್ಲಿ ಲಲಿತಾ ಸಹಸ್ರನಾಮವನ್ನು ಮುಗಿಸುತ್ತಿರುವಾಗ ಕುಂಕುಮ ಬೇಕಿತ್ತು. ಆ ಸಮಯದಲ್ಲಿ ಶರಣಾಗತ ಭಾವದಿಂದ ದೇವಿಗೆ ಮೊರೆ ಇಟ್ಟ ತಕ್ಷಣ ಅರ್ಚಕರು ಬಂದು ಕುಂಕುಮಾರ್ಚನೆ ಮಾಡಲು ಅವಕಾಶ ಮಾಡಿಕೊಟ್ಟರು.

೨. ಮಂಗನ ಮರಿ ತನ್ನ ತಾಯಿಯನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಆದ್ದರಿಂದ ತಾಯಿಗೆ ಎಲ್ಲೆಡೆ ಹಾರಾಡಲು ಸಾಧ್ಯವಾಗುತ್ತದೆ. ಮರಿಗೆ ತನ್ನ ತಾಯಿಯ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ. ಅದೇ ರೀತಿ ನಮ್ಮ ಶ್ರದ್ಧೆ ಭಗವಂತನ ಮೇಲೆ ಇರಬೇಕು.”