200 ವರ್ಷಗಳಷ್ಟು ಹಳೆಯ ಸ್ಮಶಾನ ಭೂಮಿಯನ್ನು ಜಾನುವಾರು ಮಾರುಕಟ್ಟೆಯನ್ನಾಗಿ ಪರಿವರ್ತನೆ
ಢಾಕಾ (ಬಾಂಗ್ಲಾದೇಶ) – ನಿರ್ಮಾಣ ಹಂತದಲ್ಲಿದ್ದ ಒಂದು ಹಿಂದೂ ದೇವಾಲಯ ಮತ್ತು 200 ವರ್ಷ ಹಳೆಯ ಸ್ಮಶಾನವನ್ನು ಪ್ರಾಣಿಗಳ ಮಾರುಕಟ್ಟೆಗೆ ಸ್ಥಳಾವಕಾಶ ಕಲ್ಪಿಸಲು ಕೆಡವಲಾಯಿತು. ಈ ಘಟನೆ ಮೈಮನ್ಸಿಂಗ್ ಜಿಲ್ಲೆಯ ಉಚ್ಚಾಖಿಲ ಒಕ್ಕೂಟದಲ್ಲಿ ನಡೆದಿದೆ.
DEPLORABLE! Hindu Mandir DEMOLISHED & 200-yr-old cemetery to be a cattle market in Bangladesh! 🇧🇩 😡
Angry Hindus protest as hundreds of attacks hit them post-Sheikh Hasina.
Arrests, @iskcon ban attempts & ‘sedition’ charges on Chinmoy Krishna Das Prabhu reveal alleged… pic.twitter.com/ueF44W3qv4
— Sanatan Prabhat (@SanatanPrabhat) April 30, 2025
1. ಈಶ್ವರಗಂಜ್ ಉಪಜಿಲ್ಲೆಯ ಆಡಳಿತ ಅಧಿಕಾರಿ ಮುಹಮ್ಮದ್ ಇರ್ಷಾದುಲ್ ಅಹ್ಮದ್ ಅವರು ಹಿಂದೂ ದೇವಾಲಯ ಮತ್ತು ಸ್ಮಶಾನವನ್ನು ಬಲವಂತವಾಗಿ ಕೆಡವಿದ್ದಾರೆ, ಎಂದು ಹಿಂದೂಗಳು ಆರೋಪಿಸಿದ್ದಾರೆ. ಸ್ಮಶಾನವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದಾಗಿಯೂ ಘೋಷಣೆ ಮಾಡಲಾಗಿದೆ.
2. ಈ ಸ್ಮಶಾನ ಮತ್ತು ದೇವಾಲಯ ನಮ್ಮ ಶ್ರದ್ಧೆಯ ಸಂಕೇತಗಳಾಗಿವೆ ಮತ್ತು ಯಾವುದೇ ಬೆಲೆ ತೆತ್ತಾದರೂ ಅವುಗಳನ್ನು ಸ್ಥಳಾಂತರಿಸಲು ಬಿಡುವುದಿಲ್ಲ, ಎಂದು ಹಿಂದೂ ನಾಯಕ ಪಿಂಟು ಚೌಧರಿ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಸನಾತನ ಧರ್ಮದ ಅನುಯಾಯಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
3. ಮತ್ತೊಬ್ಬ ಸ್ಥಳೀಯ ಹಿಂದೂ ನಾಯಕ ಪರೇಶ್ ಸಾಹಾ ಇವರು ಮಾತನಾಡಿ, ಇಸ್ಲಾಮಿಸ್ಟ್ ಗುಂಪೊಂದು ಹಿಂದೂಗಳನ್ನು ಪ್ರದೇಶದಿಂದ ಓಡಿಸುವುದಾಗಿ ಬೆದರಿಕೆ ಹಾಕುತ್ತಿದೆ; ಆದರೆ ಸರಕಾರ ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಎಂದು ಹೇಳಿದರು.
4. ಬಾಂಗ್ಲಾದೇಶದ ಪೂಜಾ ಉಜಾಪನ ಮೋರ್ಚಾದ ಕಾರ್ಯದರ್ಶಿ ಬಿಜೋಯ್ ಮಿತ್ರ ಶುಭೋ ಮಾತನಾಡಿ, ಹಿಂದೂಗಳು ಈಗಾಗಲೇ ಧ್ವಂಸವನ್ನು ನಿಲ್ಲಿಸುವಂತೆ ಮನವಿ ನೀಡಿದ್ದರು; ಆದರೂ ಸಹ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ, ಎಂದು ಹೇಳಿದರು.
5. ಆದಾಗ್ಯೂ, ಅಧಿಕಾರಿ ಮೊಹಮ್ಮದ್ ಎರ್ಷಾದುಲ್ ಅಹ್ಮದ್ ಅವರು ‘ಈ ಘಟನೆ ಅಜಾಗರೂಕತೆಯಿಂದ ಘಟಿಸಿದೆ’ ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನ ಸಹಿತ ಬಾಂಗ್ಲಾದೇಶಕ್ಕೆ ಪಾಠ ಕಲಿಸಲು ಭಾರತ ಯಾವಾಗ ಧೈರ್ಯ ಮಾಡುವುದು? |