ಭಾಗ್ಯನಗರ – ಅಕ್ಷಯ ತೃತೀಯೆಯ ಶುಭ ಮುಹೂರ್ತದಲ್ಲಿ, ಅಂದರೆ ಏಪ್ರಿಲ್ ೩೦ ರಂದು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ತಿರುಪತಿಯ ಶ್ರೀ ಬಾಲಾಜಿಯ ದರ್ಶನ ಪಡೆದರು.

ಈ ಸಮಯದಲ್ಲಿ ಅವರು ಗೋವಾದಲ್ಲಿ ಮೇ ೧೭ ರಿಂದ ೧೯ ರವರೆಗೆ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಆಮಂತ್ರಣ ಪತ್ರಿಕೆಯನ್ನು ತಿರುಪತಿ ಬಾಲಾಜಿಯ ಚರಣಗಳಿಗೆ ಅರ್ಪಿಸಿ ಆಶೀರ್ವಾದ ಪಡೆದರು.
On the auspicious occasion of Akshaya Tritiya, ShriChitshakti (Mrs) Anjali Gadgil, one of the Spiritual Heirs of Sachchidananda Parabrahman (Dr) Jayant Athavale ji, sought the blessings of Tirupati Venkateswara Swamy for the upcoming Sanatan Rashtra Shanknaad Mahotsav (17–19 May… pic.twitter.com/1i9jqvE1Vq
— Sanatan Sanstha (@SanatanSanstha) April 30, 2025
ಈ ಸಂದರ್ಭದಲ್ಲಿ ಶ್ರೀಚಿತ್ಶಕ್ತಿ (ಸೌ.) ಗಾಡಗಿಳ ಅವರು ಶ್ರೀ ಬಾಲಾಜಿಯ ಚರಣಗಳಿಗೆ ‘ಈ ಸಮಾರಂಭವು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿ ಮತ್ತು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದು ಆಶೀರ್ವದಿಸಬೇಕು’ ಎಂದು ಪ್ರಾರ್ಥಿಸಿದರು.