Pakistan Global Terror Hub : ವಿಶ್ವಸಂಸ್ಥೆಯಲ್ಲಿ ಪುನಃ ಪಾಕಿಸ್ತಾನದ ಬೆಂಡೆತ್ತಿದ ಭಾರತ

ಜಾಗತಿಕ ಭಯೋತ್ಪಾದಕರ ಆಶ್ರಯತಾಣ ಪಾಕಿಸ್ತಾನ !

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೆಯ ಉಲ್ಲೇಖ

ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ರಾಯಭಾರಿ ಯೋಜನ ಪಟೇಲ್

ನ್ಯೂಯಾರ್ಕ್ (ಅಮೇರಿಕ) – ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸಂದರ್ಶನವೊಂದರಲ್ಲಿ ಭಯೋತ್ಪಾದನೆಗೆ ಬೆಂಬಲ ಮತ್ತು ಹಣ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆಸಿಫ್ ಅವರು ಭಯೋತ್ಪಾದಕ ಸಂಘಟನೆಗಳಿಗೆ ಹೇಗೆ ಬೆಂಬಲ ನೀಡಿದರು?, ಭಯೋತ್ಪಾದಕರಿಗೆ ಹೇಗೆ ತರಬೇತಿ ನೀಡಿದರು?, ಹಣ ನೀಡಿದರು ಎಂಬುದರ ಕುರಿತು ಅವರು ಹೇಳಿದ್ದನ್ನು ಇಡೀ ಜಗತ್ತು ನೋಡಿದೆ. ಅವರ ಈ ಒಪ್ಪಿಗೆಯಿಂದ ಯಾರಿಗೂ ಆಶ್ಚರ್ಯವಾಗಲಿಲ್ಲ; ಏಕೆಂದರೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದಕರ ಆಶ್ರಯತಾಣವೆಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಹೇಳಿದ ಭಾರತವು, ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಪಾಕಿಸ್ತಾನ ಭಯೋತ್ಪಾದಕರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ತಿಳಿಸಿತು.

1. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಯೋಜನಾ ಪಟೇಲ ಅವರು ಮಾತು ಮುಂದುವರೆಸಿ, ಅಂತರರಾಷ್ಟ್ರೀಯ ವೇದಿಕೆಯ ಒಂದು ನಿರ್ದಿಷ್ಟ ನಿಯೋಗವು ಯಾವಾಗಲೂ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ವೇದಿಕೆಯಿಂದ ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. 2008 ರಲ್ಲಿ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಪಹಲ್ಗಾಮ್ ದಾಳಿಯಲ್ಲಿ ಅತಿ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತವು ಹಲವಾರು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ಬಲಿಯಾಗುತ್ತಿದೆ. ಪಹಲ್ಗಾಮ್ ಘಟನೆಯ ನಂತರ ಜಗತ್ತಿನಾದ್ಯಂತದ ದೇಶಗಳು ಮತ್ತು ಅವರ ನಾಯಕರಿಂದ ದೊರೆತ ಬೆಂಬಲಕ್ಕಾಗಿ ಭಾರತವು ಕೃತಜ್ಞವಾಗಿದೆ.

2. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸಂದರ್ಶನವೊಂದರಲ್ಲಿ, ಅಮೇರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಒತ್ತಡದಿಂದ ಪಾಕಿಸ್ತಾನವು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವಂತಹ ಕೆಟ್ಟ ಕೆಲಸ ಮಾಡಿದೆ. ಅದರ ಬೆಲೆಯನ್ನು ಪಾಕಿಸ್ತಾನವು 3 ದಶಕಗಳಿಂದ ತೆರುತ್ತಿದೆ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಭಾರತ ನೂರಾರು ಬಾರಿ ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇದನ್ನು ಹೇಳಿದೆ; ಆದರೆ ಇದರಿಂದ ಏನೂ ಸಾಧಿಸಲು ಸಾಧ್ಯವಾಗಿಲ್ಲ; ಏಕೆಂದರೆ ಪಾಕಿಸ್ತಾನವು ಇಂತಹ ವಿಷಯಗಳಿಗೆ ಸೊಪ್ಪು ಹಾಕುವುದಿಲ್ಲ ಮತ್ತು ಜಗತ್ತು ಸಹ ಭಾರತದ ಇಂತಹ ಮಾತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದು ವಾಸ್ತವ. ಆದ್ದರಿಂದ ಭಾರತವು ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ಶಾಶ್ವತವಾಗಿ ತಿಳಿಸಬೇಕು!