
ಗಾಣಗಾಪುರ, ಏಪ್ರಿಲ್ ೩೦ (ವಾರ್ತೆ.) – ಇಲ್ಲಿನ ಶ್ರೀ ದತ್ತ ಮಂದಿರ ಅಂದರೆ ಶ್ರೀ ನೃಸಿಂಹ ಸರಸ್ವತಿ ನಿರ್ಗುಣ ಪಾದುಕ ಮಂದಿರವು ಕಾಶಿ ವಿಶ್ವನಾಥ ಮಂದಿರದಂತೆ ವ್ಯಾಪಕವಾಗಿ ಅಭಿವೃದ್ಧಿ ಹೊಂದಬೇಕು. ಈ ಪ್ರದೇಶದಲ್ಲಿ ಸುಸಜ್ಜಿತ ಕಾರಿಡಾರ್ ನಿರ್ಮಾಣದೊಂದಿಗೆ ಭಕ್ತರ ವಸತಿ, ವಾಹನ ನಿಲುಗಡೆ, ದರ್ಶನ ವ್ಯವಸ್ಥೆ, ಭೀಮಾ-ಅಮರಜ ಸಂಗಮ ಸ್ಥಳದ ಸ್ವಚ್ಛತೆ ಮತ್ತು ಘಾಟ್ ನಿರ್ಮಾಣ ಮುಂತಾದ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗ್ರಾಮಸ್ಥರು, ಸಾಮಾಜಿಕ ಕಾರ್ಯಕರ್ತರು ಮತ್ತು ಭಕ್ತರು ಏಪ್ರಿಲ್ ೧೭, ೨೦೨೫ ರಿಂದ ಮಂದಿರದ ಎದುರು ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಈ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಹೋರಾಟದ ಮುಂದಿನ ಭಾಗವಾಗಿ ಮೇ ೧ ರಂದು ಗ್ರಾಮಸ್ಥರು ಮತ್ತು ಭಕ್ತರಿಂದ ‘ಗಾಣಗಾಪುರ ಬಂದ್’ಗೆ ಕರೆ ನೀಡಲಾಗಿದೆ. ಈ ದಿನ ಬೆಳಿಗ್ಗೆ ೬ ರಿಂದ ರಾತ್ರಿ ೧೦ ರವರೆಗೆ ಸುತ್ತಮುತ್ತಲಿನ ಅಂಗಡಿಗಳು ಮತ್ತು ಹೋಟೆಲ್ಗಳು ಮುಚ್ಚಲ್ಪಡುತ್ತವೆ.