ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಮೋಹನ ಮಂಘನಾನಿ ಅವರಿಗೆ ಗೋವಾದಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಆಮಂತ್ರಣ !

ಎಡದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ, ಡಾ. ಮೋಹನ ಮಂಘನಾನಿ ಮತ್ತು ಪೂ. ರಮಾನಂದ ಗೌಡ

ಬೆಂಗಳೂರು – ಗೋವಾದಲ್ಲಿ ಮೇ ೧೭ ರಿಂದ ೧೯ ರವರೆಗೆ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕಾಗಿ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಮೋಹನ ಮಂಘನಾನಿ ಅವರಿಗೆ ಇತ್ತೀಚೆಗೆ ಆಮಂತ್ರಣ ನೀಡಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಇಲ್ಲಿನ ನ್ಯೂ ಹಾರಿಜನ್ ಕಾಲೇಜಿನಲ್ಲಿ ಡಾ. ಮಂಘನಾನಿ ಅವರಿಗೆ ಈ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಸನಾತನದ ಸಂತ ಪೂ. ರಮಾನಂದ ಗೌಡ ಉಪಸ್ಥಿತರಿದ್ದರು.