ಕಾಶ್ಮೀರದಲ್ಲಿ ಬರೀ 27 ಹಿಂದೂಗಳು ಹತ್ಯೆ, ಇಲ್ಲಿ 2 ಸಾವಿರದ 700 ಹಿಂದೂಗಳ ಹತ್ಯೆ ಆಗಲಿದೆ ! – ಸಾಹಿವಾನ್ ಅನ್ಸಾರಿ

ಬಿಹಾರ: ಛಾಪ್ರಾದಲ್ಲಿ ಸಾಹಿವಾನ್ ಅನ್ಸಾರಿಯಿಂದ ಹಿಂದೂಗಳಿಗೆ ಬೆದರಿಕೆ

ಛಾಪ್ರಾ (ಬಿಹಾರ) – ಹಣ್ಣು ಮಾರಾಟಗಾರ ಸಾಹಿವಾನ್ ಅನ್ಸಾರಿ ಎಂಬ ವ್ಯಕ್ತಿ ಹಣ್ಣುಗಳನ್ನು ಖರೀದಿಸಲು ಬಂದ ಅಮರಿಂದರ ಸಿಂಗ್ ಅವರಿಗೆ ಹಣದ ವ್ಯವಹಾರದ ಕುರಿತು ಬೆದರಿಕೆ ಹಾಕಿದ್ದು, ಕಾಶ್ಮೀರದಲ್ಲಿ 27 ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ. ಇಲ್ಲಿ 2,700 ಹಿಂದೂಗಳನ್ನು ಕೊಲ್ಲಲಾಗುವುದು ಎಂದು ಧಮಕಿ ಹಾಕಿದನು.

1. ಬಾಳೆಹಣ್ಣು ಖರೀದಿಸುವಾಗ ಈ ವಾಗ್ವಾದ ಪ್ರಾರಂಭವಾಯಿತು. ಅಮರಿಂದರ ಸಿಂಗ್ ಬಾಳೆಹಣ್ಣು ಖರೀದಿಸಲು ಅನ್ಸಾರಿ ಅಂಗಡಿಗೆ ಹೋದಾಗ ಚಿಲ್ಲರೆ ಹಣ ನೀಡಲಿಲ್ಲವೆಂದು ಅನ್ಸಾರಿ ಅವರನ್ನು ನಿಂದಿಸಿದನು. ವಾಗ್ವಾದ ಹೆಚ್ಚಾದಾಗ, ಅನ್ಸಾರಿ ತನ್ನ ಸ್ನೇಹಿತರನ್ನು ಕರೆಸಿ ಅಮರಿಂದರ ಸಿಂಗ್ ನನ್ನು ಥಳಿಸಿದನು. ಇಷ್ಟಕ್ಕೇ ನಿಲ್ಲದ ಅನ್ಸಾರಿ ಹಿಂದೂಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಅಮರಿಂದರ ಸಿಂಗ್ ಬಳಿಕ ಪೊಲೀಸರಿಗೆ ದೂರು ನೀಡಿದರು.

2. ಈ ಪ್ರಕರಣದಲ್ಲಿ ಅನ್ಸಾರಿ ಮತ್ತು ಅವನ ಸಹಚರರಾದ ಮಿಂಟು ಅನ್ಸಾರಿ, ಸಾಬೀರ ಅನ್ಸಾರಿ, ಸೆರಾಜ್ ಅನ್ಸಾರಿ, ಖುರ್ಷಿದ ಅನ್ಸಾರಿ, ಶಂಷಾದ ಅನ್ಸಾರಿ, ಜಾವೇದ ಹಾಸ್ಮಿ ಮತ್ತು ಇತರ 20 ಜನರ ವಿರುದ್ಧ ದೂರು ದಾಖಲಿಸಲಾಗಿದೆ.

3. ಈ ಆರೋಪಿಗಳು ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಅಮರಿಂದರ ಸಿಂಗ್ ಅವರು ಮಿಂಟು ಅನ್ಸಾರಿ ತಮ್ಮ ಜೇಬಿನಿಂದ 9,500 ರೂಪಾಯಿಗಳನ್ನು ಕಸಿದುಕೊಂಡನೆಂದು ಮತ್ತು ಸೆರಾಜ ಅನ್ಸಾರಿ ತನ್ನ ಕುತ್ತಿಗೆಯಿಂದ ಚಿನ್ನದ ಸರವನ್ನು ಕಿತ್ತುಕೊಂಡನೆಂದು ಸಹ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತವು ಸ್ವತಂತ್ರವಾದಾಗಿನಿಂದ, ಜಾತ್ಯತೀತ ಆಡಳಿತಗಾರರು ಅವರನ್ನು ದೊಡ್ಡ ಪ್ರಮಾಣದಲ್ಲಿ ಓಲೈಸಿದ ಕಾರಣ ಅವರು ದುರಹಂಕಾರಿಗಳಾಗಿದ್ದಾರೆ. ಅವರನ್ನು ಹದ್ದುಬಸ್ತಿನಲ್ಲಿಡಲು ಕಠಿಣ ಶಿಕ್ಷೆ ವಿಧಿಸುವುದು ಅವಶ್ಯಕ!